Karnataka news paper

‘ಲಕ್ಷಣ’ ಧಾರಾವಾಹಿಯಲ್ಲಿ ರೋಚಕ ತಿರುವು: ನಕ್ಷತ್ರ ಮುಂದೆ ಶ್ವೇತಾ ಅಸಲಿ ಮುಖ ಬಯಲು!


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷಣ’ ಕೂಡ ಒಂದು. ವೇಗವಾಗಿ ಸಾಗುತ್ತಿರುವ ‘ಲಕ್ಷಣ’ ಧಾರಾವಾಹಿಯ ಕಥೆಯಲ್ಲಿ ಇದೀಗ ರೋಚಕ ತಿರುವು ಲಭಿಸಿದೆ. ನಕ್ಷತ್ರ ಮುಂದೆ ಶ್ವೇತಾಳ ಅಸಲಿ ಮುಖ ಬಟಾ ಬಯಲಾಗಿದೆ. ಗೋಮುಖ ವ್ಯಾಘ್ರದಂತಿರುವ ಶ್ವೇತಾಳ ನಿಜ ಬಣ್ಣ ನಕ್ಷತ್ರ ಮುಂದೆ ಬಹಿರಂಗವಾಗಿದೆ.

ಸತ್ಯ ಬಾಯ್ಬಿಟ್ಟ ಪ್ರಖ್ಯಾತ್!
ತನ್ನ ಜನ್ಮ ರಹಸ್ಯ ಹೊರಗೆ ಬರಬಾರದು, ನಕ್ಷತ್ರಳ ತಂದೆ ಯಾರು ಅಂತ ಚಂದ್ರಶೇಖರ್‌ಗೆ ಗೊತ್ತಾಗಬಾರದು, ತನ್ನ ಮದುವೆಗೆ ಯಾವುದೇ ಅಡ್ಡಿಯಾಗಬಾರದು ಎಂಬ ಉದ್ದೇಶ ಶ್ವೇತಾಳ ಮನಸ್ಸಿನಲ್ಲಿದೆ. ಆದರೆ, ನಕ್ಷತ್ರಳ ತಂದೆಯ ಹುಡುಕಾಟದಲ್ಲಿ ತೊಡಗಿರುವ ಚಂದ್ರಶೇಖರ್, ಶ್ವೇತಾಳ ದಾರಿಗೆ ಅಡ್ಡವಾಗಿ ನಿಂತಿದ್ದಾರೆ. ಹೀಗಾಗಿ, ತನ್ನ ಸಾಕು ತಂದೆ ಚಂದ್ರಶೇಖರ್‌ರನ್ನೇ ಕೊಲೆ ಮಾಡಿಸಲು ಶ್ವೇತಾ ಸಂಚು ರೂಪಿಸಿದ್ದಳು. ಚಂದ್ರಶೇಖರ್‌ರ ಪ್ರಾಣ ತೆಗೆಯಲು ಪ್ರಖ್ಯಾತ್‌ಗೆ ಶ್ವೇತಾ ಸುಪಾರಿ ಕೊಟ್ಟಿದ್ದಳು.

ಕೊಲೆಗಾರನನ್ನ ಹುಡುಕಿಕೊಂಡು ಬಂದೇಬಿಟ್ಟಳು ನಕ್ಷತ್ರ! ಸಿಕ್ಕಿಬೀಳ್ತಾಳಾ ಶ್ವೇತಾ?
ಪ್ರಖ್ಯಾತ್ ಮಾಡಿದ ಕೆಲಸದಿಂದ ಚಂದ್ರಶೇಖರ್‌ ಪ್ರಾಣಕ್ಕೆ ಕಂಟಕ ಎದುರಾಗಿತ್ತು. ಆಗ ಚಂದ್ರಶೇಖರ್ ಅವರನ್ನು ಸಾವಿನ ದವಡೆಯಿಂದ ಬಚಾವ್ ಮಾಡಿದವಳು ನಕ್ಷತ್ರ. ಕೊಲೆಗಾರನ ಜಾಡು ಹಿಡಿದು ಸಾಗಿದ ನಕ್ಷತ್ರಗೆ ಪ್ರಖ್ಯಾತ್ ಸುಳಿವು ಸಿಕ್ಕೇಬಿಡ್ತು. ನಕ್ಷತ್ರ ಮುಂದೆ ಬೇರೆ ದಾರಿಯಿಲ್ಲದೇ ಪ್ರಖ್ಯಾತ್ ಸತ್ಯ ಹೇಳಲೇಬೇಕಾಯಿತು.

‘’ಚಂದ್ರಶೇಖರ್ ಕೊಲೆ ಪ್ರಯತ್ನದ ಹಿಂದೆ ಇರುವುದು ಶ್ವೇತಾ’’ ಅಂತ ನಕ್ಷತ್ರಗೆ ಪ್ರಖ್ಯಾತ್ ತಿಳಿಸಿದ್ದಾಗಿದೆ. ಅಲ್ಲದೇ, ‘’ಶ್ವೇತಾಳ ನಿಜವಾದ ತಂದೆ ಚಂದ್ರಶೇಖರ್ ಅಲ್ಲ. ಅದಕ್ಕೆ ಕೊಲೆಗೆ ಸುಪಾರಿ ಕೊಟ್ಟಿದ್ದಾಳೆ’’ ಅಂತಲೂ ನಕ್ಷತ್ರಗೆ ಪ್ರಖ್ಯಾತ್ ಹೇಳಿದ್ದಾನೆ. ಇದನ್ನೆಲ್ಲಾ ಕೇಳಿದ ನಕ್ಷತ್ರಗೆ ಅಕ್ಷರಶಃ ಶಾಕ್ ಆಗಿದೆ. ಶ್ವೇತಾಳ ಅಸಲಿ ಮುಖ ಕಂಡು ನಕ್ಷತ್ರ ಬೇಸರಗೊಂಡಿದ್ದಾಳೆ.

‘ಲಕ್ಷಣ’: ನಕ್ಷತ್ರ ಸ್ವಂತ ಮಗಳು ಎಂಬ ಸತ್ಯ ಚಂದ್ರಶೇಖರ್‌ಗೆ ಗೊತ್ತಾಗೋಯ್ತಾ? ಅಥವಾ ಕನಸಾ?
ಭೂಪತಿ ಬಳಿ ಹೇಳಲಾಗದ ಸ್ಥಿತಿ
ಶ್ವೇತಾಳ ಕೌರ್ಯತೆ ಬಗ್ಗೆ ಭೂಪತಿಗೆ ಹೇಳಲಾಗದ ಸ್ಥಿತಿಯಲ್ಲಿ ನಕ್ಷತ್ರ ಇದ್ದಾಳೆ. ಒಂದುವೇಳೆ ಸತ್ಯ ಗೊತ್ತಾದರೆ ಶ್ವೇತಾ – ಭೂಪತಿಯ ಮದುವೆ ಮುರಿದುಬೀಳುತ್ತೆ ಅನ್ನೋ ಆತಂಕ ನಕ್ಷತ್ರಗೆ ಇದೆ.

ಭೂಪತಿ ಮುಂದೆ ಬಯಲಾಯ್ತು ಬಹುದೊಡ್ಡ ರಹಸ್ಯ: ಸಿಕ್ಕಿಹಾಕಿಕೊಂಡ ಶ್ವೇತಾ..!
ಅತ್ತ ಶ್ವೇತಾಗೂ ಸತ್ಯ ಗೊತ್ತಾಗಿದೆ!
ಆರತಿ ಮತ್ತು ಚಂದ್ರಶೇಖರ್ ಪುತ್ರಿಯೇ ನಕ್ಷತ್ರ ಎಂಬ ಸತ್ಯ ನಕ್ಷತ್ರಗೆ ಅದಾಗಲೇ ಗೊತ್ತಾಗಿದೆ ಎಂಬ ವಿಷಯ ಇದೀಗ ಶ್ವೇತಾ ಅರಿವಿಗೆ ಬಂದಿದೆ. ನಕ್ಷತ್ರಗೆ ನಿಜ ಗೊತ್ತಾಗಿರುವುದನ್ನು ಕೇಳಿ ಶ್ವೇತಾಗೂ ಆಘಾತ ಉಂಟಾಗಿದೆ.

‘ಲಕ್ಷಣ’ ಧಾರಾವಾಹಿಯಲ್ಲಿ ಬೆಳ್ಳಗಿದ್ದವರನ್ನು ಕರೆದುಕೊಂಡು ಬಂದು ಕಪ್ಪಗೆ ಮಾಡ್ತೀರಾ ಅಂತ ಕಾಮೆಂಟ್ ಮಾಡ್ತಿದ್ರು: ವಿಜಯಲಕ್ಷ್ಮೀ
ಮುಂದೆ ಏನಾಗಬಹುದು?
ಎಲ್ಲಾ ಸತ್ಯ ನಕ್ಷತ್ರಗೆ ಗೊತ್ತಾಗಿರುವಾಗ, ಆಕೆಯನ್ನ ಶ್ವೇತಾ ಸುಮ್ಮನೆ ಬಿಡುತ್ತಾಳಾ? ತಂದೆಯನ್ನೇ ಶ್ವೇತಾ ಕೊಲೆ ಮಾಡಿಸಲು ಮುಂದಾಗಿರೋದ್ರಿಂದ, ನಕ್ಷತ್ರಳ ಮುಂದಿನ ನಡೆ ಏನಾಗಿರಬಹುದು? ಇನ್ಮುಂದೆ ಶ್ವೇತಾ – ನಕ್ಷತ್ರ ಸಂಬಂಧ ಹೇಗಿರುತ್ತೆ ಎಂಬುದೇ ಸದ್ಯದ ಕುತೂಹಲ.

ಅಂದ್ಹಾಗೆ, ‘ಲಕ್ಷಣ’ ಧಾರಾವಾಹಿಯಲ್ಲಿ ನಕ್ಷತ್ರ ಆಗಿ ನಟಿ ವಿಜಯಲಕ್ಷ್ಮಿ, ಶ್ವೇತಾ ಆಗಿ ನಟಿ ಸುಕೃತಾ ನಾಗ್, ಭೂಪತಿ ಆಗಿ ಜಗನ್ನಾಥ್ ಚಂದ್ರಶೇಖರ್ ಅಭಿನಯಿಸುತ್ತಿದ್ದಾರೆ. ‘ಲಕ್ಷಣ’ ಧಾರಾವಾಹಿಯನ್ನು ಜಗನ್ನಾಥ್ ಚಂದ್ರಶೇಖರ್ ಅವರೇ ನಿರ್ಮಿಸುತ್ತಿದ್ದಾರೆ.



Read more

[wpas_products keywords=”deal of the day party wear dress for women stylish indian”]