ಗಾಯ ಎಂಬುದು ವೇಗದ ಬೌಲರ್ ಗಳ ಅವಿಭಾಜ್ಯ ಅಂಗ. ಬಹುಷಃ ಕಪಿಲ್ ದೇವ್ ಅವರನ್ನು ಹೊರತುಪಡಿಸಿದರೆ ಟೀಂ ಇಂಡಿಯಾದಲ್ಲಿ ಕಪಿಲ್ ದೇವ್ ಅವರನ್ನು ಹೊರತುಪಡಿಸಿದರೆ ಯಾವುದೇ ಗಾಯವಿಲ್ಲದೆ ಸುದೀರ್ಘ ಕಾಲ ಆಡಿದ ಮತ್ತೊಬ್ಬ ವೇಗದ ಬೌಲರ್ ಇಲ್ಲ. ಕರ್ನಾಟಕದ ಅಪ್ರತಿಮ ವೇಗಿ ಜಾವಗಲ್ ಶ್ರೀನಾಥ್ ಅವರನ್ನು ಸಹ ಗಾಯದ ಸಮಸ್ಯೆ ಕಾಡಿತ್ತು. ಇದೀಗ ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರೂ ಪದೇ ಪದೇ ಗಾಯದ ಸಮಸ್ಯೆಗೊಳಗಾಗಿದ್ದಾರೆ. ಇದೇ ಹೊತ್ತಲ್ಲಿ ಜಸ್ಪ್ರೀತ್ ಬುಮ್ರಾ ಅವರು ನಿವೃತ್ತಿಯ ಬಗ್ಗೆ ಮಾತನಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಹೈಲೈಟ್ಸ್:
ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಂದ ನಿವೃತ್ತಿಯ ಬಗ್ಗೆ ಅಚ್ಚರಿಯ ಹೇಳಿಕೆ
ಈ ಪ್ರಯಾಣ ಶಾಶ್ವತವಲ್ಲ, ದೇಹವು ಸಹಕರಿಸದಾಗ ಕ್ರಿಕೆಟ್ ನಿಂದ ದೂರ ಸರಿಯುವೆ ಎಂದ ವೇಗಿ
ಇಂಗ್ಲೆಂಡ್ ಪ್ರವಾಸದಲ್ಲಿ ಅನುಭವಿಗಳ ಕೊರತೆಯ ನಡುವೆ ಜಸ್ಪ್ರೀತ್ ಬುಮ್ರಾ ಉಪಸ್ಥಿತಿ ಭಾರತಕ್ಕೆ ಮುಖ್ಯ