Karnataka news paper

ಸುಮ್ಮನೆ ಜಾತ್ರೆಗಾಗಿ ಬೆಳಗಾವಿಯಲ್ಲಿ ಅಧಿವೇಶನ ಮಾಡಬೇಡಿ: ಯತ್ನಾಳ್ ಕಿಡಿ ನುಡಿ


ಹೈಲೈಟ್ಸ್‌:

  • ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸರಿಯಾದ ಚರ್ಚೆ ನಡೆದಿಲ್ಲ
  • ಸುಮ್ಮನೆ ಜಾತ್ರೆ ಮಾಡುವುದಿದ್ರೆ ಇಲ್ಲಿ ಅಧಿವೇಶನ ಅವಶ್ಯಕತೆಯಿಲ್ಲ
  • ಮತಾಂತರ ಬಿಲ್ ಪಾಸ್ ಆದ ಮೇಲೆ ಸಿದ್ದರಾಮಯ್ಯ ಹತಾಶೆಗೊಂಡಿದ್ದಾರೆ
  • ಬಿಜೆಪಿ ಶಾಕಸ ಬಸನಗೌಡ ಪಾಟೀಲ್ ಯತ್ನಾಳ್‌ ಕಿಡಿನುಡಿ

ಬೆಳಗಾವಿ: ಶುಕ್ರವಾರ ಮುಕ್ತಾಯಗೊಂಡ ವಿಧಾನ ಮಂಡಲದ ಅಧಿವೇಶನದಲ್ಲಿ ಉತ್ತರ ಕರ್ನಾಟದ ಸಮಸ್ಯೆಗಳ ಚರ್ಚೆಗೆ ಒತ್ತು ಕೊಡದೇ ಇರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮುಂದೆ ಈ ಭಾಗದಲ್ಲಿ ಅಧಿವೇಶನ ಮಾಡಿದ್ರೆ, ಕಾಂಗ್ರೆಸ್ ಮತ್ತು ಸ್ಪೀಕರ್ ಇಬ್ಬರಿಗೂ ಹೇಳ್ತಿನಿ. ಇಲ್ಲಿನ ಸಮಸ್ಯೆ ಕುರಿತು ಚರ್ಚೆ ಮಾಡುವುದಿದ್ದರೆ, ಇಲ್ಲಿ ಅಧಿವೇಶನ ಕರಿಯಬೇಕು. ಸುಮ್ಮನೆ ಜಾತ್ರೆ ಮಾಡುವುದಿದ್ರೆ ಇಲ್ಲಿ ಅಧಿವೇಶನ ಅವಶ್ಯಕತೆಯಿಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಆಗಬೇಕು. ಜಾತ್ರೆ ತರ ಬಂದು ಹೋದರೆ ಏನ್ ಪ್ರಯೋಜನ..? ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಅಧಿವೇಶನ ಯಶಸ್ವಿ, 73% ಸದಸ್ಯರ ಹಾಜರಾತಿ: ಸ್ಪೀಕರ್ ಕಾಗೇರಿ
ಅಧಿವೇಶನ ಪ್ರಾರಂಭದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕಾಗಿತ್ತು. ಅವಾಗ ಸಚಿವರು ಮತ್ತು ಸಿಎಂ ಇರ್ತಾ ಇದ್ರು ಉತ್ತರ ಕೊಡಬಹುದಿತ್ತು. ಉದ್ದೇಶ ಪೂರ್ವಕವಾಗಿ ಕೊನೆ ಎರಡು ದಿನಗಳಲ್ಲಿ ಚರ್ಚೆ ಗೆ ತೆಗೆದುಕೊಂಡ್ರು. ಆದ್ದರಿಂದ ಉತ್ತರ ಕರ್ನಾಟಕ ಭಾಗದ ಕುರಿತಾದ ಚರ್ಚೆ ಸರಿಯಾಗಿ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಸುವರ್ಣ ಸೌಧ ಕೇವಲ 15 ದಿನಕ್ಕೆ ಅಷ್ಟೇ ಉಪಯೋಗ ಆಗ್ತಾ ಇದೆ. ಸಾಕಷ್ಟು ಕಚೇರಿಗಳು ಇಲ್ಲಿಗೆ ಇರಬೇಕಾಗಿತ್ತು. ಸಿಎಂ ಬೊಮ್ಮಯಿ ಅವರು ಮೊದಲ ಐದು ದಿನ ಉತ್ತರ ಕರ್ನಾಟಕ ಚರ್ಚೆ ಮಾಡಬೇಕಾಗಿತ್ತು. ಅಭಿವೃದ್ಧಿಗೆ ಸರ್ಕಾರ ಯಾವ ರೀತಿಯ ಕ್ರಮವನ್ನು ಕೈ ಗೊಂಡಿದೆ ಸಿಎಂ ಹೇಳಬೇಕಿತ್ತು. ಆದ್ರೆ ಆಗಿಲ್ಲ ಇವುಗಳ ಬಗ್ಗೆ ನಮ್ಮಗೆ ನೋವಿದೆ. ನಮಗೂ ಮಾತನಾಡುವುದಕ್ಕೆ ಅವಕಾಶ ಸಿಗಲಿಲ್ಲ ಎಂದರು.

ಸುವರ್ಣಸೌಧ ಅಧಿವೇಶನ ನಿಮಿತ್ತ ವಿಶೇಷ ಊಟದ ಬೇಡಿಕೆಗೆ ಬಳಲಿದ ಬೆಳಗಾವಿ ಅಧಿಕಾರಿಗಳು!
ಸಿದ್ದರಾಮಯ್ಯ ವಿರುದ್ಧ ಆಕ್ರೋಶ

ಇನ್ನು ಸಿದ್ದರಾಮಯ್ಯ ಈ ಬಾರಿ ಸದನದಲ್ಲಿ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ಹೇಳಿದರು. ವಿಪಕ್ಷ ನಾಯಕ ನಡವಳಿಕೆ ಅಸಹ್ಯವಾಗಿತ್ತು. ಮುಂದೆ ಈ ರೀತಿ ಆಗಬಾರದು. ನೋವಿನಿಂದ ಹೋಗ್ತಾ ಇದ್ದೀವಿ ಎಂದರು.

ಮತ್ತೊಂದು ಕಡೆ ಕಾಂಗ್ರೆಸ್ ಗೆ ಉತ್ತರ ಕರ್ನಾಟಕ ಬಗ್ಗೆ ಆಸಕ್ತಿ ಇದ್ರೆ ಸದನ ಕಾರ್ಯಕಲಾಪಗಳ ಸಭೆಯಲ್ಲೇ ಸಿದ್ದರಾಮಯ್ಯ ಹೇಳಬೇಕಾಗಿತ್ತು. ಮತಾಂತರ ಬಿಲ್ ಪಾಸ್ ಆದ ಮೇಲೆ ಸಿದ್ದರಾಮಯ್ಯ ಹತಾಶೆ ಗೊಂಡಿದ್ದಾರೆ. ಸೋನಿಯಾ ಗಾಂಧಿಯವರಿಗೆ ಮೆಚ್ಚುಗೆಗೆ ಬಂದಿದ್ದಾರೆ. ಇನ್ನು ಕೆಲವರು ಭಾಷಣ ಮಾಡೊಕ್ಕೆ ಬಂದು ಹೋಗಿದ್ದಾರೆ. ಒಟ್ಟಾರೆ ನಮಗೆ ನೋವಾಗಿದೆ. ಮುಂದೆ ಬೆಳಗಾವಿಯಲ್ಲಿ ಅಧಿವೇಶನ ನಡೆದ್ರೆ ಇಲ್ಲಿನ ಬಗ್ಗೆ ಹೆಚ್ಚು ಚರ್ಚೆ ಆಗಬೇಕು ಎಂದರು.



Read more