Karnataka news paper

ಪಾತಾಳಕ್ಕೆ ಕುಸಿದ ಪಚ್ಚಬಾಳೆ ಬೆಲೆ; ಸಂಕಷ್ಟಕ್ಕೆ ಸಿಲುಕಿದ ಬಾಳೆ ಬೆಳೆಗಾರರು


ಬಾಲವೆಂಕಟೇಶ್‌ ಕೆ.ಎಂ
ಕೋಲಾರ: ಕೆಜಿಎಫ್‌ ತಾಲೂಕಿನ್ಯಾದ್ಯಂತ ರೈತರು 600 ಎಕರೆ ಪ್ರದೇಶದಲ್ಲಿ ಜಿ-9 ತಳಿಯ ಪಚ್ಚಬಾಳೆ ಬೆಳೆದಿದ್ದು, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.

ಕ್ಯಾಸಂಬಳ್ಳಿ ಹೋಬಳಿಯ ಕಂಗ್ಲಾಡಹಳ್ಳಿ, ಮೋತಕಪಲ್ಲಿ, ರಾಮಸಾಗರ ಲಕ್ಷ್ಮೀಸಾಗರ, ಕೆಂಪಾಪುರ, ದೊಡ್ಡಕಂಬಳ್ಳಿ, ಬೇತಮಂಗಳ ಹೋಬಳಿ ಗ್ರಾಮಗಳಲ್ಲಿ ಪಚ್ಚ ಬಾಳೆ ಬೆಳೆಯಲಾಗಿದೆ, ಮಾರುಕಟ್ಟೆಯಲ್ಲಿ ವಾಡಿಕೆಯಂತೆ ಕೆಜಿ.ಒಂದಕ್ಕೆ 8 ರಿಂದ10 ರೂಪಾಯಿಗೆ ಮಾರಾಟವಾಗುತ್ತಿದ್ದ ಪಚ್ಚಬಾಳೆ ಈಗ ಬಾಳೆ ಪ್ರತಿ ಕೆಜಿಗೆ.4 ರಿಂದ 5 ರೂಪಾಯಿಗಳ ದರವಿದೆ, ಇದರಿಂದ ರೈತರು ಹಾಕಿದ ಬಂಡವಾಳ ಕೈಸೇರದಂತಾಗಿದೆ.
ಬಡವರು ಬದನೆಕಾಯಿ ತಿನ್ನಂಗಿಲ್ಲ; ತರಕಾರಿ ಬೆಲೆ ಕೇಳಿದ್ರೆ ತಲೆ ಗಿರ್‌ ಅನ್ಸುತ್ತೆ! ಬೆಲೆ ಏರಿಕೆಯಿಂದ ರೈತರಿಗೆ ಸಂತಸ
ಒಂದು ಎಕರೆ ಪ್ರದೇಶದಲ್ಲಿ 900 ಬಾಳೆ ಗಿಡಗಳನ್ನು ಬೆಳೆಯಬಹುದು, ನರ್ಸರಿಯಲ್ಲಿ ಒಂದು ಸಸಿಗೆ 110 ರಿಂದ 120 ದರವಿದೆ, ಆಳುಗಳಿಗೆ ಕೂಲಿ, ಔಷದ ಸಿಂಪಡಣೆ, ಗೊಬ್ಬರ ಸೇರಿದಂತೆ ಒಂದು ಗಿಡಕ್ಕೆ 160 ರಿಂದ 170 ವರೆಗೆ ವೆಚ್ಚವಾಗುತ್ತದೆ, ಎಕರೆಗೆ 1.5 ಲಕ್ಷ ಖರ್ಚು ಬರುತ್ತದೆ. ಪ್ರತಿ ಗೊನೆ ಸರಾಸರಿ 30 ರಿಂದ 35 ಕೆ.ಜಿ. ತೂಗುತ್ತದೆ. ಈಗಿರುವ ಬೆಲೆಯಿಂದ ಪ್ರತಿ 150 ರೂಪಾಯಿಗಳ ಸಹ ಸಿಗುತ್ತಿಲ್ಲ, ಬೆಲೆ ಕುಸಿತ ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಪ್ರಸ್ತುತ ಬಾಳೆ ಹಣ್ಣಿನ ಮಾರುಕಟ್ಟೆಯಲ್ಲಿ ಜಿ-9 (ಪಚ್ಚಬಾಳೆ) ಕೆಜಿ.5 ರೂ, ಏಲಕ್ಕಿ ಕೆಜಿ.ಗೆರೂ. ರೂ.20, ನೇಂದ್ರ ಕೆಜಿಗೆ ರೂ.29, ರಸ ಬಾಳೆ ಕೆಜಿ.ಗೆ 40, ಚಂದ್ರ ಬಾಳೆ ಕೆಜಿಗೆ 20 ದರವಿದೆ. ಬಾಳೆ ಬೆಳೆಯಲು ಖರ್ಚು ಅಧಿಕವಾಗಿದ್ದು, ಹಾಕಿದ ಬಂಡವಾಳ ಕೈ ಸೇರುತ್ತಿಲ್ಲ, ಬೆಲೆ ಕುಸಿತದಿಂದಾಗಿ ತೋಟಗಳಲ್ಲಿ ಕಟಾವು ಮಾಡದೆ ಹಾಗೇ ಬಿಡಲಾಗಿದೆ, ಗಿಡದಲ್ಲೆಯೇ ಹಣ್ಣಾಗಿ ಕೆಳಗೆ ಬೀಳೂತ್ತಿವೆ, ಕೆಲವಡೆ ಗೊನೆ ಬಿಟ್ಟಿರುವ ಬಾಳೆ ತೋಟವನ್ನೇ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡಿಸಿದ್ದಾರೆ ಎಂದು ಪಚ್ಚ ಬಾಳೆ ಬೆಳೆದ ರೈತ ರಮೇಶ್‌ ತಿಳಿಸಿದರು.
ಉಳ್ಳಾಗಡ್ಡಿಗೆ ಹೆಚ್ಚಾಯ್ತು ಬೆಲೆ; ಉತ್ತರ ಕರ್ನಾಟಕದಲ್ಲಿ ಈರುಳ್ಳಿ ಸಸಿಗೆ ಭಾರೀ ಡಿಮ್ಯಾಂಡ್‌
ನಗರ ಪ್ರದೇಶದ ಬಾಳೆ ಮಂಡಿಗಳಲ್ಲಿ ಪಚ್ಚೆ ಬಾಳೆಯನ್ನು ಕೇಳುವವರಿಲ್ಲ, ಇನ್ನು ಹಾಪ್‌ಕಾಮ್ಸಗಳಿಗೆ ಬಾಳೆ ಮಾರಟ ಮಾಡಲು ಎರಡು ತಿಂಗಳ ಮೊದಲೇ ಇಂಡೆಂಟ್‌ ಹಾಕಿಸಿಕೊಳ್ಳಬೇಕು, 1ರಿಂದ 2 ಟನ್‌ ಮಾತ್ರ ರೈತರಿಂದ ಖರೀದಿಸುತ್ತಾರೆ. ಹೊರಗಡೆ ಜಿಲ್ಲೆಗಳಿಂದಲೂ ಬೆಂಗಳೂರು ಮಾರುಕಟ್ಟೆಗೆ ಬಾಳೆ ಬರುತ್ತಿದೆ, ಬಾಳೆ ಖರೀದಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಮೋತಕಪಲ್ಲಿ ರೈತ ಶ್ರೀರಾಂ ಒತ್ತಾಯಿಸಿದರು.

ಬಾಳೆ ಖರೀದಿಗೆ ವ್ಯವಸ್ಥೆ
ಕೋವಿಡ್‌ ಬಿಕ್ಕಟ್ಟು ನೆರೆ ಹಾವಳಿ, ಚಳಿಗಾಲದ ಕಾರಣ ಕೇರಳ, ಆಂಧ್ರಪ್ರದೇಶ ಸೇರಿದಂತೆ ಹೊರರಾಜ್ಯಗಳಿಗೆ ವಿಕೋಟ ಮತ್ತು ಕೆಜಿಎಫ್‌ ಮಾರುಕಟ್ಟೆಯಿಂದ ಬಾಳೆ ರಫ್ತಾಗುವುದು ನಿಂತಿದೆ, ಕಟಾವು ಹಂತದಲ್ಲಿರುವ ಬಾಳೆಗೋನೆ ಖರೀದಿದಾರರ ವಿಳಾಸ ನೀಡಿ ಮಾರುಕಟ್ಟೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದೆಂದು ಸಹಾಯಕ ತೋಟಗಾರಿಕೆ ಅಧಿಕಾರಿ ಡಾ.ಶಿವರೆಡ್ಡಿ ತಿಳಿಸಿದರು.



Read more