ಚಿಕ್ಕಬಳ್ಳಾಪುರ ತಾಲೂಕಿನ ಮೋಟ್ಲುರು ಗ್ರಾಮದಲ್ಲಿ ನಿಸಾರ್ ಅಹಮದ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಜಾಬ್ ವಿಷಯ ಸಂಬಂಧ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಇಂತಹ ಸಮಯದಲ್ಲಿ ಸರಕಾರ ಸಮವಸ್ತ್ರ ನೀತಿ ತಂದಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಜನರಲ್ಲಿ ವಿನಾಕಾರಣ ಗೊಂದಲ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.
ಮೊದಲಿಂದಲೇ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಯೇ ಶಾಲಾ – ಕಾಲೇಜುಗಳಿಗೆ ಹೋಗುತ್ತಿದ್ದರು. ಇದೇನು ಹೊಸ ವಿಷಯ ಅಥವಾ ನೀತಿಯಲ್ಲ. ಕೆಲವರು ಬೇಕೆಂದೇ ಇದನ್ನು ಈಗ ವಿವಾದ ಮಾಡುತ್ತಿದ್ದಾರೆ. ಅನಗತ್ಯ ಗೊಂದಲ, ವಿವಾದ ಸೃಷ್ಟಿಸುವ ಬದಲು ಶಾಂತಿಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಯು. ಟಿ. ಖಾದರ್ ಸಲಹೆ ನೀಡಿದರು.
ಭಾರತ ದೇಶದಲ್ಲಿ ಸರ್ವ ಧರ್ಮವನ್ನು ಪ್ರೀತಿಸುವ ವ್ಯವಸ್ಥೆ ಇದೆ. ಇಡೀ ಜಗತ್ತಿಗೇ ಭಾರತ ದೇಶ ಮಾದರಿಯಾಗಿದೆ. ಇದನ್ನು ಅರಿಯದವರು ವಿನಾಕಾರಣ ಈ ರೀತಿ ವಿವಾದಗಳನ್ನು ಮಾಡುತ್ತಾರೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ರಾಜ್ಯದ ಕೆಲವು ತಾಲೂಕುಗಳಲ್ಲಿ ಈ ರೀತಿಯ ಪ್ರಕರಣಗಳು ನಡೆದಿವೆ. ಹಿಜಾಬ್ ಹಾಕಬೇಕೇ, ಬೇಡವೇ ಎಂಬ ವಿಚಾರ ಇದೀಗ ಕೋರ್ಟ್ ಅಂಗಳದಲ್ಲಿ ಇದೆ. ಕೆಲವರು ಇದನ್ನು ವಿರೋಧಿಸಿ ಶಾಲು ಹಾಕಿಕೊಂಡು ಬರುತ್ತಿದ್ದಾರೆ. ಹೀಗಿದ್ದಾಗ ಸರಕಾರ ಶಾಲು ಹಾಕಿಕೊಳ್ಳಲು ಅವಕಾಶ ನೀಡಬೇಕು. ಇಲ್ಲ ನಿಷೇಧ ಮಾಡುಬೇಕು. ಅದನ್ನು ಬಿಟ್ಟು ಸಮವಸ್ತ್ರ ನೀತಿ ಜಾರಿ ಮಾಡಿ ಹಿಜಾಬ್ ನಿಷೇಧ ಮಾಡಿರುವುದು ಸರಿಯಲ್ಲ ಎಂದರು.
ಸರಕಾರ ಇರುವ ಸಮಸ್ಯೆಯನ್ನು ನಿವಾರಿಸಬೇಕು. ಅದನ್ನು ಬಿಗಡಾಯಿಸುವಂತೆ ಮಾಡಬಾರದು. ಹಿಜಾಬ್ ವಿಚಾರದಲ್ಲಿ ಸರಕಾರ ತೆಗದುಕೊಂಡಿರುವ ನಿರ್ಧಾರ ಸರಿಯಲ್ಲ. ಸರಕಾರವೇ ನಾನಾ ನೀತಿಗಳನ್ನು ಜಾರಿಗೊಳಿಸಿ ವಿಷಯವನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತಿದೆ ಎಂದರು ಕಾಂಗ್ರೆಸ್ ನಾಯಕ ಯು. ಟಿ. ಖಾದರ್ ಆರೋಪಿಸಿದರು.
Read more
[wpas_products keywords=”deal of the day sale today offer all”]