ರವಿಚಂದ್ರನ್ ಕಿಡ್ನ್ಯಾಪ್..!
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನು ಕಿಡ್ನ್ಯಾಪ್ ಮಾಡಲಾಗಿದೆ. ಮುಂಜಾನೆ ಮನೆಯಲ್ಲಿದ್ದ ರವಿಚಂದ್ರನ್ ನಂತರ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ‘’ಸಡನ್ ಆಗಿ ಡೇಟ್ ಕೇಳಿದ್ರೆ ಆಗಲ್ಲ..’’ ಅಂತ ಯಾರೊಂದಿಗೋ ರವಿಚಂದ್ರನ್ ಫೋನ್ನಲ್ಲಿ ಮಾತನಾಡುತ್ತಿದ್ದರು. ಅಷ್ಟರಲ್ಲೇ ರವಿಚಂದ್ರನ್ ಅವರನ್ನು ಅಪಹರಣ ಮಾಡಲಾಗಿದೆ.
ರವಿಚಂದ್ರನ್ ಕಿಡ್ನ್ಯಾಪ್ ಆಗಿರುವ ವಿಷಯ ‘ಜೀ ಕನ್ನಡ’ ವಾಹಿನಿಯಲ್ಲಿ ಬ್ರೇಕಿಂಗ್ ನ್ಯೂಸ್ ಆಗಿದೆ. ಅಪಹರಣಕಾರರು ಯಾರು? ಅವರ ಬೇಡಿಕೆಗಳೇನು? ಅಂತೆಲ್ಲಾ ‘ಜೀ ಕನ್ನಡ’ ವಾಹಿನಿ ಸುದ್ದಿ ಮಾಡುತ್ತಿದೆ.
ಇದೇನಪ್ಪಾ ‘ಜೀ ಕನ್ನಡ’ ವಾಹಿನಿಯಲ್ಲಿ ನ್ಯೂಸ್ ಬರ್ತಿದ್ಯಾ ಅಂತ ಹುಬ್ಬೇರಿಸಬೇಡಿ.. ಅಸಲಿಗೆ, ರವಿಚಂದ್ರನ್ ಕಿಡ್ನ್ಯಾಪ್ ಆಗರುವ ಎಕ್ಸ್ಕ್ಲೂಸಿವ್ ವಿಶುವಲ್ಸ್ ಕೂಡ ‘ಜೀ ಕನ್ನಡ’ ಬಳಿಯೇ ಇದೆ..! ಇದೇನಪ್ಪಾ ಅಂತ ಕನ್ಫ್ಯೂಸ್ ಆಗುವ ಮುನ್ನ ‘ಡ್ರಾಮಾ ಜ್ಯೂನಿಯರ್ಸ್’ನ ಒಮ್ಮೆ ನೆನಪು ಮಾಡಿಕೊಳ್ಳಿ…
‘ಜೀ ಕನ್ನಡ’ ಹೀಗೊಂದು ಪ್ರೋಮೋ…
ಮುಂಜಾನೆ ತಮ್ಮ ಮನೆಯಲ್ಲಿ ರವಿಚಂದ್ರನ್ ಕಾಫಿ ಕುಡಿಯುವಂತೆ.. ಪಾರ್ಕ್ನಲ್ಲಿ ವಾಕಿಂಗ್ ಮಾಡುವಂತೆ.. ಶೂಟಿಂಗ್ ಸೆಟ್ನಲ್ಲಿ ರವಿಚಂದ್ರನ್ ಪಾಲ್ಗೊಳ್ಳುವಂತೆ.. ನಂತರ ಅವರು ಕಿಡ್ನ್ಯಾಪ್ ಆಗುವಂತೆ.. ಬಳಿಕ ಅದೇ ವಿಚಾರ ದೊಡ್ಡ ಬ್ರೇಕಿಂಗ್ ನ್ಯೂಸ್ ಆಗುವಂತೆ ‘ಜೀ ಕನ್ನಡ’ ವಾಹಿನಿ ಪ್ರೋಮೋವೊಂದನ್ನು ತಯಾರಿಸಿದೆ.
ಅಷ್ಟಕ್ಕೂ, ಈ ಪ್ರೋಮೋ ಯಾವ ಕಾರ್ಯಕ್ರಮಕ್ಕಾಗಿ ಎಂಬುದನ್ನು ‘ಜೀ ಕನ್ನಡ’ ವಾಹಿನಿ ರಿವೀಲ್ ಮಾಡಿಲ್ಲ. ನಟ ರವಿಚಂದ್ರನ್ ಅವರನ್ನು ಕಿಡ್ನ್ಯಾಪ್ ಮಾಡಿ, ಕಟ್ಟಿಹಾಕಿ ಕೋರಿಸಿರುವುದು ಯಾವ ಕಾರ್ಯಕ್ರಮಕ್ಕಾಗಿ ಎಂಬುದನ್ನು ‘ಜೀ ಕನ್ನಡ’ ವಾಹಿನಿ ಇನ್ನೂ ಗುಟ್ಟಾಗಿಯೇ ಇಟ್ಟಿದೆ. ಸದ್ಯಕ್ಕೆ ಪ್ರೋಮೋದಲ್ಲಿ ‘ಮುಂದುವರೆಯುತ್ತದೆ..’ ಅಂತ ತೋರಿಸಲಾಗಿದೆ. ರವಿಚಂದ್ರನ್ ಕಿಡ್ನ್ಯಾಪ್ ಆದ ನಂತರದಲ್ಲಿ ಏನಾಗಬಹುದು ಎಂಬುದರ ಮುಂದುವರಿದ ಪ್ರೋಮೋ ಸದ್ಯದಲ್ಲೇ ಬಿಡುಗಡೆ ಆಗಲಿದೆ.
‘ಡ್ರಾಮಾ ಜ್ಯೂನಿಯರ್ಸ್’ಗೆ ರವಿಚಂದ್ರನ್ ಜಡ್ಜ್..?
‘ಜೀ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ ‘ಡ್ರಾಮಾ ಜ್ಯೂನಿಯರ್ಸ್’ ಕೂಡ ಒಂದು. ‘ಡ್ರಾಮಾ ಜ್ಯೂನಿಯರ್ಸ್’ ಕಾರ್ಯಕ್ರಮದ ಹೊಸ ಸೀಸನ್ ಸದ್ಯದಲ್ಲೇ ಆರಂಭವಾಗಿದೆ. ಈಗಾಗಲೇ ಆಡಿಷನ್ ನೆರವೇರಿದ್ದು, ಸ್ಪರ್ಧಿಗಳ ಆಯ್ಕೆ ಕೊನೆಯ ಹಂತದಲ್ಲಿದೆ. ಇದೇ ಕಾರ್ಯಕ್ರಮಕ್ಕೆ ರವಿಚಂದ್ರನ್ ತೀರ್ಪುಗಾರರಾಗಿ ಬರಲಿದ್ದಾರಂತೆ ಎಂಬ ಅಂತೆ-ಕಂತೆ ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಅಂದ್ಹಾಗೆ, ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸ್ ಬೇಸ್ಡ್ ರಿಯಾಲಿಟಿ ಶೋನಲ್ಲಿ ರವಿಚಂದ್ರನ್ ತೀರ್ಪುಗಾರರಾಗಿದ್ದರು. ಇದೀಗ ‘ಡ್ರಾಮಾ ಜ್ಯೂನಿಯರ್ಸ್’ ಕಾರ್ಯಕ್ರಮಕ್ಕೆ ರವಿಚಂದ್ರನ್ ಜಡ್ಜ್ ಆಗುತ್ತಾರಾ? ಕಾದು ನೋಡೋಣ…
Read more
[wpas_products keywords=”deal of the day party wear dress for women stylish indian”]