ಭೋಜನ ವಿರಾಮದ ನಂತರ ಸದನದಲ್ಲಿದ್ದ ಮತಗಳ ಬಲಾಬಲ ಸಮವಾಗಿದ್ದರಿಂದ ಮತ ವಿಭಜನೆ ಆಗಬಹುದೆನ್ನುವ ನಿರೀಕ್ಷೆಯಿಂದಲೂ ಸರಕಾರ ವಿಧೇಯಕ ಮಂಡನೆಗೆ ಹಿಂದೇಟು ಹಾಕಿತು. ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಆಡಳಿತ ಪಕ್ಷದ ಮೇಲೆ ಮುಗಿಬಿದ್ದವು. ಸದನವನ್ನು ಮುಂದೂಡಿ ಎಂದು ಪಟ್ಟು ಹಿಡಿದವು.
ಬೇಕಂತಲೇ ಕಾಲ ಹರಣ ಮಾಡಲಾಗುತ್ತಿದೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ದೂರಿದವು. ಈ ಸಂದರ್ಭದಲ್ಲಿ ಸಂಧಾನ ಮಾಡಿಕೊಳ್ಳುವಂತೆ ಹೊರಟ್ಟಿ ಸೂಚಿಸಿದರು. ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೆಲ ಕಾಲ ಚರ್ಚೆ ನಡೆದ ನಂತರ ಮುಂಬರುವ ಅಧಿವೇಶನ ವಿಧೇಯಕ ಮಂಡನೆ ಮಾಡುವುದಾಗಿ ಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಬೆಳಗಾವಿ ಅಧಿವೇಶನ ಯಶಸ್ವಿ, 73% ಸದಸ್ಯರ ಹಾಜರಾತಿ: ಸ್ಪೀಕರ್ ಕಾಗೇರಿ
ಮುಂದಿನ ಯೋಜನೆ ಏನು?
ಸುಗ್ರಿವಾಜ್ಞೆ ಹೊರಡಿಸುವ ಮೂಲಕ ರಾಜ್ಯ ಬಿಜೆಪಿ ಸರಕಾರ ವಿಧೇಯಕವನ್ನು ಕಾನೂನಾಗಿ ಮಾರ್ಪಡಿಸಬಹುದು. ಅಥವಾ ಮುಂಬರುವ ಜಂಟಿ ಅಧಿವೇಶನದಲ್ಲಿ ಪರಿಷತ್ ನಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಸಿಗುವುದರಿಂದ ಸರಳವಾಗಿ ವಿಧೇಯಕ ಅಂಗೀಕಾರ ಪಡೆದುಕೊಳ್ಳುವ ಅವಕಾಶ ಇದೆ.