
17ನೇ ಶತಮಾನದ ಮೊಘಲ್ ದೊರೆ ಔರಂಗಜೇಬ್ ಇವತ್ತಿಗೆ ಅಪ್ರಸ್ತುತ. ಯಾವುದೇ ಹಿಂಸಾಚಾರವು ಸಮಾಜದ ಆರೋಗ್ಯಕ್ಕೆ ಒಳ್ಳೆಯದಲ್ಲ
ಸುನೀಲ್ ಅಂಬೇಕರ್ಆರ್ಎಸ್ಎಸ್ ನಾಯಕ

ನಾಗ್ಪುರ ಕೋಮು ಗಲಭೆ ಪೂರ್ವಯೋಜಿತ ಕೃತ್ಯ. ಅಪರಾಧಿಗಳು ಎಲ್ಲಿಯೇ ಅಡಗಿಕೊಂಡಿದ್ದರೂ ಅವರನ್ನು ಹುಡುಕಿ ಬಂಧಿಸುತ್ತೇವೆ
ದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ
ವಿಎಚ್ಪಿ, ಬಜರಂಗದಳ ಕಾರ್ಯಕರ್ತರು ಶರಣು
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಎಂಟು ಕಾರ್ಯಕರ್ತರು ಕೊತ್ವಾಲಿ ಪೊಲೀಸರ ಮುಂದೆ ಶರಣಾದರು. ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಔರಂಗಜೇಬ್ನ ಸಮಾಧಿ ತೆರವಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ಈ ಸಂಘಟನೆಗಳ ಕೆಲವು ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.