ಈ ಕುರಿತು ಹೇಳಿಕೆ ನೀಡಿರುವ ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ, ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಯೋಜನೆ ಕುರಿತು ವಿಶೇಷ ಆಸಕ್ತಿ ತೋರಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಏನಿದು ಯೋಜನೆ?: ಮೈಸೂರು – ಬೆಂಗಳೂರು – ಚೆನ್ನೈ ನಡುವೆ ಸಾಗಲಿರುವ ಈ ರೈಲು, ದೇಶದ ಪ್ರಮುಖ ಯೋಜನೆ ಗಳಲ್ಲಿ ಒಂದಾಗಲಿದೆ. ಈ ರೈಲಿನಲ್ಲಿ ಕೇವಲ 40 ನಿಮಿಷಗಳಲ್ಲಿ ಮೈಸೂರಿನಿಂದ ಬೆಂಗಳೂರಿಗೆ ತಲುಪಬಹುದಾಗಿದೆ. ಅದೇ ರೀತಿ ಮೈಸೂರು – ಚೆನ್ನೈ ನಡುವೆ ಕೇವಲ 2.30 ಗಂಟೆಯಲ್ಲಿ ಪ್ರಯಾಣಿಸಬಹುದಾಗಿದೆ.
435 ಕಿ. ಮೀ. ದೂರದ ಈ ಮಾರ್ಗದಲ್ಲಿ ರೈಲು ಗಂಟೆಗೆ 320 ಕಿ. ಮೀ. ವೇಗದಲ್ಲಿ ಚಲಿಸಲಿದೆ. ಇದರಿಂದಾಗಿ ಈಗಿನ ಪ್ರಯಾಣದ ಅವಧಿಯಲ್ಲಿ ಒಟ್ಟು 7 ಗಂಟೆಗಳು ಕಡಿತವಾಗಲಿವೆ. ಯೋಜನೆಯ ಒಟ್ಟು ಅಂದಾಜು ವೆಚ್ಚ 1 ಲಕ್ಷ ಕೋಟಿ ರೂ. ಗಳು.
ಮಂಗಳೂರಿಗೆ ನಿತ್ಯ ರೈಲಿಗೆ ಮನವಿ: ವಾರದಲ್ಲಿ 3 ದಿನದ ಬದಲಾಗಿ ಮೈಸೂರಿನಿಂದ ಮಂಗಳೂರಿಗೆ ನಿತ್ಯ ರೈಲು ಸಂಪರ್ಕ ಕಲ್ಪಿಸಲು ಸಂಸದ ಮನವಿ ಮಾಡಿದ್ದಾರೆ. ‘ಈ ಕುರಿತು ಪ್ರಯಾಣಿಕರು ಸಂಘಗಳು, ವ್ಯಾಪಾರ ಸಂಸ್ಥೆಗಳು, ಹೋಟೆಲ್, ಆತಿಥ್ಯ ಉದ್ಯಮ ಮತ್ತು ಸಾರ್ವಜನಿಕರಿಂದ ಹಲವು ಬಾರಿ ಮನವಿ ಸ್ವೀಕರಿಸಿದ್ದೇನೆ. ಮೈಸೂರಿನಿಂದ ಕಾರವಾರ / ಕಣ್ಣೂರಿಗೆ ನಿತ್ಯ ರೈಲು ಸೇವೆಗಳನ್ನು ಮರು – ಪರಿಚಯಿಸಲು ರೈಲ್ವೆಯೊಂದಿಗೆ ಪ್ರಸ್ತಾಪಿಸಿ ಒತ್ತಾಯಿಸಿದ್ದೇನೆ. ಆದರೆ ಇದುವರೆಗೂ ಯಾವುದೇ ಪ್ರಗತಿಯಾಗಿಲ್ಲ. ಆದಾಗ್ಯೂ, ಪರ್ಯಾಯ ಕಡಿಮೆ ಮಾರ್ಗದಲ್ಲಿನ ಸೇವೆಗಳು ಗಮನಾರ್ಹವಾಗಿ ವರ್ಧಿಸಲ್ಪಟ್ಟಿವೆ. ಮೈಸೂರು ಭಾಗಕ್ಕೆ ಸೀಮಿತವಾಗಿರುವ ರೈಲು ಬಳಕೆದಾರರ ಅನುಕೂಲಕ್ಕಾಗಿ ರಮಣೀಯ ಮಾರ್ಗದಲ್ಲಿ ವಿಸ್ಟಾ ಡೋಮ್ ಕೋಚ್ಗಳನ್ನು ಪರಿಚಯಿಸಿದ್ದನ್ನು ಮೈಸೂರಿನ ಜನರು ಕಳೆದುಕೊಂಡಂತೆ ಭಾವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
Read more
[wpas_products keywords=”deal of the day sale today offer all”]