Karnataka news paper

ಜಲ ಸಮೃದ್ಧಿಗೆ ಮಾಯಕೊಂಡದಲ್ಲಿ ಹಿಗ್ಗುತ್ತಿದೆ ಅಡಿಕೆ ವ್ಯಾಪ್ತಿ..! ಸಾಂಪ್ರದಾಯಿಕ ಬೆಳೆ ನಾಸ್ತಿ..!


ಹೈಲೈಟ್ಸ್‌:

  • ಅಕಾಲಿಕ ಮಳೆಗೆ ತುಂಬಿದ ಕೆರೆಗಳು
  • ಸಾಂಪ್ರಾದಯಿಕ ಬೆಳೆಯಿಂದ ಕಂಗು ಬೆಳೆಗೆ ಜಿಗಿದ ರೈತ
  • ಮಾಯಕೊಂಡ ಭಾಗದಲ್ಲಿ ಹೆಚ್ಚುತ್ತಿರುವ ತೋಟ

ಮಾಯಕೊಂಡ (ದಾವಣಗೆರೆ): ಅಕಾಲಿಕವಾಗಿ ಸುರಿದ ಮಳೆಯಿಂದ ತುಂಬಿರುವ ಕೆರೆ ಕಟ್ಟೆಗಳು ಈ ಭಾಗದ ಕೃಷಿ ಪಲ್ಲಟಕ್ಕೆ ಕಾರಣ ಆಗುತ್ತಿದೆ. ಅಗಾಧ ಜಲ ರಾಶಿ ರೈತನಲ್ಲಿ ಭರವಸೆ ಹುಟ್ಟಿಸಿ ಸಾಂಪ್ರದಾಯಿಕ ಬೆಳೆಯಿಂದ ಜಿಗಿದು ಹಣದ ಬೆಳೆಯಾದ ಅಡಿಕೆ ಬೆಳೆಯಲು ಪ್ರೇರೇಪಿಸಿದೆ.

ಈ ವರ್ಷ ಸುರಿದ ಅಕಾಲಿಕ ಮಳೆ ಬೆಳೆಗಳನ್ನು ಹಾಳು ಮಾಡಿ ರೈತನಿಗೆ ನಷ್ಟ ಉಂಟು ಮಾಡಿದೆ. ಆದರೆ ಈ ಜಲ ರಾಶಿ ದೀರ್ಘಕಾಲಿಕ ಬೆಳೆಗಳತ್ತ ರೈತನ ಚಿತ್ತ ಹರಿಸುವಂತೆ ಮಾಡಿವೆ. ಸಾಂಪ್ರದಾಯಿಕ ಅಲ್ಪಕಾಲಿಕ ಬೆಳೆಗಳಾದ ಮೆಕ್ಕೆ ಜೋಳ, ರಾಗಿ, ತರಕಾರಿ ಬೆಳೆಗಳ ಬದಲಿಗೆ ತೋಟಗಾರಿಕೆ ಬೆಳೆಗಳತ್ತ ಪಯಣ ಆರಂಭಿಸಿದ್ದಾರೆ.

ಅಡಿಕೆ ಬೆಲೆ ಏರಿಕೆಯತ್ತ.. ಮಲೆನಾಡಿನ ಕೃಷಿಕರು ಐಷಾರಾಮಿ ಬದುಕಿನತ್ತ..!
ತುಂಬಿದ ಜಲ ಪಾತ್ರೆಗಳು

ಬಯಲು ಸೀಮೆ ಮಾಯಕೊಂಡ ಭಾಗದಲ್ಲಿ ಒಂದು ಕಾಲದಲ್ಲಿ ಕುಡಿಯುವ ನೀರಿಗೂ ಬವಣೆಯಿತ್ತು. ರೈತರು ನೂರಾರು ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದೆ ರೈತರು ಹತಾಶರಾಗಿ ಮಳೆ ಆಶ್ರಿತ ಕೃಷಿಗೆ ಅಂಟಿಕೊಂಡಿದ್ದರು. ಆದರೆ ಈ ವರ್ಷ ಸುರಿದ ಮಳೆಯಿಂದ ಹೋಬಳಿಯ ಕೊಡಗನೂರು, ಹುಚ್ಚವ್ವನ ಹಳ್ಳಿ, ಕಬ್ಬೂರು, ಅಣಜಿ, ಆನಗೋಡು, ನರಗನ ಹಳ್ಳಿ, ನೇರ್ಲಿಗೆ ಹೀಗಿ ಹತ್ತಾರು ಕೆರೆಗಳು ತುಂಬಿವೆ. ಅಂದಾಜು 10 ವರ್ಷಗಳ ಕಾಲ ನೀರಿಗೇನೂ ತೊಂದರೆಯಿಲ್ಲ. ಇನ್ನೊಂದೆಡೆ ಅಂತರ್ಜಲವೂ ಹೆಚ್ಚಿದ್ದು ಬತ್ತಿದ್ದ ಕೊಳವೆ ಬಾವಿಯಲ್ಲೂ ನೀರು ಉಕ್ಕುವಂತಾಗಿದೆ.

2 ಸಾವಿರ ಹೆಕ್ಟೇರ್‌ ಹೆಚ್ಚಳ

ನೀರಿನ ಭರವಸೆ ಹಿನ್ನೆಲೆ ಈ ಭಾಗದ ರೈತರು ಸಾಂಪ್ರದಾಯಿಕ ಮೆಕ್ಕೆ ಜೋಳ, ರಾಗಿ, ಟೊಮೆಟೋ, ಮೆಣಸಿನಕಾಯಿ ಸೇರಿ ತರಕಾರಿ ಬೆಳೆ ಕೈ ಬಿಟ್ಟು ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ಹೋಬಳಿಯಲ್ಲಿ ಈ ಹಿಂದೆ 8 ಸಾವಿರ ಹೆಕ್ಟೇರ್‌ ಅಡಿಕೆ ಬೆಳೆ ಬೆಳೆಯಿತ್ತು. ಅಡಿಕೆ ಬೆಲೆ ಹೆಚ್ಚಳ ಹಿನ್ನೆಲೆ ಜತೆ ನೀರಿನ ಸಮೃದ್ಧಿ ಹೆಚ್ಚಿದ್ದರಿಂದ ಈ ವರ್ಷವೇ 2 ಸಾವಿರ ಹೆಕ್ಟೇರ್‌ ಅಡಿಕೆ ಬೆಳೆ ಹೆಚ್ಚಿದೆ. ಈ ಹಿಂದೆ ಬರದಿಂದ ಹಾಳಾಗಿದ್ದ ಅಡಿಕೆ ತೋಟದ ಎರಡು ಪಟ್ಟು ಈ ವರ್ಷ ಹೆಚ್ಚಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

ಮಲೆನಾಡಿನಲ್ಲಿ ವಾಡಿಕೆಗೆ ಮೊದಲೇ ಹಣ್ಣಾದ ಅಡಿಕೆ: ಕೊಯ್ಲು ಮಾಡಲಾಗದೆ ಬೆಳೆಗಾರರ ಪರದಾಟ..
ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆ ಹೆಚ್ಚುತ್ತಿದ್ದು ಈಗ ದಾವಣಗೆರೆ ಜಿಲ್ಲೆ ರಾಜ್ಯದಲ್ಲಿಯೇ ನಂ.1 ಸ್ಥಾನದಲ್ಲಿದೆ. ಒಂದು ಎಕರೆಯಲ್ಲಿ ರೈತ ಪಡೆಯುವ ಲಾಭಕ್ಕಿಂತ ಅಡಿಕೆ ಬೆಳೆ ಎರಡು ಪಟ್ಟು ಹೆಚ್ಚು ಆದಾಯ ನೀಡುವುದರಿಂದ ನೀರಿನ ಭರವಸೆ ಸಿಕ್ಕಿರುವ ರೈತರು ಅಡಿಕೆಯತ್ತ ವಾಲುತ್ತಿದ್ದಾರೆ.

‘ಮಾಯಕೊಂಡ ಭಾಗದ ಹಲವಾರು ಗ್ರಾಮಗಳಲ್ಲಿನ ಅಡಿಕೆ ತೋಟಗಳಲ್ಲಿ ಹಸಿ ಅಡಿಕೆ ತೂಕಕ್ಕೆ ತೆಗೆದುಕೊಂಡು ಪ್ರತಿ ಕ್ವಿಂಟಲ್‌ ಹಸಿ ಅಡಿಕೆಗೆ 13 ಕೆಜಿ ಒಣ ಅಡಿಕೆ ಮಾಲೀಕರಿಗೆ ನೀಡುತ್ತೇವೆ. ಈಗಿನ ದುಬಾರಿ ಕೂಲಿ, ಕಾರ್ಮಿಕರ ಸಮಸ್ಯೆ ಹೀಗೆ ಹಲವಾರು ತೊಂದರೆ ನಡುವೆ ಈ ಖೇಣಿ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ, ಹುಚ್ಚವ್ವನಹಳ್ಳಿ ಖೇಣಿ ದಾರ ವಿಯು ಸತೀಶ್‌..

ಉತ್ತರ ಕನ್ನಡ ಜಿಲ್ಲೆಯಲ್ಲಿ ಮರದಿಂದ ಮರಕ್ಕೆ ಜಿಗಿಯುವ ಕೊನೆಗೌಡರ ಸಾಹಸ ಕಥೆ ನಿಮಗೆ ಗೊತ್ತಾ?!



Read more