Karnataka news paper

ಪಂಜಾಬ್ ಚುನಾವಣೆ: ಬಿಜೆಪಿ, ಎಎಪಿ ಒಂದೇ ನಾಣ್ಯದ ಎರಡು ಮುಖಗಳು- ಪ್ರಿಯಾಂಕಾ ಗಾಂಧಿ


PTI

ಚಂಡಿಗಡ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಂಗಳವಾರ ಪಂಜಾಬ್ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ಜನ ಸಂಪರ್ಕ ಅಭಿಯಾದ ಅಂಗವಾಗಿ ರೂಪ್ನಾಗರ್ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಅವರೊಂದಿಗೆ ಟ್ರಾಕ್ಟರ್ ಸವಾರಿ ಮಾಡಿದ ಪ್ರಿಯಾಂಕಾ ಗಾಂಧಿ, ಬಿಜೆಪಿ ಮತ್ತು ಎಎಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಕರೆದರು.

ಜನರನ್ನು ಮರಳು ಮಾಡಲು ಬಿಜೆಪಿ ಹಾಗೂ ಎಎಪಿ ಹೊಸ ಹೊಸ ಬಗೆಯ ರಾಜಕೀಯ ಮಾಡುತ್ತಿವೆ. ಎಎಪಿಯ ಸಿದ್ದಾಂತ ಬಿಜೆಪಿಯ ಸಿದ್ಧಾಂತಕ್ಕೆ ಹೋಲಿಕೆಯಾಗುವಂತಿದ್ದು, ಆರ್ ಎಸ್ ಎಸ್ ನಿಂದ ಅದು ಹೊರಹೊಮ್ಮಿದೆ ಎಂದರು. ಪಂಜಾಬಿನ ಪ್ರಮುಖ ಪ್ರತಿಪಕ್ಷವಾಗಿರುವ ಎಎಪಿ, ದೆಹಲಿಯಲ್ಲಿ ಏನನ್ನೂ ಮಾಡಿಲ್ಲ.ಆಮ್ ಆದ್ಮಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿದರು.

ಇದನ್ನೂ ಓದಿ: ಪಂಜಾಬ್ ನಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದಿಲ್ಲ: ಮಾಜಿ ಸಿಎಂ ಅಮರಿಂದರ್ ಸಿಂಗ್

ಬಿಜೆಪಿ ಈ ಹಿಂದೆ ಗುಜರಾತ್ ಮಾದರಿ ಎಂದು ಹೇಳುತ್ತಿದ್ದಂತೆ ಈಗ ಎಎಪಿ ದೆಹಲಿ ಮಾದರಿ ಎನ್ನುತ್ತಿದೆ. ಆದರೆ ವಾಸ್ತವ ಏನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು. ಪಂಜಾಬ್ ವಿಧಾನಸಭೆಗೆ ಫೆಬ್ರವರಿ 20 ರಂದು ಚುನಾವಣೆ ನಡೆಯಲಿದೆ.



Read more

[wpas_products keywords=”deal of the day”]