
ಬಿಜೆಪಿ ಕಾರ್ಯಕರ್ತರು ಜಮ್ಮುವಿನಲ್ಲಿ ಟೈರ್ಗಳನ್ನು ಸುಟ್ಟು ಬುಧವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ

ಭಯೋತ್ಪಾದನಾ ನೆಲೆಯನ್ನು ಧ್ವಂಸಗೊಳಿಸಲು ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿ. ಭಯೋತ್ಪಾದಕರು ಮತ್ತು ಜಮ್ಮು–ಕಾಶ್ಮೀರದಲ್ಲಿರುವ ಅವರ ಬೆಂಬಲಿಗರು ಇಲ್ಲಿಂದ ತೊಲಗಬೇಕು
ಯದುವೀರ್ ಸೇಥಿ ಬಿಜೆಪಿ ನಾಯಕ ಜಮ್ಮು

ಜಮ್ಮುವಿನಲ್ಲಿ ಪ್ರತಿಭಟನೆ ನಡೆಸದಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬುಧವಾರ ತಡೆದರು –ಪಿಟಿಐ ಚಿತ್ರ

ಹತ್ಯೆಗೆ ಪ್ರತೀಕಾರ ಬೇಕು. ಭದ್ರತಾ ಪಡೆಗಳು ಹತ್ಯೆಗಳಿಗೆ ಸೇಡು ತೀರಿಸಿಕೊಳ್ಳಬೇಕು
ರಾಜೇಶ್ ಗುಪ್ತಾ ಬಿಜೆಪಿ ನಾಯಕ ಜಮ್ಮು

ಭಯೋತ್ಪಾದನಾ ದಾಳಿಯನ್ನು ಖಂಡಿಸಿ ವಿವಿಧ ಪಕ್ಷಗಳ ಕಾರ್ಯಕರ್ತರು ವಿವಿಧ ಸಂಘಟನೆಗಳ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ

1947ರಿಂದ ಆಗೀಗ ನಮ್ಮ ನೆತ್ತರು ಹರಿಸುತ್ತಿರುವ ನಮ್ಮ ವೈರಿಗಳನ್ನು ಸದೆಬಡಿಯಲು ದೇಶವು ತನ್ನೆಲ್ಲಾ ಅಧಿಕಾರವನ್ನು ಬಳಿಸಿಕೊಳ್ಳಬೇಕು. ಇದು ‘ಜಿಹಾದ್’ ಅಲ್ಲ ಭಯೋತ್ಪಾದನೆಯಷ್ಟೆ
ಅಲಿ ಹಸನ್ ಕಾಶ್ಮೀರದಲ್ಲಿರುವ ಜಾಮಿಯಾ ಮಸೀದಿಯ ಇಮಾಮ್

ಕಾಶ್ಮೀರದ ವಿವಿಧ ಪತ್ರಿಕೆಗಳು ಬುಧವಾರ ತಮ್ಮ ಮುಖಪುಟವನ್ನು ಕಪ್ಪು ಬಣ್ಣವನ್ನು ಬಳಸಿ ವಿನ್ಯಾಸ ಮಾಡಿದ್ದವು –ಪಿಟಿಐ ಚಿತ್ರ

ಕಾಶ್ಮೀರದವರಾದ ನಮಗೆ ನಾಚಿಕೆಯಾಗಿದೆ. ಈ ದೇಶದ ಜನರಲ್ಲಿ ನಾನು ಕ್ಷಮೆ ಕೇಳಲು ಬಯಸುತ್ತೇನೆ. ನಮಗೆ ಅತೀವ ದುಃಖವಾಗಿದೆ. ಸರ್ಕಾರವು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು
ಮೆಹೆಬೂಬಾ ಮುಫ್ತಿ ಪಿಡಿಪಿ ಮುಖ್ಯಸ್ಥೆ