Karnataka news paper

ರಾಜ್ಯ ವಿಪ್ರ ಯುವ ಸಂಘಟನೆ ಸಂಚಾಲಕರಾಗಿ ಸಂದೀಪ್ ರವಿ ನೇಮಕ; ಅಶೋಕ್ ಹಾರನಹಳ್ಳಿ ಆದೇಶ


Online Desk

ಬೆಂಗಳೂರು: ರಾಜ್ಯ ವಿಪ್ರ ಯುವ ಸಂಘಟನೆ ಸಂಚಾಲಕರಾಗಿ ವಕೀಲ, ಯುವ ಮುಖಂಡ ಸಂದೀಪ್ ರವಿ ಅವರನ್ನು ನೇಮಕ ಮಾಡಲಾಗಿದೆ. 

ರಾಜ್ಯ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿರುವ, ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅವರು ಈ ಬಗ್ಗೆ ಅಧಿಕೃತ ಆದೇಶ ಪ್ರಕಟಿಸಿದ್ದಾರೆ. ಸಂದೀಪ್ ರವಿ ಅವರನ್ನು ನೇಮಕ ಮಾಡುವ ಸಂದರ್ಭದಲ್ಲಿ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಸಂಘಟನೆಯ ಹಲವು ಮುಖಂಡರು ಭಾಗಿಯಾಗಿದ್ದರು.

ಅಶೋಕ್ ಹಾರನಹಳ್ಳಿ ಅವರು ಇತ್ತೀಚೆಗಷ್ಟೇ ಬ್ರಾಹ್ಮಣ ಮಹಾಸಭೆಯ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯೋಮುಖರಾಗಿದ್ದು ಹೊಸ ಪದಾಧಿಕಾರಿಗಳ ನೇಮಕ ಮಾಡಲಾಗುತ್ತಿದೆ.



Read more

[wpas_products keywords=”deal of the day”]