Karnataka news paper

ಪ್ರತಿಮೆಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಮಟ್ಟ ಹಾಕದೆ ಬಿಡುವುದಿಲ್ಲ: ಆರಗ ಜ್ಞಾನೇಂದ್ರ


ಹೈಲೈಟ್ಸ್‌:

  • ಪ್ರತಿಮೆ ಹಾನಿಗೊಳಿಸಿದವರ ವಿರುದ್ಡ್ ಆರಗ ಜ್ಞಾನೇಂದ್ರ ಕಿಡಿ
  • ಪ್ರತಿಮೆಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಮಟ್ಟ ಹಾಕದೆ ಬಿಡುವುದಿಲ್ಲ
  • ಬೆಳಗಾವಿಯಲ್ಲಿ ಗೃಹ ಸಚಿವರ ಎಚ್ಚರಿಕೆ

ಬೆಳಗಾವಿ : ಛತ್ರಪತಿ ಶಿವಾಜಿ ಮಹಾರಾಜರು, ಸಂಗೊಳ್ಳಿ ರಾಯಣ್ಣ ಹಾಗೂ ಬಸವೇಶ್ವರರ ಮೂರ್ತಿಗೆ ಅವಮಾನ ಮಾಡಿದವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯದ ವಿರುದ್ಧ ಹೋರಾಟ ಮಾಡುವ ವೇಳೆ ಸಂಚು ರೂಪಿಸಿ ಹಿಡಿದುಕೊಟ್ಟ ವ್ಯಕ್ತಿಗಳ ವಂಶಕ್ಕೆ ಸೇರಿದವರು. ಇಂಥ ಕಿಡಿಗೇಡಿಗಳನ್ನು ಮಟ್ಟ ಹಾಕದೆ ಬಿಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಸಿದರು.

ಮಂಗಳವಾರ ‌ಆನಗೋಳದಲ್ಲಿ ಭಗ್ನಗೊಂಡಿದ್ದ ರಾಯಣ್ಣ ಮೂರ್ತಿ ಮರುಸ್ಥಾಪನೆ ಮಾಡಿದ ಕನಕದಾಸ ಕಾಲೋನಿಗೆ ಭೇಟಿ ನೀಡಿ‌ದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷ ಸ್ವಾತಂತ್ರ್ಯ ದಿನವನ್ನು ಅಮೃತ ಮಹೋತ್ಸವವನ್ನು ಆಚರಿಸಬೇಕೆಂದು ದೇಶಕ್ಕೆ ಕರೆ ನೀಡಿದ್ದಾರೆ‌.75 ವರ್ಷ ಕಳೆದ ಸ್ವಾತಂತ್ರೋತ್ಸವಕ್ಕೆ ಹಬ್ಬದಂದು ಮಹಾನ್ ಪುರುಷರಿಗೆ ಅವಮಾನ ಮಾಡುವುದು ಮಾನಸಿಕ ರೋಗಿಗಳ ಕೆಲಸ ಎಂದರು.

ಇಂಥ ಸಂದರ್ಭದಲ್ಲಿ ನಾವು ಸುಖವಾಗಿರಲು ಮಹಾನ್ ಪುರುಷರು ಪ್ರಾಣ ತೆತ್ತು ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ರಾಯಣ್ಣ, ಶಿವಾಜಿ, ಜಗಜ್ಯೋತಿ ಬಸವೇಶ್ವರರು ಮೂರು ಜನ ಭಾರತದ ಇತಿಹಾಸದಲ್ಲಿ ಪ್ರಾತಃಸ್ವರಣಿಯ ವ್ಯಕ್ತಿಗಳು. ಅವರು ಯಾವುದೇ ಭಾಷೆ, ಭೂ‌ ಭಾಗಕ್ಕೆ ಸಮೀತಿವಾದವರಲ್ಲ. ದೇಶವನ್ನು ಸಬಲಗೊಳಿಸುವ ಕೆಲಸ ಮಾಡಿದವರು. ಬಸವಣ್ಣನವರು ವಿಶ್ವಕಂಡ ಮಹಾನ್ ವ್ಯಕ್ತಿ ಸಮಾಜದಲ್ಲಿ‌ ಸಾಕಷ್ಟು ಬದಲಾವಣೆ ತರಲು ಹೋರಾಟ ಮಾಡಿದ್ದಾರೆ.

ಇವರ ಭಾವಚಿತ್ರಕ್ಕೆ ಹಾಗೂ ಕನ್ನಡದ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಈ ಭಾಗದಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಅನ್ಯೋನ್ಯವಾಗಿದ್ದಾರೆ. ಸುಖ, ಸಂತೋಷದಿಂದ ಇವರಿಬ್ಬರು ಬದುಕು ಕಟ್ಟಿಕೊಂಡಿದ್ದಾರೆ. ಕೆಲ ಕಿಡಿಗೇಡಿಗಳು ಹುಳಿ ಹಿಂಡುವ. ಕೆಲಸ ಮಾಡಿದ್ದಾರೆ. ಇವರನ್ನು ನಾವು ಬಿಡುವುದಿಲ್ಲ. ಖಂಡಿತವಾಗಿಯೂ ಬಿಡುವುದಿಲ್ಲ.

ಮಹಾರಾಷ್ಟ್ರದಿಂದ ಕಲಬುರಗಿಗೆ ಆಗಮಿಸುತ್ತಿದ್ದ ಬಸ್ ಗೆ ಎಂಇಎಸ್ ಪುಂಡರಿಂದ ಕಪ್ಪು ಮಸಿ

ರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟಂಥ ವ್ಯಕ್ತಿಗಳು ಇದ್ದರೋ ಅವರ ಕುಲದವರು ಈ ಕೆಲಸ ಮಾಡಿದವರು. ಅಂಥವರ ಸಂಹಾರ ಮಾಡುತ್ತೇವೆ. ಅವರು ಮತ್ತೆ ತಲೆ ಎತ್ತದವರಂತೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಪೊಲೀಸರು ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿ 38. ಜನರು ಬಂಧನ ಆಗಿದೆ ಎಂದರು.

ಬಸವಣ್ಣನ ವಿರೂಪಗೊಳಿಸಿ ಕನ್ನಡ ಧ್ವಜ ಸುಟ್ಟವರಲ್ಲಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಹಾಗೆ ಶಿವಾಜಿ ವಿಗ್ರಹಕ್ಕೆ ಮಸಿ ಬಳಿದವರನ್ನು ಏಳು ಜನರನ್ನು ಬಂಧಿಸಿದ್ದಾರೆ. ಇವರ ಮೇಲೆ ಗೂಂಡಾ ಕಾಯ್ದೆ ಹಾಕಬೇಕೆಂದು ಚಿಂತನೆ ನಡೆಸಲಾಗಿದೆ. ಮತ್ತು ಇದರ ಹಿಂದೆ ಯಾರಿದ್ದಾರೆ ಎಂದು ಪೊಲೀಸರು ವಿಶೇಷವಾದ ತನಿಖೆ ಮಾಡುತ್ತಿದ್ದಾರೆ. ಇದು ಹೊರಗಡೆ ಬಂದು ಅವರ ಮುಖವಾಡ ಕಳಚಬೇಕು ಎಂದು ಹೇಳಿದರು.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಮರಾಠಿಗರು, ಕನ್ನಡಿಗರು ಇದ್ದಾರೆ. ಇಂಥ ನೀಚ ಕೃತ್ಯ ಎಸಗುವುದು ನಡೆಯುತ್ತದೆ. ಇದಕ್ಕೆ ಸಾರ್ವಜನಿಕರು ಮನಸ್ಸು ಕೊಡಬಾರದು. ಯಾರು ಪರಸ್ಪರ ಮನಸ್ಸು ಹಾಳು ಮಾಡಿಕೊಳ್ಳಬಾರಸು. ಸರಕಾರ ನಿಮ್ಮ ಜೊತೆ ಇದೆ. ನಾವು ಮಹಾರಾಷ್ಟ್ರ ಸರಕಾರದ ಜತೆಗೂ ಮಾತನಾಡುತ್ತಿದ್ದೇವೆ ಎಂದರು.

ಎರಡೂ ರಾಜ್ಯದವರಿಗೆ ಬೆಂಕಿ‌ಹಚ್ಚುವ ದುಷ್ಕರ್ಮಿಗಳ ವಿರುದ್ಧ ಬಿಗಿಯಾದ ಕ್ರಮ ಕೈಗೊಳ್ಳುತ್ತೇವೆ. ಎಂಇಎಸ್ ಬ್ಯಾನ್ ಮಾಡುವುದರ ಕುರಿತು ಚಿಂತನೆ ನಡೆಸಲಾಸಗಿದೆ. ದೇಶಭಕ್ತರಲ್ಲ. ದೇಶ ದ್ರೋಹಿಗಳು ಎಂದು ಹೇಳಿದರು.



Read more