Karnataka news paper

ಇತ್ತ ಹಿಜಾಬ್‌‌ಗಾಗಿ ಹೋರಾಟ : ಅತ್ತ ಸಂಸ್ಕೃತದಲ್ಲಿ 5 ಚಿನ್ನದ ಪದಕ ಪಡೆದ ಯುಪಿಯ ಮುಸ್ಲಿಂ ಯುವತಿ!


ಲಖನೌ: ಒಂದೆಡೆ ಕರ್ನಾಟಕದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ವಿಷಯಕ್ಕಾಗಿ ತರಗತಿಯನ್ನೇ ಲೆಕ್ಕಿಸದೆ ಪ್ರತಿಭಟಿಸುತ್ತಿದ್ದರೆ, ಮತ್ತೊಂದೆಡೆ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಯುವತಿಯೊಬ್ಬರು ಸಂಸ್ಕೃತದ ಅಧ್ಯಯನಕ್ಕಾಗಿ ಐದು ಚಿನ್ನದ ಪದಕ ಪಡೆಯುವ ಮೂಲಕ ಮಾದರಿ ಎನಿಸಿದ್ದಾರೆ.

ಲಖನೌ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಅತ್ಯಧಿಕ ಅಂಕಗಳಿಂದ ಮುಗಿಸಿದ ಗಜಾಲಾ ಅವರು ಐದು ಚಿನ್ನದ ಪದಕಗಳಿಗೆ ಕೊರಳೊಡಿದ್ದಾರೆ. ಕಲಾ ವಿಭಾಗದ ಡೀನ್‌ ಆದ ಪ್ರೊ.ಶಶಿ ಶುಕ್ಲಾಅವರು ಗಜಾಲಾ ಕೊರಳಿಗೆ ಚಿನ್ನದ ಪದಕ ಹಾಕಿ ಗೌರವಿಸಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಘಟಿಕೋತ್ಸವದಲ್ಲಿಯೇ ಪದಕ ನೀಡಬೇಕಾಗಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ನೀಡಿರಲಿಲ್ಲ. ”ಚಿನ್ನದ ಪದಕ ಪಡೆದಿರುವುದು ಖುಷಿ ತಂದಿದೆ. ಆದರೆ, ಇದು ಕೇವಲ ನನ್ನೊಬ್ಬಳ ಪರಿಶ್ರಮದ ಫಲವಲ್ಲ. ನನ್ನನ್ನು ಓದಿಸಲು ನನ್ನ ಇಬ್ಬರು ಸಹೋದರರು ದುಡಿದಿದ್ದಾರೆ. ಅವರಿಗೂ ಪದಕಗಳ ಶ್ರೇಯಸ್ಸು ಸಲ್ಲಬೇಕು,” ಎಂದು ಗಜಾಲಾ ಹೇಳಿದ್ದಾರೆ. ಆಕೆಯ ಅಕ್ಕ ಯಾಸ್ಮೀನ್ ಪಾತ್ರೆಗಳ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಆಕೆಯ ತಾಯಿ ನಸ್ರೀನ್ ಬಾನು ಅವರು ಮನೆಯನ್ನು ನೋಡಿಕೊಳ್ಳುತ್ತಿದ್ದಾರೆ.

Hijab Row: ಹಿಜಾಬ್ ವಿವಾದದ ಬಗ್ಗೆ ಹೈಕೋರ್ಟ್ ನೀಡಿದ ಆದೇಶದಲ್ಲಿ ಏನಿದೆ?: ಪೂರ್ಣ ವಿವರ ಬಹಿರಂಗ

ಇನ್ನು ಸಂಸ್ಕೃತ ಭಾಷೆಯ ಪ್ರಾಧ್ಯಾಪಕರಾಗುವುದು, ವೇದ ಸಾಹಿತ್ಯದಲ್ಲಿ ಪಿಎಚ್ಡಿ ಮಾಡುವುದು ಗಜಾಲಾ ಕನಸು. ಇದು ದೈವ ಭಾಷೆ. ಸಂಸ್ಕೃತದಲ್ಲಿ ಕವಿತೆ, ಪದ್ಯಗಳನ್ನು ಓದಲು ತುಂಬ ಸಂತೋಷವಾಗುತ್ತದೆ ಎಂದು ಹೇಳುವ ಅವರು, ಸಂಸ್ಕೃತ ಶ್ಲೋಕ, ಗಾಯತ್ರಿ ಮಂತ್ರ, ಸರಸ್ವತಿ ವಂದನೆ ಶ್ಲೋಕಗಳನ್ನೆಲ್ಲ ಅತ್ಯಂತ ಸ್ಪಷ್ಟವಾಗಿ ಹೇಳಬಲ್ಲರು.

ಯೂನಿವರ್ಸಿಟಿಯ ಅದೆಷ್ಟೋ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗಜಾಲಾ ಅವರೇ ಸರಸ್ವತಿ ವಂದನೆ ಹಾಡುತ್ತಾರೆ. ಇನ್ನು ತಾನೊಬ್ಬಳು ಮುಸ್ಲಿಂ ಆಗಿ ಸಂಸ್ಕೃತ ಕಲಿತಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕರು ಸಂತೋಷ ವ್ಯಕ್ತಪಡಿಸಿ, ಶ್ಲಾಘಿಸಿದ್ದಾರೆ. ನನ್ನ ಕುಟುಂಬವಂತೂ ನನ್ನ ಕಲಿಕೆಗೆ ಸಹಕಾರ ನೀಡಿದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ವಿದ್ಯಾಭ್ಯಾಸವನ್ನೇ ಪಣ ಕ್ಕಿಟ್ಟು ಹಿಜಾಬ್‌ ಪರ ಹೋರಾಡುವವರ ಮಧ್ಯೆ, ಓದಿಗೆ ಪ್ರಾಮುಖ್ಯತೆ ನೀಡಿದ ಗಜಾಲಾ ಸ್ಫೂರ್ತಿದಾಯಕ ಎನಿಸಿದ್ದಾರೆ.



Read more

[wpas_products keywords=”deal of the day sale today offer all”]