Karnataka news paper

ಅಬ್ಬಾ `ಕಿಂಗ್’ ಕೊಹ್ಲಿಗೆ ಮೂಗಿನ ತುದಿಯಲ್ಲೇ ಕೋಪ: ದಿಗ್ವೇಶ್ ರಾಠಿ ಕೃತ್ಯಕ್ಕೆ ಸಿಟ್ಟಲ್ಲಿ ಬಾಟಲಿ ಎಸೆದ ವಿರಾಟ್!


IPL 2025 RCB Vs LSG Match – ಲಖನೌ ಸೂಪರ್ ಜೈಂಟ್ಸ್ ಸ್ಪಿನ್ನರ್ ದಿಗ್ವೇಶ್ ರಾಠಿ ಮಂಗಳವಾರ ನಡೆದ ಪಂದ್ಯದಲ್ಲಿ ಆರ್ ಸಿಬಿಯ ಜಿತೇಶ್ ಶರ್ಮಾ ಅವರನ್ನು `ಮಂಕಡ್’ ಮಾಡಲು ಹೋಗಿ ವಿಫಲರಾಗಿದ್ದು ಗೊತ್ತೇ ಇದೆ. ಅದಕ್ಕೆ ಕ್ರಿಕೆಟ್ ವಲಯದಿಂದ ಆಕ್ಷೇಪ ವ್ಯಕ್ತವಾಗಿದ್ದು. ಆರ್ ಸಿಬಿ ಅಭಿಮಾನಿಗಳಂತೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದೃಶ್ಯವನ್ನು ಪೆವಿಲಿಯನ್ ನಿಂದ ನೋಡುತ್ತಿದ್ದ ವಿರಾಟ್ ಕೊಹ್ಲಿ ಅವರಂತೂ ಕೆಂಡಾಮಂಡಲವಾಗಿದ್ದರು. ಆ ಕ್ಷಣ ತಮ್ಮ ಕೈಯಲ್ಲಿದ್ದ ನೀರಿನ ಬಾಟಲ್ ಅನ್ನು ಎಸೆದು ತಮ್ಮ ಸಿಟ್ಟನ್ನು ಪ್ರದರ್ಶಿಸಿದ್ದರು. ಈ ದೃಶ್ಯ ಈಗ ವೈರಲ್ ಆಗುತ್ತಿದೆ.

ಹೈಲೈಟ್ಸ್‌:

  • ಲಖನೌ ಸೂಪರ್ ಜೈಂಟ್ಸ್ ತಂಡದ ದಿಗ್ವೇಶ್ ರಾಠಿಯಿಂದ ಆರ್ ಸಿಬಿಯ ಜಿತೇಶ್ ಶರ್ಮಾ ಅವರನ್ನು ‘ಮಂಕಡ್’ ಮಾಡುವ ಪ್ರಯತ್ನ
  • ಇದಕ್ಕೆ ಡ್ರೆಸ್ಸಿಂಗ್ ರೂನಲ್ಲಿ ಬಾಟಲಿ ಎಸೆಯುವ ಮೂಲಕ ತೀವ್ರ ಅಸಮಾಧಾನ ಹೊರಹಾಕಿದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ
  • ‘ಮಂಕಡ್’ ನಿಯಮದ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು ಕ್ರೀಡಾಸ್ಪೂರ್ತಿಗೆ ವಿರುದ್ಧ ಎಂಬ ವಾದ



Source link