Karnataka news paper

ರೈತರಿಗೆ ಸೌಲಭ್ಯ ವಿತರಣೆಯಲ್ಲಿ ನಿರ್ಲಕ್ಷ್ಯ: ಕೃಷಿ ಇಲಾಖೆ ವಿರುದ್ಧ ರೈತರ ಆಕ್ರೋಶ


ಪಾವಗಡ: ತುಂತುರು ನೀರಾವರಿಗಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರು ಏಜೆನ್ಸಿಯವರು ರೈತರನ್ನು ವಂಚಿಸಿ ಆಂಧ್ರದವರಿಗೆ ಮಾರಾಟ ಮಾಡುತ್ತಿದ್ದು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಮೂರ್ತಿ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಶನಿವಾರ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಪಾವಗಡ ಪಟ್ಟಣದ ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ ನಿಡಗಲ್‌ ಹಾಗೂ ನಾಗಲಮಡಿಕೆ ಮತ್ತು ಕಸಬಾದಲ್ಲಿ ತುಂತುರು ನೀರಾವರಿಗಾಗಿ ಅರ್ಜಿ ಸಲ್ಲಿಸಿದ ರೈತರಿಗೆ ಸೌಲಭ್ಯ ವಿತರಿಸುವ ವೇಳೆ ಮೂರು ಹೋಬಳಿಗಳ ಹಲವರು, ಅರ್ಜಿ ಸಲ್ಲಿಸಿ ವರ್ಷವೇ ಕಳೆದಿದೆ. ಇಂದಿಗೂ ಹಣ ಕಟ್ಟಿಸಿಕೊಂಡ ಏಜೆನ್ಸಿಗಳು ಸೌಲಭ್ಯ ವಿತರಣೆ ಮಾಡಿಲ್ಲ ಎಂದು ನಾಗಲಮಡಿಕೆ ಹೋಬಳಿಯ ಕೃಷಿ ಅಧಿಕಾರಿ ಷಂಶುದ್ದೀನ್‌ ಉನ್ನಿಸಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಆದರೆ, ತಮಗೆ ಸಮರ್ಪಕ ಉತ್ತರ ನೀಡದ ಕಾರಣ ತಮ್ಮ ಹಣವನ್ನು ಹಿಂದಿರುಗಿಸುವಂತೆಯೂ ಭಾರಿ ಗದ್ದಲ ಉಂಟು ಮಾಡಿದರು.

ತಾಲೂಕಿನಲ್ಲಿ ಹಲವು ಏಜೆನ್ಸಿಗಳು ತುಂತುರು ನೀರಾವರಿ ಪದ್ಧತಿ ಹಾಗೂ ಹನಿ ನೀರಾವರಿ ಪದ್ಧತಿಯಲ್ಲಿ ರೈತರಿಗೆ ಸತತವಾಗಿ ವಂಚಿಸಿವೆ. ಫಲಾನುಭವಿಗಳಿಗೆ ರೈತ ಉಪಕರಣಗಳನ್ನು ವಿತರಣೆ ಮಾಡದೇ ಹೆಚ್ಚು ಹಣಕ್ಕಾಗಿ ಏಜಿನ್ಸಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಆಂಧ್ರಪ್ರದೇಶಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ರೈತರಿಗೊಂದು ಗುಡ್ ನ್ಯೂಸ್: ಹನಿ ನೀರಾವರಿಗೆ 90% ಸಹಾಯಧನ; ಮಾರ್ಚ್ ಅಂತ್ಯದವರೆಗೆ ಗಡುವು!

ಕೃಷಿ ಇಲಾಖೆಯಲ್ಲಿನ ಆಕ್ರಮಗಳ ಬಗ್ಗೆ ಧ್ವನಿ ಎತ್ತುವ ರೈತರಿಗೆ ವರ್ಷಗಳೇ ಕಳೆದರು ಸೌಲಭ್ಯ ವಿತರಣೆ ಮಾಡುವುದಿಲ್ಲ. ರೈತ ಸಂಪರ್ಕ ಕೇಂದ್ರಕ್ಕೆ ಎಷ್ಟು ಭಾರಿ ಅಲೆದರೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ತಾಲೂಕು ಕೇಂದ್ರ ಬಿಟ್ಟು ಬರುವುದಿಲ್ಲ. ಇವರನ್ನು ಹುಡುಕಿಕೊಂಡು ತಾಲೂಕು ಕೇಂದ್ರಕ್ಕೆ ತೆರಳಬೇಕಾದ ಅನಿವಾರ್ಯತೆ ತಾಲೂಕಿನ ರೈತರಿಗೆ ಎದುರಾಗಿದ್ದು, ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಜಿಲ್ಲಾಹಾಗೂ ತಾಲೂಕು ಮಟ್ಟದ ಕೃಷಿ ಅಧಿಕಾರಿಗಳ ಶಾಮೀಲಿನಿಂದ ಗಡಿನಾಡಿನ ರೈತರಿಗೆ ಸಕಾಲದಲ್ಲಿ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಕಸಬಾ ರೈತ ಸಂಪರ್ಕ ಕೇಂದ್ರದ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

“ರೈತರು ಹೇಳಿದಂತೆ ನಾವು ಆಂಧ್ರದವರಿಗೆ ಮಾರಾಟ ಮಾಡುತ್ತಿದ್ದೇವೆ ಎಂಬುದು ಸುಳ್ಳು. ಅರ್ಜಿ ಸಲ್ಲಿಸಿದ ರೈತರಿಗೆ ಮಾತ್ರ ಸೌಲಭ್ಯ ವಿತರಣೆಯಾಗುತ್ತಿದೆ. ಬೇರೆ ರೈತರನ್ನು ಕರೆತಂದರೆ ಸೌಲಭ್ಯ ವಿತರಣೆ ಮಾಡುವುದಿಲ್ಲ. ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೂ ಸ್ಪಿಂಕ್‌ಲರ್‌ ಪೈಪು ವಿತರಣೆ ಮಾಡಲಾಗುತ್ತಿದೆ.”
– ವಿಜಯಮೂರ್ತಿ, ಸಹಾಯಕ ನಿರ್ದೇಶಕಿ, ಕೃಷಿ ಇಲಾಖೆ ಪಾವಗಡ.

“ಏಜೆನ್ಸಿಗಳಿಗೆ ಹಣ ಕಟ್ಟಿ ಎರಡು ವರ್ಷ ಕಳೆದಿದೆ. ಇಂದಿಗೂ ಸೌಲಭ್ಯ ವಿತರಣೆ ಮಾಡುತ್ತಿಲ್ಲ. ನಾಗಲಮಡಿಕೆ ಕೃಷಿ ಅಧಿಕಾರಿ ಪಾವಗಡದಲ್ಲೇ ಕಾಲಹರಣ ಮಾಡುತ್ತಿದ್ದರೆ, ತಾಲೂಕು ಸಹಾಯಕ ಕೃಷಿ ನಿರ್ದೇಶಕರು ರೈತರಿಗೆ ಸೌಲಭ್ಯ ವಿತರಿಸುವಲ್ಲಿ ವಿಫಲರಾಗಿದ್ದಾರೆ. ನಮ್ಮ ಹಣವಾದರು ವಾಪಸ್ಸು ನೀಡಿ, ಇಲ್ಲದೆ ಹೋದರೆ ಇಲಾಖೆಯ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುತ್ತೇವೆ.”
– ಓಂಕಾರ್‌, ರೈತ, ನಾಗಲಮಡಿಕೆ.



Read more

[wpas_products keywords=”deal of the day sale today offer all”]