Karnataka news paper

ಬಿಎಸ್‌ವೈ ಪ್ರಚಾರ, ಬಿಜೆಪಿ ನಾಯಕರ ಒಗ್ಗಟ್ಟೇ ನನ್ನ ಗೆಲುವಿಗೆ ಕಾರಣ: ಡಿ. ಎಸ್‌. ಅರುಣ್‌


ಹೈಲೈಟ್ಸ್‌:

  • ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನ ಕುಮಾರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಡಿ. ಎಸ್. ಅರುಣ್
  • ವಿಧಾನ ಪರಿಷತ್ ಮಾಜಿ ಸಭಾಪತಿ ಬಿಜೆಪಿ ಹಿರಿಯ ನಾಯಕ ಡಿ. ಹೆಚ್. ಶಂಕರಮೂರ್ತಿ ಅವರ ಪುತ್ರ
  • ಇದೇ ಮೊದಲ ಬಾರಿಗೆ ಡಿ. ಎಸ್. ಅರುಣ್ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ

ಶಿವಮೊಗ್ಗ: ರಾಜ್ಯದ ಗಮನ ಸೆಳೆದಿದ್ದ ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಬಿ. ಎಸ್‌. ಯಡಿಯೂರಪ್ಪ ಹಾಗೂ ಪಕ್ಷದ ನಾಯಕರ ಒಗ್ಗಟ್ಟೇ ಕಾರಣ ಎಂದು ವಿಜೇತ ಅಭ್ಯರ್ಥಿ ಡಿ. ಎಸ್. ಅರುಣ್ ಅಭಿಪ್ರಾಯಪಟ್ಟಿದ್ಧಾರೆ.

ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನ ಕುಮಾರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಡಿ. ಎಸ್. ಅರುಣ್, ವಿಧಾನ ಪರಿಷತ್ ಮಾಜಿ ಸಭಾಪತಿ ಬಿಜೆಪಿ ಹಿರಿಯ ನಾಯಕ ಡಿ. ಎಚ್. ಶಂಕರಮೂರ್ತಿ ಅವರ ಪುತ್ರ. ಇದೇ ಮೊದಲ ಬಾರಿಗೆ ಡಿ. ಎಸ್. ಅರುಣ್ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಈ ಮೂಲಕ ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೊಮ್ಮೆ ಗೆಲ್ಲುವುದಿಲ್ಲ ಎನ್ನುವ ಪರಿಪಾಠ ಈ ಚುನಾವಣೆಯಲ್ಲಿ ಮುಂದುವರೆದಿದೆ.

ಇದರೊಂದಿಗೆ ಈ ಹಿಂದೆ ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತಿದ್ದ ಪರಿಪಾಠಕ್ಕೆ ಅರುಣ್ ಬ್ರೇಕ್ ಹಾಕಿದ್ದಾರೆ. ಯಾವುದೇ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿರದ ಅರುಣ್, ತಾವು ಎದುರಿಸಿದ ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಡಿ. ಎಸ್. ಅರುಣ್ 2,192 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನ ಕುಮಾರ್ 1848 ಮತಗಳನ್ನು ಪಡೆದಿದ್ದಾರೆ.

ತಮ್ಮ ಗೆಲುವಿನ ಬಗ್ಗೆ ಡಿಎಸ್‌ ಅರುಣ್‌ ಹೇಳಿದ್ದಿಷ್ಟು..!

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣ್, ಒಂದು ತಿಂಗಳ ಪರಿಶ್ರಮದಿಂದ ಗೆಲುವಾಗಿದೆ ಎಂದರು. ಈ ಚುನಾವಣೆ ಘೊಷಣೆಯಾದ ಬಳಿಕ ಬಿಜೆಪಿ ಸಕಲ ರೀತಿಯಲ್ಲಿ ಸನ್ನದ್ಧವಾಯ್ತು. ಈ ಗೆಲುವು ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ಭಾವಿಸಿ ಎಲ್ಲರೂ ಸೇರಿ ಗೆಲುವು ಸಾಧಿಸಲು ಪಣ ತೊಟ್ಟೆವು. ಸುಮಾರು 95% ಮತದಾರರು ಗ್ರಾಮ ಪಂಚಾಯತ್ ಸದಸ್ಯರೇ ಆಗಿದ್ದಾರೆ.

ಬಿಜೆಪಿಯಿಂದ ಜನ ವಿರೋಧಿ ನೀತಿ, ಮೇಲ್ಮನೆ ಎಲೆಕ್ಷನ್‌ನಲ್ಲಿ ವೋಟ್ ಕೇಳುವ ಹಕ್ಕಿಲ್ಲ: ಮಧು ಬಂಗಾರಪ್ಪ
ಈ ಗ್ರಾಮ ಪಂಚಾಯತಿಯ ಬಹುತೇಕ ಸದಸ್ಯರು ನಮ್ಮ ಬಿಜೆಪಿ ಕಾರ್ಯಕರ್ತರೇ ಆಗಿದ್ದರು. ಬೂತ್‌ ಮಟ್ಟದ ಅಧ್ಯಕ್ಷ, ಶಕ್ತಿ ಕೇಂದ್ರದ ಅಧ್ಯಕ್ಷ, ವಾರ್ಡ್‌‌ ಮಟ್ಟದ ಕಾರ್ಯಕರ್ತ ಹೀಗೆ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಾ ಇರುವ ಕಾರ್ಯಕರ್ತರೂ ಸೇರಿದಂತೆ ನಮ್ಮ ಬಲ ಹೆಚ್ಚಾಗಿದೆ. ಜೊತೆಗೆ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪನವರ ಕೊಡುಗೆ ಹೆಚ್ಚಿದೆ. ಚುನಾವಣೆ ಘೋಷಣೆಯಾದ ದಿನದಿಂದಲೇ ಬಿಎಸ್‌ವೈ ಈ ಬಗ್ಗೆ ಚಿಂತಿಸಿದ್ದರು. ನನ್ನ ಹೆಸರು ಅಧಿಕೃತವಾಗುತ್ತಿದ್ದಂತೆಯೇ ದಾವಣಗೆರೆ ಭಾಗದಲ್ಲಿ ಚುನಾವಣೆಯ ಮೊದಲ ಪ್ರಚಾರವನ್ನು ಬಿ. ಎಸ್‌. ಯಡಿಯೂರಪ್ಪನವರೇ ಆರಂಭಿಸಿದರು. ಅದರ ಜೊತೆಗೆ ನಮ್ಮ ಜಿಲ್ಲೆಯ ಇನ್ನೊಬ್ಬ ನಾಯಕರಾದ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್‌. ಈಶ್ವರಪ್ಪ ಕೂಡ ಎಲ್ಲಾ ಕಡೆ ಶ್ರಮ ವಹಿಸಿ ಪ್ರಚಾರ ಮಾಡಿದ್ದಾರೆ. ಸೀಮಿತ ಅವಧಿಯಲ್ಲಿ ಒಂಭತ್ತು ವಿಧಾನ ಸಭಾ ಕ್ಷೇತ್ರದಲ್ಲೂ ಸಂಚರಿಸಿ ಕಾರ್ಯಕರ್ತರು, ಗ್ರಾಮ ಪಂಚಾಯತ್‌ ಸದಸ್ಯರ ಸಭೆ ಮಾಡಿದ್ದಾರೆ. ಸಂಸದ ಬಿ. ವೈ. ರಾಘವೇಂದ್ರ ಕೂಡ ಸಾಕಷ್ಟು ಸಭೆಗಳನ್ನ ಪ್ರತ್ಯೇಕವಾಗಿ ಮಾಡಿ ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಅವರಿಗೆಲ್ಲಾ ನಾನು ಚಿರ ಋಣಿ ಎಂದು ಅರುಣ್ ಹೇಳಿದರು.

ನಮ್ಮಿಂದ ವ್ಯತ್ಯಾಸವಾದರೆ.. ಕೊಡ್ತೀರಾ? ಮತಗಟ್ಟೆಯಲ್ಲಿ ಕುತೂಹಲ ಮೂಡಿಸಿದ ಬಿಎಸ್‌ವೈ ಪ್ರಶ್ನೆ..!
ಡಿ. ಎಸ್‌. ಅರುಣ್‌ ತಮ್ಮ ಗೆಲುವಿಗೆ ಒಗ್ಗಟ್ಟೇ ಕಾರಣ ಎಂದು ಹೇಳಿದರು. ಮಂತ್ರಿಗಳು, ಶಾಸಕ, ಸಂಸದರ ಒಟ್ಟಾರೆ ಒಗ್ಗಟ್ಟು ಪ್ರದರ್ಶನ ನನ್ನ ಗೆಲುವಿಗೆ ಸಹಕಾರಿಯಾಯ್ತು. ಇಂತಹ ಒಗ್ಗಟ್ಟು ಬಿಜೆಪಿ ಕಾರ್ಯಕರ್ತರಲ್ಲಿ ಏನಾದರೂ ಸಾಧನೆ ಮಾಡಬಹುದು ಎಂಬ ಆಶಾದಾಯಕ ಬೆಳವಣಿಗೆ ಮೂಡಿಸುತ್ತದೆ. ಈ ಚುನಾವಣೆಯಲ್ಲಿ ನಾವು ಹಲವು ರೀತಿಯ ಪ್ರಚಾರಗಳನ್ನ ಮಾಡಿದ್ದೇವೆ. ಕೇವಲ ಇಪ್ಪತ್ತೊಂದು ದಿನದಲ್ಲಿ ಮತದಾರರನ್ನ ಮೂರು ಬಾರಿ ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಶಿವಮೊಗ್ಗ ದೊಡ್ಡ ಕ್ಷೇತ್ರ. 4,166 ಮತದಾರರಿದ್ದಾರೆ. ನಾವು 365 ಪಂಚಾಯಿತಿಗಳಿಗೂ ಹೋಗಿ ಅವರನ್ನ ಖುದ್ದಾಗಿ ಭೇಟಿ ಮಾಡುವ ಪ್ರಯತ್ನ ಮಾಡಿದೆವು. ಎರಡು ಮೂರು ಪಂಚಾಯಿತಿಗಳನ್ನ ಸೇರಿಸಿಯೂ ಸಭೆಗಳನ್ನ ಮಾಡಿದ್ದೇವೆ. ಪ್ರತಿ ಕ್ಷೇತ್ರ ಹಾಗೂ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಸಹ ಆಯಾ ಕ್ಷೇತ್ರದ ಜನಪ್ರತಿನಿಧಿಗಳು ನಮಗೆ ಸಹಕರಿಸಿದ್ದಾರೆ. ಎಲ್ಲರ ಅಪೇಕ್ಷೆಯನ್ನೂ ಕೇಳಿ ಪಡೆದುಕೊಂಡಿದ್ದೆವು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನ ಸಹ ಸದಸ್ಯರ ಮುಂದೆ ಇಟ್ಟಿದ್ದೆವು. ಈ ಕಾರ್ಯಕ್ರಮಗಳಿಂದಲೂ ಸಹ ಸದಸ್ಯರ ವೋಟು ಪಡೆಯಲು ಅನುಕೂಲವಾಯ್ತು ಎಂದು ಡಿಎಸ್‌ ಅರುಣ್‌ ಹೇಳಿದರು.

ಮನೆ ಅಕ್ರಮ ಸಕ್ರಮದಲ್ಲಿ ಭ್ರಷ್ಟಾಚಾರ; ಶಿವಮೊಗ್ಗದಲ್ಲಿ ಕೋಟ್ಯಂತರ ರೂ. ಮೌಲ್ಯದ ಭೂ ಕಬಳಿಕೆ!



Read more