Karnataka news paper

ಪ್ಲೇಯಿಂಗ್‌ XIನಲ್ಲಿ 2 ಸ್ಥಾನಗಳಿಗೆ ಶುರುವಾಯ್ತು ಭಾರತಕ್ಕೆ ತಲೆ ನೋವು!



ಹೊಸದಿಲ್ಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿಗೆ ದಿನಗಣನೆ ಶುರುವಾಗಿದೆ. ಸೆಂಚೂರಿಯನ್‌ನಲ್ಲಿ ಡಿ. 26 ರಿಂದ ನಡೆಯಲಿರುವ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಕಣಕ್ಕೆ ಇಳಿಯುವ ಮೂಲಕ ತನ್ನ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅಧಿಕೃತವಾಗಿ ಶುರು ಮಾಡಲಿದೆ.ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಬಾರ್ಡರ್‌ ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿ ಗೆದ್ದಿರುವ ಭಾರತ ತಂಡ, ಇಂಗ್ಲೆಂಡ್‌ ಮಣ್ಣಿನಲ್ಲಿ ಟೆಸ್ಟ್‌ ಸರಣಿ ಗೆದ್ದು ದಾಖಲೆ ಬರೆದಿದೆ. ಆದರೆ, ಕ್ರಿಕೆಟ್‌ ಇತಿಹಾಸದಲ್ಲಿಯೇ ದಕ್ಷಿಣ ಆಫ್ರಿಕಾ ಮಣ್ಣಿನಲ್ಲಿ ಭಾರತ ಟೆಸ್ಟ್‌ ಸರಣಿ ಗೆದ್ದಿಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ. ಹಾಗಾಗಿ ಈ ಬಾರಿ ಇಲ್ಲಿ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ಸೃಷ್ಟಿಸಲು ಕೊಹ್ಲಿ ಬಾಯ್ಸ್‌ ಎದುರು ನೋಡುತ್ತಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಟೆಸ್ಟ್‌ ಸರಣಿ ಗೆಲುವಿನ ವಿಶ್ವಾಸದಲ್ಲಿರುವ ಭಾರತ ತಂಡ ಇದೀಗ ಉತ್ತಮ ಸಂಯೋಜನೆಯೊಂದಿಗೆ ದಕ್ಷಿಣ ಅಫ್ರಿಕಾಗೆ ಬಂದಿಳಿದಿದೆ. ಆಫ್ರಿಕಾದಲ್ಲಿನ ಪಿಚ್‌ಗಳು ವೇಗಿಗಳ ಸ್ನೇಹಿಯಾಗಿದ್ದು ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಅಗ್ನಿ ಪರೀಕ್ಷೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಬಹಳಾ ಜಾಗರೂಕರಾಗಿ ಆಡಬೇಕಾದ ಅಗತ್ಯವಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ನಿಮಿತ್ತ ಭಾರತ ಸಜ್ಜಾಗುತ್ತಿದೆ. ಅಂದಹಾಗೆ ಡಿಸೆಂಬರ್‌ 26ರಿಂದ ಆರಂಭವಾಗಲಿರುವ ಮೊದಲನೇ ಟೆಸ್ಟ್‌ಗೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿನ ಎರಡು ಸ್ಥಾನಗಳ ಆಯ್ಕೆ ಬಗ್ಗೆ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಗೊಂದಲ ಉಂಟಾಗಿದೆ.

ಪ್ಲೇಯಿಂಗ್‌ XIನಲ್ಲಿ 2 ಸ್ಥಾನಗಳಿಗೆ ಶುರುವಾಯ್ತು ಭಾರತಕ್ಕೆ ತಲೆ ನೋವು!

ಹೊಸದಿಲ್ಲಿ:

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿಗೆ ದಿನಗಣನೆ ಶುರುವಾಗಿದೆ. ಸೆಂಚೂರಿಯನ್‌ನಲ್ಲಿ ಡಿ. 26 ರಿಂದ ನಡೆಯಲಿರುವ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಕಣಕ್ಕೆ ಇಳಿಯುವ ಮೂಲಕ ತನ್ನ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅಧಿಕೃತವಾಗಿ ಶುರು ಮಾಡಲಿದೆ.

ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಬಾರ್ಡರ್‌ ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿ ಗೆದ್ದಿರುವ ಭಾರತ ತಂಡ, ಇಂಗ್ಲೆಂಡ್‌ ಮಣ್ಣಿನಲ್ಲಿ ಟೆಸ್ಟ್‌ ಸರಣಿ ಗೆದ್ದು ದಾಖಲೆ ಬರೆದಿದೆ. ಆದರೆ, ಕ್ರಿಕೆಟ್‌ ಇತಿಹಾಸದಲ್ಲಿಯೇ ದಕ್ಷಿಣ ಆಫ್ರಿಕಾ ಮಣ್ಣಿನಲ್ಲಿ ಭಾರತ ಟೆಸ್ಟ್‌ ಸರಣಿ ಗೆದ್ದಿಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ. ಹಾಗಾಗಿ ಈ ಬಾರಿ ಇಲ್ಲಿ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ಸೃಷ್ಟಿಸಲು ಕೊಹ್ಲಿ ಬಾಯ್ಸ್‌ ಎದುರು ನೋಡುತ್ತಿದ್ದಾರೆ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಟೆಸ್ಟ್‌ ಸರಣಿ ಗೆಲುವಿನ ವಿಶ್ವಾಸದಲ್ಲಿರುವ ಭಾರತ ತಂಡ ಇದೀಗ ಉತ್ತಮ ಸಂಯೋಜನೆಯೊಂದಿಗೆ ದಕ್ಷಿಣ ಅಫ್ರಿಕಾಗೆ ಬಂದಿಳಿದಿದೆ. ಆಫ್ರಿಕಾದಲ್ಲಿನ ಪಿಚ್‌ಗಳು ವೇಗಿಗಳ ಸ್ನೇಹಿಯಾಗಿದ್ದು ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಅಗ್ನಿ ಪರೀಕ್ಷೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಬಹಳಾ ಜಾಗರೂಕರಾಗಿ ಆಡಬೇಕಾದ ಅಗತ್ಯವಿದೆ.

​ಅಗ್ರ ನಾಲ್ಕು ಬ್ಯಾಟಿಂಗ್‌ ಕ್ರಮಾಂಕಗಳು ಪಕ್ಕಾ
​ಅಗ್ರ ನಾಲ್ಕು ಬ್ಯಾಟಿಂಗ್‌ ಕ್ರಮಾಂಕಗಳು ಪಕ್ಕಾ

ಭಾನುವಾರ ಆರಂಭವಾಗಲಿರುವ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ ಇಲೆವೆನ್‌ ಆಯ್ಕೆ ಮಾಡುವುದು ಟೀಮ್‌ ಮ್ಯಾನೇಜ್‌ಮೆಂಟ್‌ಗೆ ತಲೆ ನೋವಾಗಿದೆ. ಬ್ಯಾಟಿಂಗ್‌ ವಿಭಾಗದಲ್ಲಿ ಮಯಾಂಗ್ ಅಗರ್ವಾಲ್‌ ಹಾಗೂ ಕೆ.ಎಲ್‌ ರಾಹುಲ್ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ.

ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್‌ ಪೂಜಾರ, ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಆಡಲಿದ್ದಾರೆ. ಇನ್ನು ಐದನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕೆಂಬ ಬಗ್ಗೆ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಗೊಂದಲ ಉಂಟಾಗಿದೆ. ಆದರೆ, ಕಳಪೆ ಫಾರ್ಮ್‌ನಲ್ಲಿರುವ ಅಜಿಂಕ್ಯ ರಹಾನೆ ಕೈ ಬಿಡುವ ಸಾಧ್ಯತೆ ದಟ್ಟವಾಗಿದ್ದು, ಐದನೇ ಕ್ರಮಾಂಕಕ್ಕೆ ಶ್ರೇಯಸ್‌ ಅಯ್ಯರ್‌ ಹಾಗೂ ಹನುಮ ವಿಹಾರಿ ನಡುವೆ ತೀವ್ರ ಪೈಪೋಟಿ ಇದೆ.

ಸೆಂಚೂರಿಯನ್‌ನಲ್ಲಿ ಧೋನಿ ದಾಖಲೆ ಮುರಿಯುವ ಸನಿಹದಲ್ಲಿ ಪಂತ್‌!

​5ನೇ ಕ್ರಮಾಂಕಕ್ಕೆ ಅಯ್ಯರ್‌ ಅಥವಾ ವಿಹಾರಿ?
​5ನೇ ಕ್ರಮಾಂಕಕ್ಕೆ ಅಯ್ಯರ್‌ ಅಥವಾ ವಿಹಾರಿ?

ಇತ್ತೀಚೆಗೆ ಭಾರತ ‘ಎ’ ತಂಡದ ಪರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಹನುಮ ವಿಹಾರಿ ಉತ್ತಮ ಪ್ರದರ್ಶನ ತೋರಿದ್ದರು. ಹಾಗಾಗಿ ಇಲ್ಲಿನ ಪರಿಸ್ಥಿತಿಗಳ ಅನುಭವದ ಆಧಾರ ಮೇಲೆ ವಿಹಾರಿಗೆ 5ನೇ ಕ್ರಮಾಂಕ ನೀಡಿದರೂ ಅಚ್ಚರಿ ಪಡಬೇಕಾಗಿಲ್ಲ. ಮತ್ತೊಂದೆಡೆ ನ್ಯೂಜಿಲೆಂಡ್‌ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶ್ರೇಯಸ್‌ ಅಯ್ಯರ್‌, ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಯ್ಯರ್‌ ಕೂಡ 5ನೇ ಕ್ರಮಾಂಕಕ್ಕೆ ಪ್ರಬಲ ಸ್ಪರ್ಧಿಯಾಗಿದ್ದಾರೆ. ಅಂದಹಾಗೆ, ಐದನೇ ಕ್ರಮಾಂಕಕ್ಕೆ ಶ್ರೇಯಸ್‌ ಅಯ್ಯರ್‌ ಆಡಿಸಬೇಕಾ ಅಥವಾ ಅನುಭವಿ ಹನುಮ ವಿಹಾರಿ ಅವರನ್ನು ಆಡಿಸಬೇಕಾ ಎಂಬ ತಲೆ ನೋವು ಟೀಮ್ ಮ್ಯಾನೇಜ್‌ಮೆಂಟ್‌ಗೆ ಶುರುವಾಗಿದೆ.

‘ಇದು ನಾನ್‌ಸೆನ್ಸ್‌’, ಟೀಮ್ ಇಂಡಿಯಾ ಮಾಜಿ ಕೋಚ್‌ ರವಿ ಶಾಸ್ತ್ರಿ ಗರಂ!

​ಬುಮ್ರಾ, ಶಮಿ ಜೊತೆಗೆ ಇನ್ನುಳಿದ ವೇಗಿಗಳು ಯಾರು?
​ಬುಮ್ರಾ, ಶಮಿ ಜೊತೆಗೆ ಇನ್ನುಳಿದ ವೇಗಿಗಳು ಯಾರು?

ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌, ಶಾರ್ದುಲ್ ಠಾಕೂರ್‌ ಹಾಗೂ ಮೊಹಮ್ಮದ್‌ ಸಿರಾಜ್‌ ತಂಡದ ವೇಗದ ಬೌಲಿಂಗ್‌ ವಿಭಾಗದಲ್ಲಿದ್ದಾರೆ. ಇವರಲ್ಲಿ ಜಸ್‌ಪ್ರಿತ್‌ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಮೊದಲನೇ ಟೆಸ್ಟ್‌ನಲ್ಲಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತ. ಆದರೆ, ಇನ್ನುಳಿದ ಇಬ್ಬರು ವೇಗಿಗಳ ಸ್ಥಾನಕ್ಕೆ ಯಾರನ್ನು ಪರಿಗಣಿಸಬೇಕೆಂದು ಟೀಮ್‌ ಮ್ಯಾನೇಜ್‌ಮೆಂಟ್‌ಗೆ ತಲೆ ನೋವಾಗಿ ಪರಿಣಮಿಸಿದೆ.

ವೇಗದ ಬೌಲಿಂಗ್ ವಿಭಾಗದ ಇನ್ನುಳಿದ ಎರಡು ಸ್ಥಾನಗಳಿಗೆ ಇಶಾಂತ್‌ ಶರ್ಮಾ, ಉಮೇಶ್‌ ಯಾದವ್, ಮೊಹಮ್ಮದ್‌ ಸಿರಾಜ್‌, ಶಾರ್ದುಲ್‌ ಠಾಕೂರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನ್ಯೂಜಿಲೆಂಡ್‌ ವಿರುದ್ಧ ತವರು ಸರಣಿಯಲ್ಲಿ ಸಿರಾಜ್‌ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಮೂರನೇ ವೇಗಿಯಾಗಿ ಟೀಮ್‌ ಮ್ಯಾನೇಜ್‌ಮೆಂಟ್‌ ಸಿರಾಜ್‌ ಅವರನ್ನು ಆಡಿಸುವ ಸಾಧ್ಯತೆ ಇದೆ.

ಚಹರ್‌ ಸ್ವಿಂಗ್‌ ಬೌಲಿಂಗ್‌ಗೆ ಕಕ್ಕಾಬಿಕ್ಕಿಯಾದ ರಾಹುಲ್, ಪೂಜಾರ! ವಿಡಿಯೋ

​ಹೆಚ್ಚುವರಿ ವೇಗಿಯಾಗಿ ಶಾರ್ದುಲ್‌ ಸೂಕ್ತ ಆಯ್ಕೆ
​ಹೆಚ್ಚುವರಿ ವೇಗಿಯಾಗಿ ಶಾರ್ದುಲ್‌ ಸೂಕ್ತ ಆಯ್ಕೆ

ದಕ್ಷಿಣ ಆಫ್ರಿಕಾ ಪರಿಸ್ಥಿತಿಗಳಿಗೆ ವೇಗಿಗಳ ಸ್ನೇಹಿಯಾಗಿರುವ ಹಿನ್ನೆಲೆಯಲ್ಲಿ ತಂಡದಲ್ಲಿ ಹೆಚ್ಚುವರಿ ವೇಗಿಯನ್ನು ಆಯ್ಕೆ ಮಾಡಲು ಭಾರತ ಹೆಚ್ಚಿನ ಒಲವು ತೋರಿಸಬಹುದು. ಇದು ಸಕಾರವಾರದೆ ಬೌಲಿಂಗ್‌ ಜೊತೆಗೆ ಬ್ಯಾಟಿಂಗ್‌ನಲ್ಲಿ ನೆರವಾಗಬಲ್ಲ ಶಾರ್ದುಲ್‌ ಠಾಕೂರ್‌ಗೆ ಅವಕಾಶ ನೀಡಬಹುದು. ಆ ಮೂಲಕ ಬೌಲಿಂಗ್‌ ಜೊತೆಗೆ ಬ್ಯಾಕೆಂಡ್‌ನಲ್ಲಿ ತಂಡಕ್ಕೆ ಕೆಲ ನಿರ್ಣಾಯಕ ರನ್‌ಗಳನ್ನು ತಂದುಕೊಡಬಲ್ಲ ಸಾಮರ್ಥ್ಯ ಶಾರ್ದುಲ್‌ ಠಾಕೂರ್‌ಗೆ ಇದೆ. ಹಾಗಾಗಿ, ಟೀಮ್‌ ಮ್ಯಾನೇಜ್‌ಮೆಂಟ್‌

ಭಾರತ ಟೆಸ್ಟ್ ತಂಡ:

ವಿರಾಟ್‌ ಕೊಹ್ಲಿ (ನಾಯಕ), ಕೆಎಲ್‌ ರಾಹುಲ್, ಮಯಾಂಕ್‌ ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್‌, ಹನುಮ ವಿಹಾರಿ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ವೃದ್ಧಿಮಾನ್‌ ಸಹಾ (ವಿಕೆಟ್‌ಕೀಪರ್‌), ಆರ್‌ ಅಶ್ವಿನ್‌, ಜಯಂತ್‌ ಯಾದವ್‌, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಶಾರ್ದುಲ್‌ ಠಾಕೂರ್‌, ಮೊಹಮ್ಮದ್‌ ಸಿರಾಜ್‌, ಪ್ರಿಯಾಂಕ್ ಪಾಂಚಾಲ್‌.

‘ಇದು ನಾನ್‌ಸೆನ್ಸ್‌’, ಟೀಮ್ ಇಂಡಿಯಾ ಮಾಜಿ ಕೋಚ್‌ ರವಿ ಶಾಸ್ತ್ರಿ ಗರಂ!



Read more