Karnataka news paper

ಐಟಂ ಸಾಂಗ್‌ಗೆ ಕುಣಿಯುವಂತೆ ಹೇಳಿದ್ದ ಜಡ್ಜ್!: ನ್ಯಾಯಾಧೀಶೆಗೆ ಹುದ್ದೆ ಮರಳಿಸಲು ‘ಸುಪ್ರೀಂ’ ಆದೇಶ


ಹೊಸದಿಲ್ಲಿ: ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ 2014ರಲ್ಲಿ ಕೆಲಸ ತೊರೆದಿದ್ದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆಯನ್ನು ಮರಳಿ ಉದ್ಯೋಗಕ್ಕೆ ಸೇರಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ. 2014ರಲ್ಲಿ ಮಹಿಳಾ ನ್ಯಾಯಾಧೀಶರು ರಾಜೀನಾಮೆ ನೀಡುವ ಒತ್ತಡಕ್ಕೆ ಒಳಗಾಗಿದ್ದರು. ಹೀಗಾಗಿ ಅವರನ್ನು ಮರಳಿ ಸೇವೆಗೆ ಸೇರಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಲಾಗಿತ್ತು.

ಅವರ ರಾಜೀನಾಮೆ ಅಂಗೀಕರಿಸುವ ಆದೇಶವನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿಆರ್ ಗವಾಯಿ ಅವರನ್ನು ಒಳಗೊಂಡ ನ್ಯಾಯಪೀಠ, ಮಧ್ಯಪ್ರದೇಶ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆಯನ್ನಾಗಿ ಅವರನ್ನು ಮರು ನೇಮಕ ಮಾಡಬೇಕು ಎಂದು ನಿರ್ದೇಶನ ನೀಡಿದೆ. ಆದರೆ ಮಹಿಳೆಯು ಈ ಅವಧಿಯಲ್ಲಿ ಬಾಕಿಯಾದ ವೇತನ ಪಡೆಯಲು ಅರ್ಹರಲ್ಲ ಎಂದು ಕೂಡ ಕೋರ್ಟ್ ಹೇಳಿದೆ.
ನ್ಯಾಯಾಧೀಶರ ವಿರುದ್ಧ ಮಹಾಭಿಯೋಗಕ್ಕೆ ನಿರ್ಣಯ

2014ರ ಜುಲೈ 15ರಂದು ಅರ್ಜಿದಾರರು ತಮ್ಮ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆಯು ‘ಇತರೆ ಯಾವ ಆಯ್ಕೆಯೂ ಇಲ್ಲದ ಅನಿವಾರ್ಯ ಸನ್ನಿವೇಶಗಳಲ್ಲಿ’ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ನ್ಯಾಯಾಂಗ ತನಿಖಾ ಸಮಿತಿಯು 2017ರ ಡಿಸೆಂಬರ್ 15ರಂದು ನೀಡಿದ ವರದಿಯಲ್ಲಿನ ವರ್ಗೀಯ ಅಂಶಗಳನ್ನು ಹೈಕೋರ್ಟ್ ನಿರ್ಲಕ್ಷಿಸಿತ್ತು ಎಂದು ಮಹಿಳೆ ಆರೋಪಿಸಿದ್ದರು.

2014ರ ಜುಲೈನಲ್ಲಿ ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿ ಮತ್ತು ಕೇಂದ್ರ ಕಾನೂನು ಸಚಿವರಿಗೆ ಪತ್ರ ಬರೆದಿದ್ದ ಮಹಿಳೆ, ತಮ್ಮ ಮೇಲಿನ ಕಿರುಕುಳದ ಬಗ್ಗೆ ವಿವರವಾದ ಆರೋಪ ಮಾಡಿದ್ದರು. ಬಳಿಕ ಅವರು ಗ್ವಾಲಿಯರ್ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆಯ ಹುದ್ದೆಗೆ ರಾಜೀನಾಮೆ ನೀಡಿದ್ದರು.
‘ನನ್ನ ಜೊತೆ ಮಲಗು ಎಂದ’ ಹೆಣ್ಣೂರು ಠಾಣೆ ಇನ್ಸ್‌ಪೆಕ್ಟರ್‌ ವಿರುದ್ಧ ಆಯುಕ್ತರಿಗೆ ದೂರು ನೀಡಿದ ಮಹಿಳೆ

ಹೈಕೋರ್ಟ್ ನ್ಯಾಯಮೂರ್ತಿ ತಮಗೆ ಐಟಂ ಸಾಂಗ್‌ಗೆ ಡ್ಯಾನ್ಸ್ ಮಾಡುವಂತೆ ಸೂಚಿಸಿದ್ದರು ಎಂದು ಅವರು ಆರೋಪಿಸಿದ್ದರು. ಅಲ್ಲದೆ, ದೂರದ ಸ್ಥಳಕ್ಕೆ ತಮ್ಮ ವರ್ಗಾವಣೆ ಆಗುವಂತೆ ಅವರು ಪ್ರಭಾವ ಬೀರಿದ್ದರು ಎಂದೂ ದೂರಿದ್ದರು.

ರಾಜ್ಯ ಸಭೆ ನೇಮಿಸಿದ ಸಮಿತಿಯು ಲೈಂಗಿಕ ಕಿರುಕುಳ ಆರೋಪಗಳ ವಿಚಾರಣೆ ನಡೆಸಿ, ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ನ್ಯಾಯಮೂರ್ತಿಗೆ ಕ್ಲೀನ್ ಚಿಟ್ ನೀಡಿತ್ತು. ದೂರುದಾರ ಮಹಿಳೆಗೆ ಕಿರುಕುಳ ನೀಡಲು ಕೆಳ ನ್ಯಾಯಾಂಗ ವ್ಯವಸ್ಥೆಯನ್ನು ನ್ಯಾಯಮೂರ್ತಿ ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅದು ಹೇಳಿತ್ತು.



Read more

[wpas_products keywords=”deal of the day sale today offer all”]