Karnataka news paper

ನಾನು ರಾಹುಲ್‌ ಗಾಂಧಿಗಾಗಿ ಜೀವ ತ್ಯಾಗ ಮಾಡಬಲ್ಲೆ: ಪ್ರಿಯಾಂಕಾ ಗಾಂಧಿ


ಚಂಡೀಗಡ: “ನಾನು ನನ್ನ ಸಹೋದರನಿಗಾಗಿ (ರಾಹುಲ್ ಗಾಂಧಿ) ನನ್ನ ಜೀವ ತ್ಯಾಗ ಮಾಡಬಲ್ಲೆ. ಅವನೂ ಕೂಡ ನನಗಾಗಿ ಹಾಗೆ ಮಾಡಬಲ್ಲ” ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ಹೇಳಿದ್ದಾರೆ.

ಪಂಜಾಬ್‌ನ ಕೊಟ್ಕಾಪುರದಲ್ಲಿ ‘ನವಿ ಸೋಚ್ ನವ ಪಂಜಾಬ್’ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹಾಗೂ ತಮ್ಮ ನಡುವೆ ಮನಸ್ತಾಪಗಳಿವೆ ಎಂಬ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದರು.
ಕೇಂದ್ರದ ಬಿಜೆಪಿ ಸರ್ಕಾರದಿಂದ ಆಡಳಿತ ನಡೆಯುತ್ತಿತ್ತು: ಅಮರಿಂದರ್ ವಜಾ ಬಗ್ಗೆ ಮೌನ ಮುರಿದ ಪ್ರಿಯಾಂಕಾ

“ಬಿಜೆಪಿಯಲ್ಲಿ ಸಂಘರ್ಷವಿದೆಯೇ ಹೊರತು ಕಾಂಗ್ರೆಸ್‌ನಲ್ಲಿ ಅಲ್ಲ. ಯೋಗಿ, ಮೋದಿ ಮತ್ತು ಅಮಿತ್ ಶಾ ಅವರ ನಡುವೆ ಹಿತಾಸಕ್ತಿ ಸಂಘರ್ಷ ಇರಬಹುದು” ಎಂದು ಪ್ರಿಯಾಂಕಾ ಹೇಳಿದರು.

“ಎಎಪಿ ಆರ್‌ಎಸ್‌ಎಸ್‌ನಿಂದ ಹುಟ್ಟಿಕೊಂಡಿದೆ. ತಾವು ಸ್ವತಃ ಬಿಜೆಪಿ ನಾಯಕರಿಗಿಂತಲೂ ಬಿಜೆಪಿಗೆ ಹೆಚ್ಚು ಸೈದ್ಧಾಂತಿಕವಾಗಿ ಹತ್ತಿರ ಇದ್ದೇವೆ ಎಂದು ಎಎಪಿ ನಾಯಕರೇ ಹೇಳಿಕೊಂಡಿದ್ದಾರೆ. ದಿಲ್ಲಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳ ಹೆಸರಿನಲ್ಲಿ ಏನೂ ಮಾಡಿಲ್ಲ. ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರ ಕುರಿತಾದ ಸತ್ಯಗಳನ್ನು ತಿಳಿಯುವುದು ಬಹಳ ಮುಖ್ಯವಾಗಿದೆ” ಎಂದು ಎಎಪಿ ವಿರುದ್ಧ ಅವರು ಆರೋಪಿಸಿದರು.

“ನಾವು ಪಂಜಾಬ್‌ನಲ್ಲಿ ಕಳೆದ ಐದು ವರ್ಷಗಳಿಂದ ಕಾಂಗ್ರೆಸ್ ಸರ್ಕಾರವನ್ನು ಹೊಂದಿದ್ದೇವೆ. ಈ ಸರ್ಕಾರ ಪಂಜಾಬ್‌ನಿಂದ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿತ್ತು. ಬದಲಾಗಿ ಅದು ದಿಲ್ಲಿಯಿಂದ ಕಾರ್ಯನಿರ್ವಹಿಸುತ್ತಿತ್ತು. ಆದರೆ ಅದು ಕಾಂಗ್ರೆಸ್‌ನಿಂದ ಅಲ್ಲ, ಬಿಜೆಪಿಯಿಂದ. ಈ ಗುಪ್ತ ಮೈತ್ರಿಯು ಈಗ ಜಗಜ್ಜಾಹೀರಾಗಿದೆ. ಚನ್ನಿ ಅವರನ್ನು ಸಿಎಂ ಆಗಿ ನೇಮಕ ಮಾಡುವುದರ ಹಿಂದಿನ ಕಾರಣ ಇದು” ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಆಡಳಿತವು ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ನಿರ್ದೇಶನದಂತೆ ನಡೆಯುತ್ತಿತ್ತು ಎಂದು ಆರೋಪ ಮಾಡಿದರು.
ಅಮರಿಂದರ್ ಸಿಂಗ್ ಪರ ಪತ್ನಿ, ಕಾಂಗ್ರೆಸ್ ಸಂಸದೆ ಕೌರ್ ಪ್ರಚಾರ: ಕುತೂಹಲ ಮೂಡಿಸಿದ ನಡೆ

“ನಾವು ಪಂಜಾಬ್‌ನ ಧ್ವನಿಯನ್ನು ಆಲಿಸಿದೆವು ಮತ್ತು ಸರಿಪಡಿಸುವ ಸೂಕ್ತ ಕ್ರಮಗಳನ್ನು ತೆಗೆದುಕೊಂಡೆವು. ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚನ್ನಿ ಅವರು ನಿಮ್ಮ ನಡುವಿನ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದಾರೆ. ನಿಮ್ಮಂತೆಯೇ ಇರುವ ಹೊಸ ಮುಖ್ಯಮಂತ್ರಿ ನಿಮಗೆ ಸಿಕ್ಕಿದ್ದಾರೆ. ಅವರು ಬಡ ಕುಟುಂಬದಿಂದ ಬಂದವರು. ಅವರಿಗೆ ಪಂಜಾಬ್‌ನ ನಾಡಿಮಿಡಿತ ಚೆನ್ನಾಗಿ ತಿಳಿದಿರುವುದರಿಂದ 100-150 ದಿನಗಳಲ್ಲಿ ಸಾಕಷ್ಟು ಸಾಧಿಸಿದ್ದಾರೆ. ನಿಮಗೆ ದಿಲ್ಲಿಯಿಂದ ನಿಯಂತ್ರಿಸಲ್ಪಡುವ ಸರ್ಕಾರ ಬೇಕೋ ಅಥವಾ ತನ್ನ ತಪ್ಪುಗಳನ್ನು ಅರಿತು ಹೊಸತನ್ನು ನೀಡುವ ಸರ್ಕಾರ ಬೇಕೋ? ಚನ್ನಿ ಅವರಿಗೆ ಒಂದು ಅವಕಾಶ ನೀಡಿ. ನಾನು ನೋಡಿದ್ದನ್ನು ಮಾತನಾಡುತ್ತೇನೆ. ಅವರು ಹಗಲು ರಾತ್ರಿ ಪಂಜಾಬ್‌ಗಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಪ್ರಿಯಾಂಕಾ ಗಾಂಧಿ ಕೊಂಡಾಡಿದರು.



Read more

[wpas_products keywords=”deal of the day sale today offer all”]