Karnataka news paper

ಯುವ ಕಾಂಗ್ರೆಸ್ಸೋ..? ರೌಡಿ ಕಾಂಗ್ರೆಸ್ಸೋ..? ನಲಪಾಡ್ ವಿರುದ್ಧ ಬಿಜೆಪಿ ಆಕ್ರೋಶ..!


ಬೆಂಗಳೂರು: ಇದು ಯುವ ಕಾಂಗ್ರೆಸ್ಸೋ..? ಅಥವಾ ರೌಡಿ ಕಾಂಗ್ರೆಸ್ಸೋ..? ಒಮ್ಮೆ ತಲೆ ಕಡಿಯುತ್ತೇನೆ ಎನ್ನುತ್ತಾರೆ, ಮತ್ತೊಬ್ಬರ ಕಾಲು ಮುರಿಯುತ್ತಾರೆ, ಮಗದೊಮ್ಮೆ ಅಮಾಯಕರ ಗುರುತು ಸಿಗದಂತೆ ಮುಖ ಜಜ್ಜುತ್ತಾರೆ. ಅದೇ ವ್ಯಕ್ತಿ ಈಗ ಕಾಂಗ್ರೆಸ್‌ ಅಧ್ಯಕ್ಷ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಈ ಕುರಿತಾಗಿ ಟ್ವೀಟ್ ಮಾಡಿದ ಬಿಜೆಪಿ, ಮೊಹಮ್ಮದ್‌ ನಲಪಾಡ್‌ ಅವರನ್ನು ರೌಡಿ ಚಟುವಟಿಕೆಯ ಕಾರಣಕ್ಕಾಗಿ 2018 ರಲ್ಲಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲಕ್ಕೆ ಕೆಪಿಸಿಸಿ ಅಧ್ಯಕ್ಷರು ಉಚ್ಚಾಟನೆ ಮಾಡಿದ್ದರು. ಅದೇ ನಲಪಾಡ್‌ ಕೇವಲ 4 ವರ್ಷಗಳಲ್ಲಿ ಯುವ ಕಾಂಗ್ರೆಸ್‌ ಅಧ್ಯಕ್ಷರಾಗುತ್ತಾರೆ. ಎಂತಹ ವೈಚಿತ್ರ್ಯವಿದು..!? ಎಂದು ಪ್ರಶ್ನೆ ಮಾಡಿದೆ.

ಯುವ ಕಾಂಗ್ರೆಸ್‌ ನಾಯಕತ್ವ ನಲಪಾಡ್‌ಗೆ; ರಾಷ್ಟ್ರ ಸಂಘಟನೆಗೆ ರಕ್ಷಾ ರಾಮಯ್ಯ?
ಯುವ ಕಾಂಗ್ರೆಸ್‌ ಅಧ್ಯಕ್ಷ ಮತ್ತು ಆತನ ಸಾಧನೆಗಳು ಐಪಿಸಿ ಸೆಕ್ಷನ್ 146 ಮತ್ತು 147 (ಗಲಭೆ), ಐಪಿಸಿ 326 (ಮಾರಕಾಯುಧಗಳಿಂದ ದಾಳಿ) ಐಪಿಸಿ 504 (ಶಾಂತಿಭಂಗಕ್ಕೆ ಪ್ರಚೋದನೆ) ಈ ಮೂಲಕ ದೇಶಕ್ಕೆ ಕಾಂಗ್ರೆಸ್ ಪಕ್ಷ ಯಾವ ಸಂದೇಶ ನೀಡುತ್ತಿದೆ..!? ಎಂದು ಡಿ. ಕೆ. ಶಿವಕುಮಾರ್ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ.

ಆ ಗುಂಪು ಈ ಗುಂಪು ಅಂತ ಇರಬಾರದು! ಬಣ ರಾಜಕೀಯದ ವಿರುದ್ಧ ಡಿಕೆಶಿ ಎಚ್ಚರಿಕೆ!
ಗುರುವಿಗೆ ತಕ್ಕ ಶಿಷ್ಯ. ಕೆಪಿಸಿಸಿ ಅಧ್ಯಕ್ಷರಿಗೆ ಕೊತ್ವಾಲ್ ಗ್ಯಾಂಗ್ ಶ್ರೀರಕ್ಷೆಯಿತ್ತು. ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಿಗೆ ಬಿಟ್ ಕಾಯಿನ್ ಗ್ಯಾಂಗ್ ನಂಟು ಎಂದು ಬಿಜೆಪಿ ಲೇವಡಿ ಮಾಡಿದೆ.

ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ ಗುರುವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆದರೂ ಕ್ರಿಮಿನಲ್ ಹಿನ್ನೆಲೆಯ ಕಾರಣಕ್ಕಾಗಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಒಂದು ವರ್ಷದ ಬಳಿಕ ನಲಪಾಡ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ನಲಪಾಡ್‌ಗೆ ಯುವ ಕಾಂಗ್ರೆಸ್‌ ಪಟ್ಟ; ಪದಗ್ರಹಣ ವೇಳೆ ರಕ್ಷಾರಾಮಯ್ಯ ಗೈರು! ಮತ್ತೊಮ್ಮೆ ಅಸಮಾಧಾನ ಸ್ಫೋಟ



Read more

[wpas_products keywords=”deal of the day sale today offer all”]