Karnataka news paper

ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ವಿಪಕ್ಷಗಳ ಕರೆ


ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ

ಭಯೋತ್ಪಾದಕರ ದಾಳಿಯಿಂದ ಬಹಳ ದುಃಖಿತಳಾಗಿರುವೆ. ಇದು ಅತ್ಯಂತ ಖಂಡನೀಯ ಹಿಂಸಾಕೃತ್ಯ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು

ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಯಾವುದೇ ದೃಷ್ಟಿಯಿಂದ ನೋಡಿದರೂ ಇದು ಖಂಡನೀಯ ದಾಳಿ. ಭಯೋತ್ಪಾದಕ ದಾಳಿ ಕುರಿತ ಚಿತ್ರಗಳು ಭಯಂಕರ ಹಾಗೂ ಹೃದಯವಿದ್ರಾವಕ. ಜಮ್ಮು–ಕಾಶ್ಮೀರದಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸಿದಾಗ ಮಾತ್ರ ಸ್ಥಳೀಯರು ಹಾಗೂ ಪ್ರವಾಸಿಗರು ಕೂಡ ಸುರಕ್ಷಿತವಾಗಿರುತ್ತಾರೆ

–ಅಖಿಲೇಶ ಯಾದವ್ ಸಮಾಜವಾದಿ ಪಕ್ಷದ ಮುಖ್ಯಸ್ಥ

ಉಗ್ರರು ನಡೆಸಿರುವ ಈ ಹೇಡಿತನದ ದಾಳಿ ಖಂಡನೀಯ. ಮುಗ್ಧರನ್ನು ಗುರಿಯಾಗಿಸಿದ ನಡೆದ ಕೃತ್ಯ ಮಾನವೀಯತೆ ಮೇಲಿನ ದಾಳಿ. ಎಲ್ಲ ಬಗೆಯ ಭಯೋತ್ಪಾದನೆಯನ್ನು ಪಕ್ಷ ಖಂಡಿಸುತ್ತದೆ. ಈ ದುಃಖದ ಗಳಿಗೆಯಲ್ಲಿ ದೇಶವೇ ಒಗ್ಗಟ್ಟಾಗಿದೆ

–ಅರವಿಂದ ಕೇಜ್ರಿವಾಲ್ ಎಎಪಿ ಸಂಚಾಲಕ

ಉಗ್ರರ ದಾಳಿ ಅತ್ಯಂತ ಖಂಡನೀಯ. ತಪ್ಪಿತಸ್ಥರು ಕಠಿಣ ಶಿಕ್ಷೆ ಅರ್ಹರು

–ಅಸಾದುದ್ದೀನ್‌ ಒವೈಸಿ ಎಐಎಂಐಎಂ ಮುಖ್ಯಸ್ಥ

ಈ ಹೀನ ಕೃತ್ಯ ಎಸಗಿದವರ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗುವುದನ್ನು ಕೇಂದ್ರ ಸರ್ಕಾರ ಖಾತ್ರಿಪಡಿಸಬೇಕು. ಜಮ್ಮು–ಕಾಶ್ಮೀರ ಜನರ ಸಮಸ್ಯೆಗಳಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಕೇಂದ್ರ ಕ್ರಮ ಕೈಗೊಳ್ಳಬೇಕು

–ಸಿಪಿಎಂ

ಈ ಭಯೋತ್ಪಾದಕ ದಾಳಿಯನ್ನು ಆಕ್ರಮಣಕಾರಿ ದೇಶಭಕ್ತಿ ಮತ್ತು ಕೋಮು ಸಂಕಥನ ಸೃಷ್ಟಿಗೆ ಬಳಸಿಕೊಳ್ಳುವ ಪ್ರಯತ್ನಗಳು ನಡೆಯಬಾರದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದಾದ್ಯಂತ ಜನರು ಒಟ್ಟಾಗಿ ನಿಲ್ಲುವುದು ಅಗತ್ಯ. ಇಂತಹ ದುರಂತಗಳನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ವಿಭಜಕ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು

–ಸಿಪಿಎಂ(ಎಂಎಲ್‌)



Read more from source