Karnataka news paper

ದೇಶದ ಅತಿದೊಡ್ಡ ಸಿರಿಂಜ್‌ ತಯಾರಿಕಾ ಕಂಪನಿಯ 3 ಯೂನಿಟ್‌ಗಳು ಸ್ಥಗಿತ! ಸಿರಿಂಜ್‌ ಸಮಸ್ಯೆಯ ಆತಂಕ!


ಹೊಸದಿಲ್ಲಿ: ಭಾರತದ ಅತಿದೊಡ್ಡ ಸಿರಿಂಜ್ ತಯಾರಕ ಕಂಪನಿಯಾದ ಹಿಂದೂಸ್ತಾನ್ ಸಿರಿಂಜ್ಸ್ ಮತ್ತು ಮೆಡಿಕಲ್ ಡಿವೈಸಸ್‌ (ಎಚ್‌ಎಂಡಿ) Hindustan Syringes and Medical Devices (HMD) ತನ್ನ ಪ್ಲಾಂಟ್‌ಗಳನ್ನು ಮುಚ್ಚಲು ನಿರ್ಧರಿಸಿದ್ದು, ಸಿರಿಂಜ್ ತಯಾರಿಕೆಯನ್ನು ಸ್ಥಗಿತಗೊಳಿಸಿದೆ. ಹರ್ಯಾಣದ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದ ನಂತರ ಈ ನಿರ್ಧಾರವನ್ನು ಮಾಡಲಾಗಿದ್ದು, ಇಡೀ ಭಾರತಕ್ಕೆ ಅವಶ್ಯವಿರುವ ಒಟ್ಟು ಮೂರನೇ ಎರಡರಷ್ಟು ಸಿರಿಂಜ್‌ಗಳನ್ನು ಪೂರೈಸುವ ಕಂಪನಿ ಇದಾಗಿದ್ದು, ಹೀಗಾಗಿ ಇನ್ನು ಮಂದೆ ಭಾರತದಲ್ಲಿ ಸಿರಿಂಜ್‌ ಮತ್ತು ಸೂಜಿಗಳ ಸಮಸ್ಯೆ ಎದುರಾಗುವ ಆತಂಕ ಉಂಟಾಗಿದೆ.

ಫರೀದಾಬಾದ್‌ನ 11 ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಸಿರಿಂಜ್ ತಯಾರಿಕಾ ಘಟಕಗಳಲ್ಲಿ ಹಿಂದೂಸ್ತಾನ್ ಸಿರಿಂಜ್ಸ್ ಕಾರ್ಯನಿರ್ವಹಿಸುತ್ತಿತ್ತು. ಆ ಪೈಕಿ ಮುಖ್ಯ ಘಟಕವೂ ಸೇರಿದಂತೆ ಒಟ್ಟು ಮೂರು ಯೂನಿಟ್‌ಗಳನ್ನು ಮುಚ್ಚಲಾಗಿದೆ ಎಂದು ರಾಜ್ಯ ಪ್ರಾಧಿಕಾರ ತಿಳಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಎಚ್‌ಎಂಡಿ ಮ್ಯಾನೆಜಿಂಗ್ ಡೈರೆಕ್ಟರ್ ರಾಜೀವ್ ನಾಥ್‌, ‘ಇಂದು ಮಧ್ಯಾಹ್ನದಿಂದ ನಾವು ನಮ್ಮ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದೇವೆ. ಎರಡು ದಿನಗಳ ತುರ್ತು ಸಂಗ್ರಹಗಳ ಬಳಿಕ ಸೋಮವಾರದಿಂದ ನಾವು ಸೂಜಿಗಳನ್ನು ತಯಾರಿಸಲು ಸಾಧ್ಯವಿಲ್ಲ. 1.2 ಕೋಟಿ ಸಿರಿಂಜ್‌ಗಳ ದೈನಂದಿನ ಉತ್ಪಾದನೆ ಸೋಮವಾರದಿಂದ ಲಭ್ಯವಿರುವುದಿಲ್ಲ’ ಎಂದು ಶುಕ್ರವಾರ ವಿಜಯ ಕರ್ನಾಟಕ ಸಹೋದರ ಪತ್ರಿಕೆ ಎಕಾನಾಮಿಕ್ಸ್ ಟೈಮ್ಸ್‌ಗೆ ತಿಳಿಸಿದ್ದಾರೆ. ಈ ಅಂಕಿ ಅಂಶಗಳು ಎಚ್‌ಎಂಡಿಯ ಮತ್ತೊಂದು ಪ್ಲಾಂಟ್‌ನಲ್ಲಿ ತಯಾರಿಸುವ 40 ಸಿರಿಂಜ್‌ಗಳನ್ನೂ ಒಳಗೊಂಡಿದೆ ಎನ್ನಲಾಗಿದೆ.
ಮುಂದಿನ ಪೀಳಿಗೆಗೆ ಸಿಗರೇಟ್ ಮಾರಾಟ ನಿಷೇಧ!: ಮಹತ್ವದ ಕಾನೂನು ರೂಪಿಸಿದ ನ್ಯೂಜಿಲ್ಯಾಂಡ್
ಸದ್ಯ ಭಾರತವೂ ಸೇರಿದಂತೆ ಜಾಗತಿಕವಾಗಿ ಸಿರಿಂಜ್‌ಗಳ ಕೊರತೆಯಿದೆ. ಸ್ವಯಂಪ್ರೇರಿತವಾಗಿ ಘಟಕಗಳನ್ನು ಮುಚ್ಚುವಂತೆ ನಮ್ಮನ್ನು ಕೇಳಿದ್ದರಿಂದ ಈ ಬಿಕ್ಕಟ್ಟು ಉಲ್ಬಣಗೊಂಡಿದೆ. ಇದು ಪ್ರತಿನಿತ್ಯ 150 ಲಕ್ಷ ಸೂಜಿಗಳು ಮತ್ತು 80 ಲಕ್ಷ ಸಿರಿಂಜ್‌ ಉತ್ಪಾದನೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್‌ಎಂಡಿ ನಿರ್ದೇಶಕ ರಾಜೀವ್‌ನಾಥ್ ಹೇಳಿದ್ದಾರೆ. ಸಿರಿಂಜ್ ಘಟಕಗಳು ಡೀಸೆಲ್ ಜನರೇಟರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಭಾವಿಸಿದೆ. ನಾವು ಆ ರೀತಿ ಮಾಡುತ್ತಿಲ್ಲ ಎಂದು ಅವರಿಗೆ ಭರವಸೆ ನೀಡಿದ್ದೆವು. ಅದಾಗ್ಯೂ ಅವರಿಗೆ ಮನವರಿಕೆಯಾಗಿಲ್ಲ ಎಂದು ರಾಜೀವ್‌ನಾಥ್ ಹೇಳಿದ್ದಾರೆ.

ಹರ್ಯಾಣ ಮಾಲಿನ್ಯ ನಿಯಂತ್ರಣ ಮಂಡಳಿ ಫರಿದಾಬಾದ್‌ನಲ್ಲಿ 228 ಘಟಕಗಳಳನ್ನು ಮುಚ್ಚುವಂತೆ ಕರೆ ನೀಡಿತ್ತು. ಕಾನೂನು ಕ್ರಮ ಮತ್ತು ಕಂಪನಿಯನ್ನು ಸೀಲಿಂಗ್ ಮಾಡುವ ಮುನ್ನ ನೀವೇ ಸ್ವಯಂಪ್ರೇರಿತವಾಗಿ ಮುಚ್ಚಿ ಎಂದು ಎಚ್‌ಎಂಡಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿತ್ತು.

ಪ್ರಧಾನಿ ಮತ್ತು ಆರೋಗ್ಯ ಇಲಾಖೆಗೆ ಪತ್ರ ಬರೆದ ಎಚ್‌ಎಂಡಿ ಕಂಪನಿ
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿರುವ ಎಚ್‌ಎಂಡಿ ಸಂಸ್ಥೆ, ಕೊರೊನಾ ವ್ಯಾಕ್ಸಿನ್ ಮತ್ತು ಕ್ಯುರೇಟಿವ್ ಹೆಲ್ತ್‌ಕೇರ್‌ಗೆ ಅಗತ್ಯವಾದ ಸಿರಿಂಜ್‌ಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಒದಗಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಕಾರ್ಯನಿರ್ವಹಣೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದೆ.



Read more