Karnataka news paper

ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಶುರು: ಏನಿರುತ್ತೆ..? ಏನಿರಲ್ಲ..? ಅನಗತ್ಯವಾಗಿ ಓಡಾಡಿದರೆ ಕ್ರಿಮಿನಲ್‌ ಕೇಸ್‌..!


ಹೈಲೈಟ್ಸ್‌:

  • ಕರ್ಫ್ಯೂ ವೇಳೆ ತುರ್ತು ಸಂದರ್ಭ ಮತ್ತು ಚಿಕಿತ್ಸೆ ಕಾರ್ಯಗಳಿಗೆ ಮಾತ್ರ ಓಡಾಡಲು ಅವಕಾಶ
  • ಅಗತ್ಯ ವಸ್ತುಗಳ ಖರೀದಿಸುವ ನೆಪದಲ್ಲಿ ಅನಗತ್ಯವಾಗಿ ಓಡಾಡುವುದು ಸರಿಯಲ್ಲ
  • ಅನಗತ್ಯವಾಗಿ ಓಡಾಡುವವರ ವಾಹನ ಜಪ್ತಿ ಮಾಡುವುದರೊಂದಿಗೆ ಕ್ರಿಮಿನಲ್‌ ಪ್ರಕರಣ..!

ಬೆಂಗಳೂರು: ಕೋವಿಡ್‌ ನಿಯಂತ್ರಿಸುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 10 ಗಂಟೆಗೆ ಪ್ರಾರಂಭವಾಗಿದ್ದು, ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಇರಲಿದೆ. ಕರ್ಫ್ಯೂ ಅವಧಿಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಓಡಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸರು ಸಜ್ಜಾಗಿದ್ದಾರೆ.

ಕರ್ಫ್ಯೂ ವೇಳೆ ತುರ್ತು ಸಂದರ್ಭ ಮತ್ತು ಚಿಕಿತ್ಸೆ ಕಾರ್ಯಗಳಿಗೆ ಮಾತ್ರ ಓಡಾಡಲು ಅವಕಾಶ ನೀಡಲಾಗಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡು ಹಾಗೂ ಅಗತ್ಯ ವಸ್ತುಗಳ ಖರೀದಿಸುವ ನೆಪದಲ್ಲಿ ಅನಗತ್ಯವಾಗಿ ಓಡಾಡುವುದು ಸರಿಯಲ್ಲ. ಈ ರೀತಿ ಓಡಾಡುವವರ ವಾಹನ ಜಪ್ತಿ ಮಾಡುವುದರೊಂದಿಗೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಪೊಲೀಸ್‌ ಇಲಾಖೆ ಎಚ್ಚರಿಕೆ ನೀಡಿದೆ.

ಸರಕಾರಿ ನೌಕರರು, ಕೈಗಾರಿಕೆ ಮತ್ತು ಖಾಸಗಿ ಕಂಪನಿಯ ನೌಕರರು, ವೈದ್ಯಕೀಯ ವಿಭಾಗದ ನೌಕರರು ಕೆಲಸಕ್ಕೆ ತೆರಳಲು ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಹಾಗೂ ನಗರ ಸಾರಿಗೆ ಬಸ್‌ಗಳು ಸಂಚರಿಸಲಿವೆ. ಗುರುತಿನ ಚೀಟಿ ಹೊಂದಿರುವುದನ್ನು ಪರಿಶೀಲಿಸಿ ಬಸ್‌ ಹತ್ತಿಸಿಕೊಳ್ಳುವಂತೆ ಬಸ್‌ ನಿರ್ವಾಹಕರು ಹಾಗೂ ಚಾಲಕರಿಗೆ ಸಾರಿಗೆ ಸಂಸ್ಥೆ ಸೂಚಿಸಿದೆ.

ಬೆಂಗಳೂರು ಸೇರಿದಂತೆ ನಗರ ಪ್ರದೇಶ ಹಾಗೂ ಪ್ರಮುಖ ಹೈವೇಗಳಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿ ತಪಾಸಣೆ ನಡೆಸಲಿದ್ದಾರೆ. ಜಾಲಿ ರೈಡ್‌ ಹೊರಟವರ ವಾಹನಗಳನ್ನು ವಶಕ್ಕೆ ಪಡೆದು ಕೇಸು ದಾಖಲಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.

ವೀಕೆಂಡ್ ಕರ್ಫ್ಯೂ: ಅಗತ್ಯವಿದ್ದರೆ ಮಾತ್ರ ಕೆಎಸ್‌ಆರ್‌ಟಿಸಿ ಸಂಚಾರ
ಏನಿರುತ್ತೆ..?

– ಹಾಲಿನ ಬೂತ್‌, ತರಕಾರಿ – ಹಣ್ಣಿನ ಮಂಡಿಗಳು, ದಿನಸಿ ಅಂಗಡಿಗಳು, ಮಾಂಸದ ಅಂಗಡಿಗಳು, ಮೀನು ಮಾರುಕಟ್ಟೆಗಳು, ಬೀದಿ ಬದಿ ವ್ಯಾಪಾರಿ ಎಂದಿನಂತಿರಲಿದೆ.

– ಆಸ್ಪತ್ರೆಗಳು, ನರ್ಸಿಂಗ್‌ ಹೋಂ, ಮೆಡಿಕಲ್‌ ಶಾಪ್‌, ನ್ಯಾಯಬೆಲೆ ಅಂಗಡಿಗಳು ಕಾರ್ಯ ಚಟುವಟಿಕೆ ನಡೆಸಲಿವೆ.

– ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಿ ಬರಲು ಅವಕಾಶ ಮಾಡಿಕೊಡಲಾಗಿದೆ

– ಎಲ್ಲ ಪದಾರ್ಥಗಳನ್ನು 24/7 ಹೋಂ ಡೆಲಿವರಿ ಅವಕಾಶ

– ಪೆಟ್ರೋಲ್‌ ಬಂಕ್‌ಗಳು, ಕೃಷಿ ಮಾರುಕಟ್ಟೆಗಳು ತೆರೆಯಲಿವೆ

– ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ

– ದಿನಪತ್ರಿಕೆ ವಿತರಣೆ ಹಾಗೂ ಮಾರಾಟ ಎಂದಿನಂತೆ ಇರಲಿದೆ

– ಐಟಿ – ಬಿಟಿ ಕಂಪನಿಗಳು, ಕೈಗಾರಿಕೆಗಳ ಚಟುವಟಿಕೆ ಯಥಾಸ್ಥಿತಿಯಲ್ಲಿರಲಿದೆ.

– ದಾಖಲೆ ಹೊಂದಿರುವ ಪ್ರವಾಸಿಗರ ಸಂಚಾರಕ್ಕೆ ಅವಕಾಶವಿದೆ

– ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶ

ಮೇಕೆದಾಟು ಪಾದಯಾತ್ರೆ ನಿಲ್ಲಿಸೋಕೆ ಸರ್ಕಾರದ ಕುತಂತ್ರ, ಬೇಕಂತಲೇ ವೀಕೆಂಡ್ ಕರ್ಫ್ಯೂ: ಧ್ರುವನಾರಾಯಣ್
ಏನಿರಲ್ಲ..?

* ಆಟೋ, ಟ್ಯಾಕ್ಸಿ , ಚಿತ್ರ ಮಂದಿರಗಳು, ಮಾಲ್‌ಗಳು, ವಾಣಿಜ್ಯ ಮಳಿಗೆಗಳು, ವಾಹನ ಸರ್ವೀಸ್ ಸೆಂಟರ್‌ಗಳು, ಈಜು ಕೊಳಗಳು, ಜಿಮ್‌, ಪಬ್‌, ಕ್ಲಬ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌, ಬಾರ್‌ಗಳು, ಸಾರ್ವಜನಿಕ ಗ್ರಂಥಾಲಯಗಳು, ಉದ್ಯಾನ ವನಗಳು, ಬ್ಯೂಟಿ ಪಾರ್ಲರ್‌ಗಳು, ಸಲೂನ್‌ ಸೇರಿದಂತೆ ಇತರೆ ಮಳಿಗೆಗಳು ತೆರೆಯುವುದಿಲ್ಲ.

ಇವರ ಸಂಚಾರಕ್ಕೆ ಅವಕಾಶ

ಐಟಿ – ಬಿಟಿ ಕಂಪನಿಗಳು, ಖಾಸಗಿ ಕಂಪನಿಗಳ ಉದ್ಯೋಗಿಗಳು ಕೆಲಸಕ್ಕೆ ತೆರಳಲು ಕಂಪನಿಯಿಂದ ನೀಡಿರುವ ಗುರುತು ಚೀಟಿಗಳನ್ನು ತೋರಿಸಿ ಹೋಗಬಹುದು. ಇನ್ನು ವೈದ್ಯಕೀಯ ಸಿಬ್ಬಂದಿ ಉದ್ಯೋಗಕ್ಕೆ ತೆರಳಲು ಅನುವು ಮಾಡಿಕೊಡಲಾಗಿದೆ. ಆಸ್ಪತ್ರೆಗೆ ತೆರಳುವವರು ಅಗತ್ಯ ದಾಖಲೆಗಳನ್ನು ತೋರಿಸಿ ಹೋಗಬೇಕಾಗುತ್ತದೆ. ರೋಗಿಯ ಜತೆ ಹೋಗುವವರು ದಾಖಲೆ ತೋರಿಸುವುದರ ಜತೆ ಕಡ್ಡಾಯವಾಗಿ ಎರಡು ಡೋಸ್‌ ವ್ಯಾಕ್ಸಿನ್‌ ಹಾಕಿಸಿಕೊಂಡಿರಬೇಕು.

ಕೋವಿಡ್ ಕೇಸ್ ಜಾಸ್ತಿ ಇರುವುದು ಬೆಂಗಳೂರಲ್ಲಿ ಮಾತ್ರ, ಆದರೆ ನಮಗೇಕೆ ವೀಕೆಂಡ್ ಕರ್ಫ್ಯೂ ಬರೆ?



Read more

[wpas_products keywords=”deal of the day sale today offer all”]