ರಥಸಪ್ತಮಿಯಾದ ಬಳಿಕ
ಸೂರ್ಯದೇವನ ಉರಿತಾಪ ದುಪ್ಪಟ್ಟಾಗಿದೆ. ಬೆಳಗ್ಗೆ 11 ಗಂಟೆಗೆ ಬಿಸಿಲು ಹೆಚ್ಚಾಗಲಿದ್ದು, ರಸ್ತೆಯಲ್ಲಿ ಓಡಾಡೋರ ಪರಿಸ್ಥಿತಿ ಹೇಳತೀರದು. ಪಾದಚಾರಿ ಹಾಗೂ ವಾಹನ ಸವಾರರು ಬಿಸಿಲ ಬೇಗೆಗೆ ತತ್ತರಿಸಿದ್ದು, ಉಸ್ಸಪ್ಪಾ ಅಂತ ನಿಟ್ಟುಸಿರು ಬಿಡುತ್ತಿದ್ದಾರೆ.
ಎಳನೀರಿಗೆ ಭರ್ಜರಿ ಡಿಮ್ಯಾಂಡ್..!
ಹೇಳಿಕೇಳಿ ಬೇಸಿಗೆಯಲ್ಲಿ ಜನರು ತಂಪು ಪಾನೀಯಗಳಿಗೆ ಮೊರೆ ಹೋಗೋದು ಸರ್ವೇ ಸಾಮಾನ್ಯ. ಈ ಬಾರಿಯೂ ದಣಿವಾರಿಸಿಕೊಳ್ಳಲು ಜನರು ಎಳನೀರಿಗೆ ಮೊರೆ ಹೋಗ್ತಿದ್ದು, ಭರ್ಜರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಎಳನೀರನ್ನ ರೂ. 35 ರಿಂದ 40 ರೂ.ಗಳಿಗೆ ಮಾರಲಾಗುತ್ತಿದೆ. ಗ್ರಾಹಕರು ಕೂಡ ದುಡ್ಡು ಹೆಚ್ಚಾದ್ರೂ ಎಳನೀರು ಕೊಂಡು ತೃಪ್ತಿಯಾಗಿ ಕುಡಿಯುತ್ತಿದ್ದಾರೆ.
ಆಟೋದಲ್ಲಿ ಎಳನೀರು..!
ಆಟೋದಲ್ಲಿ ಎಳನೀರು ತಂದು ವ್ಯಾಪಾರಸ್ಥರು ಮಾರುತ್ತಿದ್ದಾರೆ. ಕನಿಷ್ಠ ದಿನವೊಂದಕ್ಕೆ 1 ಸಾವಿರ ಎಳನೀರು ಮಾರುತ್ತಿದ್ದು, ವ್ಯಾಪಾರಿಗಳಿಗೆ ಒಳ್ಳೆ ಲಾಭ ತಂದುಕೊಡುತ್ತಿದೆ. ದಿನನಿತ್ಯವೂ ಒಳ್ಳೆ ಡಿಮ್ಯಾಂಡ್ ಇದ್ದು, ತೋಟದಿಂದ ತಂದ ಅಷ್ಟೂ ಎಳನೀರು ಸೇಲ್ ಆಗ್ತಿದೆ. ಫ್ರೆಶ್ ಎಳನೀರು ಕುಡಿದು ಜನರು ಸಖತ್ ಕೂಲ್ ಆಗ್ತಿದ್ದಾರೆ.
ಸದ್ಯದ ಹವಾಮಾನದ ಪ್ರಕಾರ ನಿತ್ಯ 32 ಹಾಗೂ 33 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ. ಈ ಬಾರಿ ಗರಿಷ್ಠ 38 ಡಿಗ್ರಿ ದಾಖಲಾಗೋ ಸಾಧ್ಯತೆ ಇದೆ ಹವಾಮಾನ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಪಾರ್ಕ್ , ಮರದ ನೆರಳಿಗೆ ಜನರ ಮೊರೆ..!
ಹೆಚ್ಚಾಗಿ ಹೊರಗಡೆ ಕೆಲಸ ಮಾಡುವವರು ಮರದ ನೆರಳಲ್ಲಿ ಕೂತು ವಿಶ್ರಾಂತಿ ಮಾಡೋದು ತುಂಬಾ ಸಾಮಾನ್ಯವಾಗಿದೆ. ಫೀಲ್ಡ್ ವರ್ಕ್ ಮಧ್ಯೆ ಪಾರ್ಕ್ ಹಾಗೂ ಬೆಂಚ್ ಮೇಲೆ ಕೂತು ಸುಧಾರಿಸಿಕೊಳ್ಳುತ್ತಿದ್ದಾರೆ. ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆವರೆಗೂ ಬಿಸಿಲು ತಾಂಡವ ಮೆರೆಯುತ್ತಿದ್ದು, ಜನರನ್ನ ಸುಸ್ತು ಮಾಡಿಸಿಬಿಟ್ಟಿದೆ.
ಶಿವರಾತ್ರಿ ಬಳಿಕ ಮತ್ತಷ್ಟು ಶಕೆ…
ಮಾರ್ಚ್ 1 ರಂದು ಮಹಾ ಶಿವರಾತ್ರಿಯಿದ್ದು ಇದಾದ ಬಳಿಕ ಬಿಸಿಲು ಮತ್ತಷ್ಟು ಹೆಚ್ಚಾಗತ್ತೆ ಅನ್ನೋದು ಹಿಂದಿನಿಂದಲೂ ಬಂದಿರೋ ವಾಡಿಕೆ ಮುಂದಿನ ಎರಡು ತಿಂಗಳು ಕೆಂಡದಂತೆ ಸೂರ್ಯದೇವ ಸುಡಲಿದ್ದು, ಮುಂಗಾರು ಮಳೆ ಆರಂಭ ಅಗೋವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ.
Read more
[wpas_products keywords=”deal of the day sale today offer all”]