Online Desk
ಬಿಜ್ನೋರ್: ಉತ್ತರ ಪ್ರದೇಶದ ಮೊದಲ ಹಂತದ ಚುನಾವಣೆಗೆ ಮೂರು ದಿನಗಳು ಬಾಕಿ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ ಸಮಾಜವಾದಿ ಪಕ್ಷದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ಸಮಾಜವಾದಿ ಪಕ್ಷ ನಕಲಿ, ಗುಂಡಾರಾಜ್ ಮತ್ತು ದುಃಸ್ಥಿತಿಗೆ ಸಮಾನ ಎಂದು ಹೇಳಿದರು.
ಬಿಜ್ನೋರ್ ನಲ್ಲಿ ವರ್ಚುವಲ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಿಎಂ ಯೋಗಿ ಅವರ ಅಧಿಕಾರಾವಧಿಯಲ್ಲಿ, ಕ್ರಿಮಿನಲ್ಗಳು ಜೈಲಿಗೆ ಕಳುಹಿಸಲಾಗುತ್ತಿದೆ ಮತ್ತು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಜೈಲಿನಲ್ಲಿರುವ ಎಸ್ಪಿ ನಾಯಕ ಅಜಮ್ ಖಾನ್ ಹೆಸರನ್ನು ಉಲ್ಲೇಖಿಸಿದ ಅವರು, ಆಡಳಿತ ಬದಲಾವಣೆಯಾಗಬಹುದೆಂದು ಆಶಿಸುತ್ತಾ ಜೈಲಿನಿಂದ ಹೊರಬರಲು ಮತ್ತು ಜನರ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ ಎಂದರು.
ಇದನ್ನು ಓದಿ: ಉತ್ತರ ಪ್ರದೇಶ: ಹಿಂದುತ್ವ ವಿಚಾರಕ್ಕೆ ಎನ್ಡಿಎನಲ್ಲಿ ಬಿರುಕು? ಮುಸ್ಲಿಮರು ಅಸ್ಪೃಶ್ಯರಲ್ಲ ಎಂದ ಬಿಜೆಪಿ ಪ್ರಮುಖ ಮಿತ್ರಪಕ್ಷ
ನಕಲಿ ಸಮಾಜವಾದಿ ರಾಜವಂಶದ ನೀತಿಗಳು 2017 ರವರೆಗೆ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯನ್ನು ನಿಲ್ಲಿಸಿದವು. ಆದರೆ ಯೋಗಿ ಆದಿತ್ಯನಾಥ್ ಸರ್ಕಾರವು ಯಾವುದೇ ತಾರತಮ್ಯವಿಲ್ಲದೆ ರಾಜ್ಯದ ಎಲ್ಲಾ ಪ್ರದೇಶಗಳನ್ನು ಸಮಾನವಾಗಿ ಅಭಿವೃದ್ಧಿಪಡಿಸುತ್ತಿದೆ ಎಂದು ಶ್ಲಾಘಿಸಿದರು.
ಯುಪಿಯಲ್ಲಿ ಹಿಂದಿನ ಎರಡು ಸರ್ಕಾರಗಳು ಪಾವತಿಸಿದ ಹಣಕ್ಕಿಂತ ಯೋಗಿ ಆದಿತ್ಯನಾಥ್ ಸರ್ಕಾರವು ರೈತರಿಗೆ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಕಬ್ಬಿನ ಬಾಕಿಯನ್ನು ಪಾವತಿಸಿದೆ. ಆದರೆ ಹಿಂದಿನ ಸರ್ಕಾರಗಳು ತಮ್ಮ ಮತ್ತು ತಮ್ಮ ಆತ್ಮೀಯರ ದಾಹವನ್ನು ನೀಗಿಸಿಕೊಳ್ಳುವುದಾಗಿತ್ತು. ಜೊತೆಗೆ ತಮ್ಮ ಬೊಕ್ಕಸವನ್ನು ತುಂಬಿಕೊಳ್ಳುತ್ತಲೇ ಇದ್ದರು ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ರಾಷ್ಟ್ರವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿ ಅಂದರೆ ಮುಂದಿನ 25 ವರ್ಷಗಳಲ್ಲಿ ಯುಪಿ ತನ್ನ ಅಭಿವೃದ್ಧಿಯಲ್ಲಿ ಛಾಪು ಮೂಡಿಸುತ್ತದೆ. ಇಲ್ಲಿನ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತು ರೈತರಿಗೆ ಎಲ್ಲಾ ಸಹಾಯ ಸಿಗುವಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.
Read more
[wpas_products keywords=”deal of the day”]