Karnataka news paper

ಜನವಿರೋಧಿ ಅಲೆ ಎದುರಿಸುತ್ತಿರುವ ಉತ್ತರಾಖಂಡ ಬಿಜೆಪಿ ಸರ್ಕಾರಕ್ಕೆ ಮೋದಿ ಜನಪ್ರಿಯತೆ ನೆರವಿಗೆ ಬರುವುದೇ?


ಡೆಹ್ರಾಡೂನ್‌: ಉತ್ತರಾ ಖಂಡದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಹಾಗೂ ಜನಪ್ರಿಯತೆಯನ್ನೇ ಬಿಜೆಪಿ ನೆಚ್ಚಿಕೊಂಡಿದೆ.

ರಾಜ್ಯದಲ್ಲಿ 2017 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯು ಐತಿಹಾಸಿಕ ಗೆಲುವು ಸಾಧಿಸಿತ್ತು. ವಿಧಾನಸಭೆಯ 70 ಕ್ಷೇತ್ರಗಳ ಪೈಕಿ 57 ಕ್ಷೇತ್ರ ಗೆದ್ದು ಸರಕಾರ ರಚಿಸಿತ್ತು. ಇದಕ್ಕೆ ನರೇಂದ್ರ ಮೋದಿ ಅವರ ವರ್ಚಸ್ಸೇ ಕಾರಣ ಎಂಬುದು ಪಕ್ಷ ಹಾಗೂ ನಾಯಕರ ನಂಬಿಕೆಯಾಗಿದ್ದು, ಈ ಬಾರಿ ಸಹ ನರೇಂದ್ರ ಮೋದಿ ಅವರಿಂದಲೇ ಪಕ್ಷಕ್ಕೆ ಮುನ್ನಡೆ ಎಂಬುದಾಗಿ ಭಾವಿಸಿಕೊಂಡಿದ್ದಾರೆ.
ಜನರನ್ನು ಧರ್ಮ, ಜಾತಿ ಆಧಾರದ ಮೇಲೆ ಒಡೆದು ಹಾಕುವುದೇ ಕಾಂಗ್ರೆಸ್‌ನ ಆದ್ಯತೆ; ನರೇಂದ್ರ ಮೋದಿ
ಕಳೆದ ಐದು ವರ್ಷದಲ್ಲಿ ಬಿಜೆಪಿಯು ಮೂವರನ್ನು ಮುಖ್ಯಮಂತ್ರಿಗಳನ್ನಾಗಿ ನೇಮಿಸಿ ಜನರ ವಿರೋಧ ಕಟ್ಟಿಕೊಂಡಿದೆ. ಒಂದಷ್ಟು ಆಡಳಿತ ವಿರೋಧಿ ಅಲೆಯೂ ಇದೆ. ಹಾಗಾಗಿ, ರಾಜ್ಯದಲ್ಲಿ ಯಾವುದೇ ನಾಯಕರು ಏಕಾಂಗಿಯಾಗಿ ಪಕ್ಷವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿಲ್ಲ. ಇಷ್ಟೆಲ್ಲ ಕಾರಣ ಇರುವುದರಿಂದ ಚುನಾವಣೆಯಲ್ಲಿ ಪಕ್ಷಕ್ಕೆ ಮುನ್ನಡೆ ಸಿಕ್ಕರೆ ಅದು ನರೇಂದ್ರ ಮೋದಿ ಅವರಿಂದಲೇ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

‘ರಾಜ್ಯದಲ್ಲಿ ಬಿಜೆಪಿಯು ಪದೇ ಪದೆ ಮುಖ್ಯಮಂತ್ರಿಗಳನ್ನು ಬದಲಾಯಿಸಿದ ಕಾರಣ ಜನರಲ್ಲಿ ಆಕ್ರೋಶ ಮೂಡುವಂತಾಗಿದೆ. ಹಾಗೆಯೇ, ಆಡಳಿತ ವಿರೋಧಿ ಅಲೆಯೂ ಪಕ್ಷಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಇದೆ. ಅದನ್ನೂ ಮೀರಿ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುವುದಾದರೆ, ಜನ ಬಿಜೆಪಿಗೆ ಮತ ನೀಡುವುದಾದರೆ, ಅದು ನರೇಂದ್ರ ಮೋದಿ ಅವರ ಮುಖ ನೋಡಿ ಮಾತ್ರ’ ಎಂದು ಡೆಹ್ರಾಡೂನ್‌ ಮೂಲದ ರಾಜಕೀಯ ವಿಶ್ಲೇಷಕ ಜೆ.ಎಸ್‌ ರಾವತ್‌ ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಅವರು ಉತ್ತರಾಖಂಡಕ್ಕೆ ನೀಡಿದ ಹಲವು ಭೇಟಿ, ರಾಜ್ಯಕ್ಕೆ ನೀಡಿದ 1.5 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗೆ ಚಾಲನೆ ನೀಡಿರುವುದು, ಕೇದಾರನಾಥಕ್ಕೆ ತೆರಳಿ ದರ್ಶನ, ಗುಹೆಯಲ್ಲಿ ಧ್ಯಾನ ಮಾಡಿರುವುದು ಸೇರಿ ಹಲವು ವಿಷಯಗಳನ್ನು ಬಿಜೆಪಿ ಮುನ್ನೆಲೆಗೆ ತಂದಿದೆ. ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಸಹ ಮೋದಿ ಅವರನ್ನೇ ನೆಚ್ಚಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರೇ ಹೇಳುತ್ತಾರೆ.



Read more

[wpas_products keywords=”deal of the day sale today offer all”]