Karnataka news paper

ಗುಡ್‌ನ್ಯೂಸ್‌; ಇನ್ಮುಂದೆ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಆನ್‌ಲೈನ್‌ನಲ್ಲೇ ಟಿಕೆಟ್‌ ವ್ಯವಸ್ಥೆ


ಬೆಂಗಳೂರು: ನಂದಿ ಗಿರಿಧಾಮಕ್ಕೆ ನಿತ್ಯ ನೂರಾರು ಕಾರುಗಳು, ದ್ವಿಚಕ್ರ ವಾಹನಗಳು ಬರುತ್ತವೆ. ಅದರಲ್ಲೂ ವಾರಾಂತ್ಯದಲ್ಲಿ ಸಾಲುಗಟ್ಟಿ ಬರುವ ವಾಹನಗಳು, ಒಮ್ಮೆಲೆ ಬಂದು ಪ್ರವೇಶ ದ್ವಾರದ ಬಳಿ ನಿಲ್ಲುತ್ತವೆ. ಹೆಚ್ಚು ವಾಹನಗಳು ಬಂದು ನಿಲ್ಲುವುದರಿಂದ ಶುಲ್ಕ ಸಂಗ್ರಹಿಸಿ ಒಳಬಿಡುವ ವೇಳೆಗೆ ವಿಪರೀತ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಇದರಿಂದ ವಾಹನ ಸವಾರರು ಗಂಟೆಗಟ್ಟಲೆ ಟಿಕೆಟ್‌ಗಾಗಿ ಕಾಯಬೇಕಿತ್ತು.

ಅಷ್ಟೇ ಅಲ್ಲ, ವಾಹನಗಳು ಹೆಚ್ಚಾಗಿ ನಿಲುಗಡೆ ಸ್ಥಳದಲ್ಲಿ ಸಾಕಷ್ಟು ಅನಾನುಕೂಲ ಉಂಟಾಗುತ್ತಿತ್ತು. ಈ ಸಮಸ್ಯೆಗಳ ನಿವಾರಣೆಗಾಗಿ ಈ ತಿಂಗಳಾಂತ್ಯದಲ್ಲಿ ಬರಲಿದೆ ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ. ಹೌದು, ನಂದಿ ಹಿಲ್ಸ್‌ಗೆ ಹೋಗುವವರು ಟಿಕೆಟ್‌ಗಾಗಿ ಗಂಟೆಗಟ್ಟಲೆ ಕಾರಿನಲ್ಲಿ ಕಾಯಬೇಕಿಲ್ಲ. ಆನ್‌ಲೈನ್‌ನಲ್ಲೇ ಪ್ರವೇಶ ಟಿಕೆಟ್‌ ಕಾಯ್ದಿರಿಸಬಹುದು. ಇದರಿಂದ ಸಂಚಾರ ದಟ್ಟಣೆಯೂ ಉಂಟಾಗುವುದಿಲ್ಲ. ಈವರೆಗೆ ಅತಿಥಿ ಗೃಹಗಳಲ್ಲಿ ತಂಗುವವರಿಗೆ ಮಾತ್ರ ಆನ್‌ಲೈನ್‌ನಲ್ಲಿ ಬುಕಿಂಗ್‌ ವ್ಯವಸ್ಥೆಯಿತ್ತು. ಇದೀಗ ನಿತ್ಯ ಬಂದು ಹೋಗುವ ಪ್ರವಾಸಿಗರು ಮತ್ತು ವಾಹನಗಳಿಗೆ ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ ಜಾರಿಗೆ ಬರಲಿದೆ.

ನಂದಿಬೆಟ್ಟವು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಆದರೆ ಗಿರಿಧಾಮದಲ್ಲಿ ರೋಪ್‌ ವೇ ನಿರ್ಮಾಣ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳನ್ನು ಕರ್ನಾಟಕ ಪ್ರವಾಸೋದ್ಯಮ ನಿಗಮದ ವ್ಯಾಪ್ತಿಗೆ ವಹಿಸಲಾಗಿದೆ. ಹೀಗಾಗಿ, ನಿಗಮವು ಮೊದಲ ಹೆಜ್ಜೆಯಾಗಿ ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ ಜಾರಿಗೆ ಮುಂದಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ ಜೋಕೆ!
ನಂದಿ ಬೆಟ್ಟಕ್ಕೆ ಪ್ರವಾಸೋದ್ಯಮ ನಿಗಮದಿಂದ ಬಸ್‌ ವ್ಯವಸ್ಥೆ
ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ನೇರ ಬಸ್‌ ವ್ಯವಸ್ಥೆಯಿಲ್ಲ. ಈ ಹಿಂದೆ ಮೆಜೆಸ್ಟಿಕ್‌ನಿಂದ ಬಸ್‌ಗಳ ಸಂಚಾರ ಇತ್ತಾದರೂ, ಕೊರೊನಾ ಬಳಿಕ ರದ್ದುಗೊಳಿಸಲಾಗಿದೆ. ಹೀಗಾಗಿ ದೊಡ್ಡಬಳ್ಳಾಪುರದಿಂದ ನಂದಿಬೆಟ್ಟ ಕ್ರಾಸ್‌ಗೆ ಹೋಗಿ ಹೋಗಬೇಕು. ಇಲ್ಲವೇ ಚಿಕ್ಕಬಳ್ಳಾಪುರದಿಂದ ತೆರಳಬೇಕು. ಚಿಕ್ಕಬಳ್ಳಾಪುರದಿಂದ ನಂದಿಬೆಟ್ಟಕ್ಕೆ ಒಂದು ಬಸ್‌ ಪಾಳಿ ಆಧಾರದಲ್ಲಿ ಸಂಚರಿಸುತ್ತದೆ. ಇನ್ನು ಮುಂದೆ ನಂದಿಬೆಟ್ಟದ ಕ್ರಾಸ್‌ನಿಂದ ಬೆಟ್ಟಕ್ಕೆ ಪ್ರವಾಸೋದ್ಯಮ ನಿಗಮದಿಂದಲೇ ಬಸ್‌ ವ್ಯವಸ್ಥೆ ಮಾಡಲಾಗುತ್ತಿದೆ. ಸ್ವಂತ ವಾಹನದಲ್ಲಿ ಬಂದವರು ಕೂಡ ಬೆಟ್ಟದ ಕೆಳಗಡೆ ನಿಲ್ಲಿಸಿ ಈ ಬಸ್‌ನಲ್ಲಿ ತೆರಳಬಹುದು.

‘ವಾಹನಗಳ ನಿಲುಗಡೆಗೆ ಜಾಗ ಹುಡುಕಲಾಗುತ್ತಿದೆ. ಪ್ರಾಯೋಗಿಕ ಹಂತದಲ್ಲಿ ನಿತ್ಯ ಶೇ.50 ರಷ್ಟು ವಾಹನಗಳಿಗೆ ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ ಮಾಡಲಾಗುವುದು. ನಿಲುಗಡೆಗೆ ಎಷ್ಟು ಜಾಗ ಇರುತ್ತದೆಯೋ ಅಷ್ಟು ವಾಹನಗಳಿಗೆ ಮಾತ್ರ ಟಿಕೆಟ್‌ ನೀಡಲಾಗುವುದು. ಉಳಿದಂತೆ ಬೆಟ್ಟದ ಕೆಳಗಡೆಯೇ ನಿಲ್ಲಿಸಲು ವ್ಯವಸ್ಥೆ ಮಾಡಿ ನಮ್ಮದೇ ಬಸ್‌ಗಳಲ್ಲಿ ನಂದಿಬೆಟ್ಟಕ್ಕೆ ಕರೆದೊಯ್ಯಲಾಗುವುದು. ಫೆಬ್ರವರಿ ಅಂತ್ಯದೊಳಗೆ ಪ್ರವೇಶ ಟಿಕೆಟ್‌ಗಳ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಲಾಗುವುದು’
– ಜಿ. ಜಗದೀಶ್‌, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ
ಬೆಂಗಳೂರು: ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನಗಳ ನಿಲುಗಡೆ ಹೆಚ್ಚಳ, ಸಂಚಾರ ಪೊಲೀಸರಿಗೆ ದೂರು
ಶೀಘ್ರದಲ್ಲೇ ವಾರಾಂತ್ಯ ಪ್ರವೇಶ
ಕೋವಿಡ್‌ ಹಿನ್ನೆಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದ್ದರಿಂದ ನಂದಿಬೆಟ್ಟಕ್ಕೆ ವಾರಾಂತ್ಯದ ವೇಳೆ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ ಜತೆಯಲ್ಲೇ ವಾರಾಂತ್ಯ ಪ್ರವೇಶಕ್ಕೂ ಅವಕಾಶ ಕಲ್ಪಿಸಲಾಗುವುದು ಎಂದು ಜಿ. ಜಗದೀಶ್‌ ತಿಳಿಸಿದರು.



Read more

[wpas_products keywords=”deal of the day sale today offer all”]