ನನಗೆ ಸಚಿವನೆಂಬ ಅಹಂಕಾರವಿಲ್ಲ. ಏಕೆಂದರೆ ನಾನು ಜನತೆಯ ವಿನಮ್ರ ಸೇವಕನಾಗಿದ್ದೇನೆ. ತಾಲೂಕಿನ ಸಮಗ್ರವಾದ ಅಭಿವೃದ್ಧಿಯ ಬೇಡಿಕೆಯನ್ನು ಮುಂದಿಟ್ಟುಕೊಂಡು ಯಡಿಯೂರಪ್ಪ ಅವರ ಸಮಕ್ಷಮದಲ್ಲಿ ಬಿಜೆಪಿ ಸೇರಿದ ನಾನು ಏತ ನೀರಾವರಿ ಯೋಜನೆಗಳು, ಜಲಜೀವನ ಮಿಷನ್ ಕುಡಿಯುವ ನೀರಿನ ಯೋಜನೆ ಸೇರಿದಂತೆ 1700 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸಿ ತಂದಿದ್ದು ಇನ್ನಾರು ತಿಂಗಳಲ್ಲಿಅಭಿವೃದ್ಧಿ ಕೆಲಸ ಕಾರ್ಯಗಳು ಜನರ ಕಣ್ಣಿಗೆ ಎದ್ದು ಕಾಣಲಿವೆ ಎಂದು ಸಚಿವರು ಮಾಹಿತಿ ನೀಡಿದರು.
ನಾನು ಸಿದ್ಧರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಹಲವಾರು ಮುಖ್ಯಮಂತ್ರಿಗಳ ಕಾರ್ಯವೈಖರಿಯನ್ನು ಹತ್ತಿರದಿಂದ ಕಂಡಿದ್ದೇನೆ. ಕೊಟ್ಟ ಮಾತನ್ನು ತಪ್ಪದೆ ನುಡಿದಂತೆ ನಡೆಯುವ ನಾಯಕರು ರಾಜ್ಯದಲ್ಲಿಯಾರಾದರೂ ಇದ್ದರೆ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತ್ರ ಎಂದು ಸಚಿವ ನಾರಾಯಣಗೌಡ ಹೇಳಿದರು.
ಮೈಸೂರು ಜಿಲ್ಲಾಹಾಲು ಒಕ್ಕೂಟದ ನಿರ್ದೇಶಕರಾದ ಎಸ್.ಸಿ.ಅಶೋಕ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರವು ಅಸ್ತಿತ್ವಕ್ಕೆ ಬರಲು ಸಚಿವ ನಾರಾಯಣಗೌಡರ ಶ್ರಮ ಮತ್ತು ತ್ಯಾಗವು ಅಪಾರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾರಾಯಣಗೌಡರ ಮೇಲೆ ವಿಶ್ವಾಸ ಇಟ್ಟು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರ ಸ್ಥಾನವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಸಕ್ಕರೆ ನಾಡಲ್ಲಿ ಚುನಾವಣೆಗೂ ಮುನ್ನವೇ ಟಾಕ್ ವಾರ್ ಶುರು : ಮಧು ಮಾದೇಗೌಡ VS ಶಿವರಾಮೇಗೌಡ
ನಾನೆಲ್ಲೇ ಹೋದರೂ ಮಂಡ್ಯ ಜಿಲ್ಲೆಯವನು ನಾನು ಎನ್ನಲು ಹೆಮ್ಮೆ ಮತ್ತು ಅಭಿಮಾನವಿದೆ ಎಂದು ಹೇಳುವ ಸಚಿವ ನಾರಾಯಣಗೌಡರು ಕೆ.ಆರ್.ಪೇಟೆ ತಾಲೂಕಿನ ಅಭಿವೃದ್ಧಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಕೆಲಸ ಮಾಡುತ್ತಿರುವ ರಾಜಕಾರಣಿಯಾಗಿದ್ದಾರೆ ಎಂದು ಸಚಿವ ನಾರಾಯಣಗೌಡ ಹೇಳಿದರು.
Read more
[wpas_products keywords=”deal of the day sale today offer all”]