ಕ್ಯಾಶ್ಲೆಸ್ ಪೇಮೆಂಟ್ಗೆ ಆದ್ಯತೆ:
1000 ಲೀಟರ್ ಕಾವೇರಿ ನೀರಿಗೆ 90 ರೂ. ದರ ನಿಗದಿಸಿರುವ ಜಲಮಂಡಳಿ, ನೀರು ಪಡೆಯಲು ಬುಕ್ಕಿಂಗ್ ಮಾಡುವ ವ್ಯವಸ್ಥೆ ಕಲ್ಪಿಸುತ್ತಿದೆ. ನೀರಿನ ಅಗತ್ಯವಿರುವ ಗ್ರಾಹಕರು ತಾವೇ ಟ್ಯಾಂಕರ್ ವ್ಯವಸ್ಥೆ ಮಾಡಿಕೊಂಡು ನೀರನ್ನು ತರಿಸಿಕೊಳ್ಳಬಹುದಾಗಿದೆ. ಮಂಡಳಿಯ ಟ್ಯಾಂಕರ್ ನೀರು ಬೇಕೆಂದರೆ ಗ್ರಾಹಕರು ಬೇಕಿರುವ ನೀರಿನ ಪ್ರಮಾಣ, ಸಮಯ ಮತ್ತು ಸ್ಥಳಗಳನ್ನು ತಿಳಿಸಿ ಬುಕ್ಕಿಂಗ್ ಮಾಡಬೇಕಿದೆ.
ಟ್ಯಾಂಕರ್ ಮೂಲಕ ನೀರು ಪೂರೈಸಲು ಎಷ್ಟು ಸಮಯವಾಗಲಿದೆ, ಟ್ಯಾಂಕರ್ ಬಾಡಿಗೆ ಎಷ್ಟಾಗಲಿದೆ ಎಂಬುದನ್ನು ಜಲಮಂಡಳಿ ಮುಂಚಿತವಾಗಿಯೇ ತಿಳಿಸಲಿದೆ. ಗ್ರಾಹಕರೇ ಟ್ಯಾಂಕರ್ ಬಾಡಿಗೆ ಪಾವತಿಸಬೇಕಿದೆ. ಆನ್ಲೈನ್ ಮೂಲಕವೇ ಹಣ ಪಾವತಿ ಮಾಡಬೇಕಿದ್ದು, ನಗದು ವಹಿವಾಟಿಗೆ ಅವಕಾಶ ನೀಡುವುದಿಲ್ಲ ಎಂದು ಮಂಡಳಿ ತಿಳಿಸಿದೆ.
ಕಾವೇರಿ ಕನೆಕ್ಟ್ ಸೆಂಟರ್ ಎಲ್ಲೆಲ್ಲಿ?:
ಗುಂಜೂರು ಕ್ರೀಡಾ ಮೈದಾನ, ಬೆಳ್ಳಂದೂರು ಅಮಾನಿಕೆರೆ ಎಸ್ಟಿಪಿ, ವರ್ತೂರು ಕೋಡಿ, ಗಂಗೊಂಡನಹಳ್ಳಿಪಂಚಾಯತ್ ಕಚೇರಿ, ಕಾಡುಗೋಡಿ ಪ್ಲಾಂಟೇಷನ್, ಗರುಡಾಚಾರ್ ಕಲ್ಯಾಣಮಂಟಪ ಫೀನಿಕ್ಸ್ ಮಾಲ್ ಹತ್ತಿರ, ನಲ್ಲೂರಹಳ್ಳಿ, ರಾಜಪಾಳ್ಯ, ಕೊಡಿಗೇಹಳ್ಳಿ, ಬಸವನಗರ ಬಸ್ ನಿಲ್ದಾಣ, ಓಎಂಬಿಆರ್ ಜಿಎಲ್ಆರ್(ಗ್ರೌಂಡ್ ಲೆವೆಲ್ ರಿಸರ್ವಾಯರ್), ರಾಮಮೂರ್ತಿನಗರ, ಕಲ್ಯಾಣನಗರ, ಎಚ್ಬಿಆರ್ ಲೇಔಟ್, ಹಲಸೂರು ಪಂಪ್ಹೌಸ್, ದೊಮ್ಮಲೂರು ಸರ್ವಿಸ್ ಸ್ಟೇಷನ್, ದೊಡ್ಡಕನ್ನಹಳ್ಳಿ ಜಿಎಲ್ಆರ್, ಕೂಡ್ಲುಜಿಎಲ್ಆರ್, ಸಹಕಾರನಗರ, ಕಾಫಿಬೋರ್ಡ್ ಲೇಔಟ್ ಜಿಎಲ್ಆರ್, ಮಾರುತಿನಗರ ಜಿಎಲ್ಆರ್, ಕೆಜಿ ಟವರ್ ಜಿಎಲ್ಆರ್, ಆರ್.ಟಿ.ನಗರ, ಮನೋರಾಯನಪಾಳ್ಯ.
ಜಿಎಲ್ಆರ್, ಸಿಂಗಾಪುರ ಜಿಎಲ್ಆರ್, ವಿದ್ಯಾರಣ್ಯಪುರ ಜಿಎಲ್ಆರ್, ಯಲಹಂಕ ನ್ಯೂ ಟೌನ್, ಯಲಹಂಕ ಓಲ್ಡ್ ಟೌನ್, ಎಂಇಐ ಲೇಔಟ್ ಜಿಎಲ್ಆರ್, ಹೆಗ್ಗನಹಳ್ಳಿ ಜಿಎಲ್ಆರ್, ಎಸ್ಜಿಕೆ ಜಿಎಲ್ಆರ್, ಚಿಕ್ಕಸಂದ್ರ ಜಿಎಲ್ಆರ್, ಐಡಿಯಲ್ ಹೋಮ್ಸ್ ಸರ್ವಿಸ್ ಸ್ಟೇಷನ್, ಕೆಂಗೇರಿ ಸರ್ವಿಸ್ ಸ್ಟೇಷನ್, ಆರ್.ಆರ್.ನಗರ ಸರ್ವಿಸ್ ಸ್ಟೇಷನ್, ಕೊತ್ತನೂರು ದಿಣ್ಣೆ, ಜಂಬೂಸವಾರಿ ದಿಣ್ಣೆ, ಕೋಡಿಚಿಕ್ಕನಹಳ್ಳಿ, ಎಚ್ಎಸ್ಆರ್ ಲೇಔಟ್, ಅಂಜನಾಪುರ, ಗೊಟ್ಟಿಗೆರೆ, ನಾರಾಯಣನಗರ ಸರ್ವಿಸ್ ಸ್ಟೇಷನ್, ಬೇಗೂರು ಪಂಪ್ಹೌಸ್, ಕುಮಾರಸ್ವಾಮಿ ಲೇಔಟ್ ಜಿಎಲ್ಆರ್, ಬನಶಂಕರಿ ಜಿಎಲ್ಆರ್, ಬನಗಿರಿ ಪಿಪಿ ಲೇಔಟ್ ಜಿಎಲ್ಆರ್, ಲಿಂಗಧೀರನಹಳ್ಳಿಯಲ್ಲಿ ಕಾವೇರಿ ಕನೆಕ್ಟ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ. ಹಲವೆಡೆ ಜಿಎಲ್ಆರ್ ಕೇಂದ್ರಗಳನ್ನೇ ‘ಕಾವೇರಿ ಕನೆಕ್ಟ್ ಸೆಂಟರ್’ಗಳನ್ನಾಗಿ ಮಾಡಲಾಗಿದೆ. ಉಳಿದಂತೆ ಸುಮಾರು 15 ಕಡೆಗಳಲ್ಲಿ ಸುಮಾರು 50 ಸಾವಿರ ಲೀಟರ್ ಸಾಮರ್ಥ್ಯಕ್ಕೂ ಹೆಚ್ಚಿನ ಜಿಆರ್ಪಿ ಟ್ಯಾಂಕರ್ಗಳನಿಟ್ಟು ನೀರು ಪೂರೈಸಲಿದೆ.
ಅಂತರ್ಜಲ ಮಟ್ಟದ ಕುಸಿಯಬಹುದಾದ ಪ್ರದೇಶಗಳಲ್ಲಿ ಜನರಿಗೆ ನೀರಿಗೆ ತೊಂದರೆಯಾಗಬಾರದು ಎಂದು ‘ಕಾವೇರಿ ಕನೆಕ್ಟ್ ಸೆಂಟರ್’ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಯಾವ ಪ್ರದೇಶಗಳಿಗೆ ಅಗತ್ಯವಿದೆ ಎಂಬುದನ್ನು ಪರಿಶೀಲಿಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇನ್ನೂ ಹೆಚ್ಚಿನ ಕೇಂದ್ರಗಳ ಅಗತ್ಯವಿದ್ದರೆ, ತೆರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ. ಪಾರದರ್ಶಕತೆ ತರಲು, ನೀರಿನ ಖರೀದಿಗೆ ಆನ್ಲೈನ್ ಪಾವತಿ ವ್ಯವಸ್ಥೆ ತರಲು ನಿರ್ಧರಿಸಲಾಗಿದೆ ಡಾ.ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷ, ಜಲಮಂಡಳಿ ಹೇಳಿದ್ದಾರೆ.
Read more
[wpas_products keywords=”deal of the day sale today offer all”]