Karnataka news paper

ಕಾಂಗ್ರೆಸ್ ಗದ್ದಲದ ನಡುವೆಯೂ ಮತಾಂತರ ನಿಷೇಧ ವಿಧೇಯಕ ಅಂಗೀಕಾರ


ಬೆಳಗಾವಿ: ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಅಂಗೀಕಾರಗೊಂಡಿತು.

ಬೆಳಗಾವಿ ಅಧಿವೇಶನದಲ್ಲಿ ಮಸೂದೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧ ವ್ಯಕ್ತಪಡಿಸಿತ್ತು. ಆದರೆ ಈ ಮಸೂದೆಯನ್ನು ಕಾಂಗ್ರೆಸ್ ಅವಧಿಯಲ್ಲಿ ತರುವ ಚಿಂತನೆ ನಡೆಸಲಾಗಿತ್ತು ಎಂದು ಬಿಜೆಪಿ ಆರೋಪಿಸಿತ್ತು. ಇದರಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಇಕ್ಕಟ್ಟಿಗೆ ಸಿಲುಕಿದ್ದರು.

ಮತಾಂತರ ನಿಷೇಧ ವಿಧೇಯಕ ಸಂವಿಧಾನ ಬಾಹಿರ, ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧ: ಸಿದ್ದರಾಮಯ್ಯ

ಇನ್ನು ಈ ಮಸೂದೆ ಹಿಂದೆ ಆರ್ ಎಸ್ ಎಸ್ ಅಜೆಂಡಾ ಇದೆ.‌ ಇದು ಸಂವಿಧಾನ ವಿರೋಧಿ ಎಂದು ಕಾಂಗ್ರೆಸ್ ಆರೋಪಿಸಿದೆ. ಜೆಡಿಎಸ್ ಕೂಡಾ ಮಸೂದೆಗೆ ವಿರೋಧ ವ್ಯಕ್ತಪಡಿತ್ತು.

ಮಸೂದೆ ಖಂಡಿಸಿ ಕಾಂಗ್ರೆಸ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರೆ ಬಿಜೆಪಿ ಮಸೂದೆಯನ್ನು ಸಮರ್ಥನೆ ಮಾಡಿಕೊಂಡಿದೆ. ಕಾಂಗ್ರೆಸ್ ಪ್ರತಿಭಟನೆ ನಡೆವೆಯೂ ವಿಧಾನಸಭೆಯಲ್ಲಿ ಇದೀಗ ಮಸೂದೆ ಅಂಗೀಕಾರಗೊಂಡಿದೆ.

ಸಿದ್ದರಾಮಯ್ಯದ್ದು ನೇರ, ಬಹಿರಂಗ ರಾಜಕಾರಣ: ಸಿಎಂ ಬೊಮ್ಮಾಯಿ

ಸಿದ್ದರಾಮಯ್ಯ ಅವರದ್ದು ನೇರ ಹಾಗೂ ಬಹಿರಂಗ ರಾಜಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನೇರ ರಾಜಕಾರಣಿ. ಆದರೆ ನಮ್ಮ ಮನೆಗೆ ಬರಲು ಏನೂ ತೊಂದರೆ ಇಲ್ಲ ನಿಮಗೆ ಎಂದರು.

ಮತಾಂತರ ನಿಷೇಧ ವಿಧೇಯಕ ವಿಚಾರವಾಗಿ ಎರಡು ಪಕ್ಷಗಳು ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಆರೋಪ ಮಾಡಿದರು.

ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿ, ಯಾರ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡುತ್ತೀರಿ ಗೊತ್ತಿದೆ, ನಮಗೆ ಏಕೆ ಹೇಳುತ್ತೀರಿ? ನೀವು ಅವರು ಮ್ಯಾಚ್ ಫಿಕ್ಸಿಂಗ್ ಮಾಡಿದ್ದೀರಿ ಎಂದರು.

ನಮ್ಮ ರಾಜಕೀಯ ಜೀವನದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡೂ ಇಲ್ಲ ಮಾಡೋದು ಇಲ್ಲ. ಬೊಮ್ಮಾಯಿ ಜೊತೆ ನಮಗೆ ಸ್ನೇಹ ಇದೆ. ಆದರೆ ರಾಜಕೀಯ ಮಾತನಾಡಿದ್ದೇನಾ? ಒಂದು ದಿನಾನೂ ಮಾತನಾಡಿಲ್ಲ. ನಾನು ಒಬ್ಬರ ಸಿಎಂ ಮನೆಗೆ ಹೋಗಿಲ್ಲ ಈವರೆಗೂ. ಫೋನ್‌ನಲ್ಲಿ ಸಾರ್ವಜನಿಕ ಕೆಲಸಗಳ ಬಗ್ಗೆ ಹೇಳಿರಬಹುದು. ಮನೆಗೆ ಹೋಗಿ ಭೇಟಿ ಮಾಡಿ, ಹಿಂಗೆ ಆಗಬೇಕು, ವೈಯಕ್ತಿಕವಾಗಿ ಮಾಡಿಕೊಡಿ ಎಂದು ಕೇಳಿಲ್ಲ ಎಂದರು.

ದಲಿತ, ಮಹಿಳೆ,ಬುದ್ದಿಮಾಂದ್ಯರ ರಕ್ಷಣೆಗೆ ಮತಾಂತರ ನಿಷೇಧ ಕಾನೂನು : ಬೊಮ್ಮಾಯಿ

ಸ್ನೇಹದಿಂದ ಊಟಕ್ಕೆ ಕರೆದರೆ ಬರಬಹುದು. ಬೊಮ್ಮಾಯಿ ಊಟಕ್ಕೆ ಕರೆದರೆ ಬರಬಹುದು. ಆದರೆ ರಾಜಕೀಯ ಜೀವನದಲ್ಲಿ ನೋ ಮ್ಯಾಚ್ ಫಿಕ್ಸಿಂಗ್ ಎಂದರು.

ಇದಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ನಾನೂ ಕೂಡಾ ನೀವು ಸಿಎಂ ಇದ್ದಾಗ ಯಾವ ಕೆಲಸ ಇಟ್ಟುಕೊಂಡು ಬಂದಿಲ್ಲ. ಆದರೆ ನಮ್ಮ ಸ್ನೇಹ ವಿಶ್ವಾಸದಲ್ಲಿ ಕೊರತೆ ಇಲ್ಲ . ರಾಜಕಾರಣ ರಾಜಕಾರಣ ಸ್ನೇಹ ಸ್ನೇಹ ಸಪರೇಟಾಗಿ ಇಟ್ಟುಕೊಂಡಿದ್ದೇವೆ ಉಳಿಸಿಕೊಂಡು ಹೋಗೋಣ ಎಂದು ಹೇಳಿದರು.



Read more