Karnataka news paper

ಆವಕದಲ್ಲಿ ನಿರೀಕ್ಷೆಗೂ ಮೀರಿದ ಏರಿಕೆ ; ಹಾವೇರಿಯಲ್ಲಿ 97 ಸಾವಿರ ಮೆಣಸಿನ ಚೀಲ ಆವಕ


ಬ್ಯಾಡಗಿ: ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ 97 ಸಾವಿರಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಆವಕದಲ್ಲಿ ನಿರೀಕ್ಷೆಗೂ ಮೀರಿದ ಏರಿಕೆ ಕಂಡುಬಂದಿದೆ.

ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದಾಗಿ ಆವಕದಲ್ಲಿ ಭಾರಿ ಇಳಿಕೆ ಕಂಡು ಬಂದಿತ್ತು. ಇದರಿಂದ ವ್ಯಾಪಾರಸ್ಥರಲ್ಲಿ ಆತಂಕ ಉಂಟು ಮಾಡಿತ್ತು. ಆದರೆ ಕಳೆದ ಸೋಮವಾರ 72,446 ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು ಸಮಾಧಾನ ನೀಡಿತ್ತು. ಇದೀಗ ಗುರುವಾರ ಮತ್ತೆ 97,751 ಚೀಲಗಳು ಬಂದಿದ್ದು ವ್ಯಾಪಾರಸ್ಥರಲ್ಲಿ ಹರ್ಷ ತಂದಿದೆ. ಇತ್ತ ಮಾರುಕಟ್ಟೆಗೆ ರೈತರು ತಂದಿದ್ದ ಮೆಣಸಿನ ಕಾಯಿ ಚೀಲಗಳಲ್ಲಿ ಬಹುತೇಕ ಮೆಣಸಿನ ಕಾಯಿ ಹಸಿಯಾಗಿದ್ದ ಕಾರಣ ಸುಮಾರು 268 ದಲಾಲರ ಅಂಗಡಿಯಲ್ಲಿ ಟೆಂಡರ್‌ಗೆ ಇಡಲಾಗಿದ್ದ ಒಟ್ಟು 1006 ಲಾಟ್‌ಗಳನ್ನು ವ್ಯಾಪರಸ್ಥರು ಯಾವುದೇ ಬಿಡ್‌ ಮಾಡದೇ ತಿರಸ್ಕರಿಸಿದ್ದಾರೆ.
ಪಾತಾಳಕ್ಕೆ ಕುಸಿದ ಪಚ್ಚಬಾಳೆ ಬೆಲೆ; ಸಂಕಷ್ಟಕ್ಕೆ ಸಿಲುಕಿದ ಬಾಳೆ ಬೆಳೆಗಾರರು
ದರ ನಿಗದಿ, ರೈತರ ಪ್ರತಿಭಟನೆ
ಮೆಣಸಿನ ಕಾಯಿಗೆ ಉತ್ತಮ ದರ ನೀಡಿಲ್ಲ ಎಂದು ಗುರುವಾರವು ಸಹ ನೂರಾರು ಜನ ರೈತರು ಎಪಿಎಂಸಿ ಎದುರು ಪ್ರತಿಭಟನೆ ನಡೆಸಿದರು. ಮೆಣಸಿನಕಾಯಿಗೆ ಇಷ್ಟೊಂದು ಕನಿಷ್ಠ ಬೆಲೆ ನಿಗದಿ ಮಾಡುತ್ತಿದ್ದರೂ ಎಪಿಎಂಸಿ ಕಣ್ಣುಮುಚ್ಚಿ ಕುಳಿತಿದೆ. ಗುರುವಾರ ದೊರೆತಿರುವ ಬೆಲೆ, ಹಮಾಲಿ ಹಾಗೂ ಲಾರಿ ಬಾಡಿಗೆಗೆ ಕೂಡ ಸಾಕಾಗುವುದಿಲ್ಲ. ಕೂಡಲೇ ಸಮಸ್ಯೆ ಪರಿಹರಿಸಿ ಮೆಣಸಿನಕಾಯಿಗೆ ಉತ್ತಮ ದರ ದೊರಕಿಸಿಕೊಡುವಂತೆ ಪಟ್ಟು ಹಿಡಿದರು.
ಬಡವರು ಬದನೆಕಾಯಿ ತಿನ್ನಂಗಿಲ್ಲ; ತರಕಾರಿ ಬೆಲೆ ಕೇಳಿದ್ರೆ ತಲೆ ಗಿರ್‌ ಅನ್ಸುತ್ತೆ! ಬೆಲೆ ಏರಿಕೆಯಿಂದ ರೈತರಿಗೆ ಸಂತಸ
ಮಧ್ಯ ಪ್ರವೇಶಿಸಿದ ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ಪ್ರತಿ ವಾರವೂ ಇದೇ ರೀತಿ ಸಮಸ್ಯೆ ಹೊತ್ತು ತರುವುದು ಸರಿಯಲ್ಲ. ಗುರುವಾರದ ಮಾರುಕಟ್ಟೆಯಲ್ಲಿ ಗುಣಮಟ್ಟದ ಮೆಣಸಿನಕಾಯಿ ತರದೇ ಇರುವುದಕ್ಕೆ ಸುಮಾರು 1 ಸಾವಿರ ಲಾಟಗಳಿಗೆ ವ್ಯಾಪಾರಸ್ಥರು ಬಿಡ್‌ ಮಾಡಿಲ್ಲ. ನಿಮ್ಮ ಮೆಣಸಿನಕಾಯಿಗೆ ಅನುಗುಣವಾಗಿ ದರ ನಿಗದಿ ಮಾಡಲಾಗಿದೆ. ಒಂದು ವೇಳೆ ಮೆಣಸಿನಕಾಯಿ ಗುಣಮಟ್ಟದ್ದಿದ್ದು, ಅದಕ್ಕೆ ಬೆಲೆ ಕಡಿಮೆ ಆಗಿದ್ದರೆ ಮತ್ತೊಮ್ಮೆ ಟೆಂಡರ್‌ಗಿಡಿ ಎಂದು ತಿಳಿ ಹೇಳಿದ ನಂತರ ಪ್ರತಿಭಟನಕಾರರು ಪ್ರತಿಭಟನೆ ಕೈಬಿಟ್ಟರು.

ಪ್ರಸಕ್ತ ಮಾರುಕಟ್ಟೆ ದರ

ತಳಿಗರಿಷ್ಠಕನಿಷ್ಠಸರಾಸರಿ
ಕಡ್ಡಿ35,5991,60914,209
ಡಬ್ಬಿ44,2222,28919,869
ಗುಂಟೂರು12,8698296,099



Read more