Karnataka news paper

ಕೇರಳ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಟಿ ಥಾಮಸ್‌ ಕ್ಯಾನ್ಸರ್‌ಗೆ ಬಲಿ


ಹೈಲೈಟ್ಸ್‌:

  • ಕೇರಳ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಪಿ.ಟಿ ಥಾಮಸ್‌ ನಿಧನ
  • ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಿರಿಯ ನಾಯಕ
  • ನಾಲ್ಕು ಬಾರಿ ಶಾಸಕರಾಗಿ ಒಂದು ಬಾರಿ ಸಂಸದರಾಗಿದ್ದ ಥಾಮಸ್‌

ತಿರುವನಂತಪುರಂ: ಕೇರಳದ ಹಿರಿಯ ಕಾಂಗ್ರೆಸ್‌ ನಾಯಕ ತೃಕ್ಕಾಕ್ಕರ ವಿಧಾನಸಭಾ ಕ್ಷೇತ್ರ ಶಾಸಕ ಪಿಟಿ ಥಾಮಸ್ (PT Thomas) ಬುಧವಾರ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಅಸು ನೀಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ನಾಲ್ಕು ಬಾರಿ ಶಾಸಕ ಹಾಗೂ ಇಂದು ಬಾರಿ ಸಂಸದರಾಗಿದ್ದ ಅವರು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಸಾವಿಗೆ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಹಿತ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.

‘ಮೇರೆ ಪಾಸ್ ಬೆಹೆನ್ ಹೈ’: ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಸಿನಿಮಾ ಡೈಲಾಗ್!
‘ಪಿ.ಟಿ.ಥಾಮಸ್ ಅವರು ವಿಧಾನಸಭೆಯ ಒಳಗೂ ಹೊರಗೂ ಸ್ಪಷ್ಟ ರಾಜಕೀಯ ನಿಲುವು ಹೊಂದಿದ್ದರು. ಅವರು ಉತ್ತಮ ವಾಗ್ಮಿ ಮತ್ತು ಸಂಘಟಕರಾಗಿದ್ದರು. ರಾಜ್ಯವು ಒಳ್ಳೆಯ ಸಂಸದೀಯ ಪಟುವನ್ನು ಕಳೆದುಕೊಂಡಿದೆ’ ಎಂದು ಕಂಬನಿ ಮಿಡಿದಿದ್ದಾರೆ.

ಪಿಟಿ ಥಾಮಸ್ ಅವರು ಅಚಲ ಸಮಾಜವಾದಿಯಾಗಿದ್ದರು. ಸಮರ್ಥ ಸಂಸದೀಯ ಪಟುವೂ ಆಗಿ ಬಹಳ ಜನಪ್ರಿಯತೆ ಪಡೆದಿದ್ದರು. ಪರಿಸರ ಸಂರಕ್ಷಣೆ ಸಂಬಂಧ ಥಾಮಸ್ ಅವರ ನಿಲುವು ಗಮನಾರ್ಹವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಇನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡ ಪಿಟಿ ಥಾಮಸ್ ವಿಯೋಗಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ. ‘ಥಾಮಸ್‌ ಅವರು ಕಾಂಗ್ರೆಸ್ ವಿಚಾರಗಳನ್ನು ಆಳವಾಗಿ ಇಟ್ಟುಕೊಂಡು ಅದರಂತೆ ನಡೆದುಕೊಂಡವರು. ವ್ಯಕ್ತಿ ಮತ್ತು ಸಮುದಾಯಗಳನ್ನು ಒಟ್ಟಿಗೆ ಇಟ್ಟುಕೊಂಡು ಜಾತ್ಯತೀತತೆಯನ್ನು ಉಳಿಸಿದ ಮಹಾನ್‌ ವ್ಯಕ್ತಿ ಅವರು ಎಂದು ರಾಹುಲ್ ಕಂಬನಿ ಮಿಡಿದಿದ್ದಾರೆ.

ಎರಡು ದಿನಗಳ ಭೇಟಿಗಾಗಿ ತಮ್ಮ ಲೋಕಸಭಾ ಕ್ಷೇತ್ರ ವಯನಾಡ್‌ಗೆ ಬಂದಿರುವ ರಾಹುಲ್‌ ಗಾಂಧಿ, ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದು, ಥಾಮಸ್‌ ಅವರ ಅಂತಿಮ ದರ್ಶನಕ್ಕೆ ಕೊಚ್ಚಿಗೆ ಆಗಮಿಸಿದ್ದಾರೆ. ಕೇರಳ ಪ್ರದೇಶ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರೂ ಆಗಿರುವ ಥಾಮಸ್‌ ಅವರ ನಿಧನ ಹಿನ್ನೆಲೆ ಕಾಂಗ್ರೆಸ್‌ ಆಯೋಜಿಸಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದು, ಮೂರು ದಿನಗಳ ಕಾಲ ಶೋಕಾಚರಣೆ ಮಾಡಲಿದೆ.

ಗೋವಾದಲ್ಲಿ ಕಾಂಗ್ರೆಸ್ ಶೋಚನೀಯ ಸ್ಥಿತಿ: 17 ಶಾಸಕರಿದ್ದ ಪಕ್ಷದಲ್ಲಿ, ಉಳಿದಿರುವುದು ಇಬ್ಬರು ಮಾತ್ರ!
1950ರ ಡಿಸೆಂಬರ್ 12ರಂದು ಇಡುಕ್ಕಿ ಜಿಲ್ಲೆಯ ರಾಜಮುಡಿಯ ಪುಥಿಯಪರಂಬಿಲ್‌ ಗ್ರಾಂದ ಉಪ್ಪುತೋಡು ಎಂಬಲ್ಲಿ ಥಾಮಸ್ ಅವರ ಜನನ ಆಗಿತ್ತು. ತೊಡುಪುಳದ ನ್ಯೂಮನ್ ಕಾಲೇಜು, ತಿರುವನಂತಪುರಂನ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ್ದರು.

ಕೆಎಸ್‌ಯು ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಥಾಮಸ್‌ ಅವರು, ಕೆಎಸ್‌ಯು ಇಡುಕ್ಕಿ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1980ರಲ್ಲಿ ಯುವ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾದರು. 2007ರಲ್ಲಿ ಇಡುಕ್ಕಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದರು.

ನಾನೂ ಹಿಂದೂ.. ಆದ್ರೆ ಹಿಂದುತ್ವವಾದಿ ಅಲ್ಲ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕೆಪಿಸಿಸಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಎಐಸಿಸಿ ಸದಸ್ಯರಾಗಿ, ಯುವಜನ ಕಲ್ಯಾಣ ರಾಷ್ಟ್ರೀಯ ಸಮಿತಿಯ ನಿರ್ದೇಶಕರಾಗಿ, ಕೆಎಸ್‌ಯು ಮುಖವಾಣಿ ಕಲಾಶಾಲಾದ ಸಂಪಾದಕರಾಗಿ, ಚೆಪ್ಪ್ ಮ್ಯಾಗಜೀನ್‌ನ ಸಂಪಾದಕರಾಗಿ, ಕಲ್ಚರಲ್ ಆರ್ಗನೈಸೇಷನ್ ಆಫ್ ಕಲ್ಚರ್‌ನ ರಾಜ್ಯ ಅಧ್ಯಕ್ಷರಾಗಿ ಮತ್ತು ಕೇರಳ ಗ್ರಂಥಶಾಲಾ ಸಂಘದಕಾರ್ಯಕಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.



Read more