Karnataka news paper

ಆಂಧ್ರ ಸಿ.ಎಂ ಜಗನ್‌ ಮೋಹನ್‌ ರೆಡ್ಡಿ ಭೇಟಿಯಾದ ತೆಲುಗು ಸ್ಟಾರ್‌ ನಟರು


ಅಮರಾವತಿ: ಟಾಲಿವುಡ್‌ ಸ್ಟಾರ್‌ ನಟರಾದ ಚಿರಂಜೀವಿ, ಪ್ರಭಾಸ್, ಮಹೇಶ್ ಬಾಬು ಅವರು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ.

ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಅಸನ ಭರ್ತಿಗೆ ಅವಕಾಶ ಸೇರಿದಂತೆ ಸಿನಿಮಾ ​ಟಿಕೆಟ್ ದರ ನಿಗದಿ ವಿಚಾರಕ್ಕೆ ಸಂಬಂಧಿಸಿ ಈಗಿರುವ ನಿಯಮಗಳಲ್ಲಿ ಕೆಲವು ಬದಲಾವಣೆ ತರುವಂತೆ ನಟರು ಮನವಿ ಸಲ್ಲಿಸಿದ್ದಾರೆ.

ಇದೇ ವೇಳೆ ನಿರ್ದೇಶಕರಾದ ಎಸ್‌.ಎಸ್‌. ರಾಜಮೌಳಿ, ಕೊರಟಾಲ ಶಿವ, ನಿರಂಜನ್​ ರೆಡ್ಡಿ ಮೊದಲಾದವರು ಇದ್ದರು.

ಓದಿ… ಆಲಂಗಿಸುವುದು, ಚುಂಬಿಸುವುದು ರಣವೀರ್‌ಗೆ ಇಷ್ಟ: ದೀಪಿಕಾ ಪಡುಕೋಣೆ

ಕೋವಿಡ್‌ ಹಿನ್ನೆಲೆಯಲ್ಲಿ ಹೊಸ ಸಿನಿಮಾಗಳ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿತ್ತು. ಇದೀಗ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಸಾಲು– ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ.

ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾ ಮಾರ್ಚ್‌ 25ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್, ರಾಮ್‌ ಚರಣ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತ ಮಹೇಶ್‌ ಬಾಬು ಅಭಿನಯದ ‘ಸರ್ಕಾರು ವಾರಿ ಪಾಟ’ ಮೇ 12ರಂದು ತೆರೆಕಾಣಲಿದೆ.

ಓದಿ… ನಟಿ ಮೀರಾ ಜಾಸ್ಮಿನ್ ಗ್ಲಾಮರಸ್ ಫೋಟೊಶೂಟ್: ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ವೈರಲ್



Read More…Source link

[wpas_products keywords=”deal of the day party wear for men wedding shirt”]