ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರಿಯಾದ ಮಾಹಿತಿ ಇಲ್ಲದೆ ಸಿದ್ದರಾಮಯ್ಯನವರು ಆ ರೀತಿ ಆರೋಪ ಮಾಡಿರಬಹುದು. ಕೆಲವರು ಬಿಜೆಪಿಯ ಮೇಲೆ ಗೂಬೆ ಕೂರಿಸುವ ಯತ್ನ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಬ್ ಕೆ ಸಾಥ್ ಸಬ್ ಕೆ ವಿಶ್ವಾಸ್ ಎಂದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಟೊಂಕ ಕಟ್ಟಿದ್ದಾರೆ ಎಂದರು.
ಯಾರ ಮನಸ್ಸಿಗೂ ಘಾಸಿಯಾಗದಂತೆ ಎಲ್ಲರೂ ನಡೆದುಕೊಳ್ಳಬೇಕೆಂದು ನಾನೇ ಹೇಳಿದ್ದೇನೆ. ಯಾರ ಭಾವನೆಗೂ ನಾವು ಧಕ್ಕೆ ತರಬಾರದು. ಅದು ಭಾರತೀಯ ಸಂಸ್ಕೃತಿಯಿಲ್ಲ. ಯಾವುದೇ ಕಾಲೇಜು, ಸಂಸ್ಥೆಗಳಲ್ಲಿ ಕಾನೂನು, ಶಿಷ್ಟಾಚಾರ ಇರುತ್ತದೆ. ಸಮವಸ್ತ್ರವನ್ನು ಎಲ್ಲರೂ ಪಾಲಿಸಬೇಕು. ಈ ನಿಟ್ಟಿನಲ್ಲಿ ಒಂದೇ ಸಮವಸ್ತ್ರ ಇದ್ದರೆ ಉತ್ತಮ ಎಂಬುದು ನನ್ನ ಅಭಿಪ್ರಾಯ ಎಂದರು.
ಶಾಲೆಗಳಲ್ಲಿ ಶ್ರೀಮಂತರು, ಬಡವರು ಇರುತ್ತಾರೆ. ಶ್ರೀಮಂತರು ಏನು ಬೇಕಾದರೂ ಹಾಕಿಕೊಳ್ಳಬಹುದು. ಆದರೆ ಇದಕ್ಕೆ ಅವಕಾಶವಿಲ್ಲ. ನಾವೆಲ್ಲರೂ ಸಮಾನರು ಎಂಬುದೇ ಮುಖ್ಯ. ಪಠ್ಯ ಪುಸ್ತಕ ಹೇಗೋ ಹಾಗೇ, ಎಲ್ಲರಿಗೂ ಒಂದೇ ಕೊಡ್ತಾರೆ. ಹಾಗೇ ಸಮವಸ್ತ್ರಗಳು.. ಸಮವಸ್ತ್ರಗಳು ಹೇಗೆ ಸಮಾನವಾಗಿ ಇರುತ್ತದೋ ಹಾಗೇ ಇರಬೇಕು. ಸಮಾನತೆಯನ್ನು ಸಾಧಿಸಲು ಇದು ಸಾಧ್ಯ. ಎಲ್ಲರೂ ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲ ಧರ್ಮದವರು ಇದಕ್ಕೆ ಒಪ್ಪಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಶಾಲಾ ಆರಂಭದ ಕುರಿತು ನಾನು ಸಿಎಂ ಜೊತೆಗೆ ಚರ್ಚೆ ಮಾಡಿಲ್ಲ. ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣ ಸಚಿವರು, ಗೃಹ ಸಚಿವರ ಜೊತೆ ಸಿಎಂ ಚರ್ಚೆ ಮಾಡಿದ್ದಾರೆ. ಅವರು ಅಂತಿಮ ತೀರ್ಮಾನ ಏನು ಮಾಡಿದ್ದಾರೆ ಗೊತ್ತಿಲ್ಲ. ಜನರು ಮತ್ತು ವಿದ್ಯಾರ್ಥಿಗಳಲ್ಲಿ ಮನವಿ ಮಾಡುತ್ತೇನೆ. ಕೋರ್ಟ್ ತೀರ್ಪಿಗೆ ಎಲ್ಲರೂ ಬದ್ಧವಾಗಿರಬೇಕು. ಎಲ್ಲರೂ ಜಾತ್ಯತೀತ, ಪಕ್ಷಾತೀತವಾಗಿ ಸಮವಸ್ತ್ರ ಧರಿಸುವ ಮೂಲಕ ಸಮಾನತೆ ಸಂದೇಶ ರವಾನಿಸಲು ಎಲ್ಲರೂ ಸಹಕರಿಬೇಕು ಎಂದರು.
Read more
[wpas_products keywords=”deal of the day sale today offer all”]