Karnataka news paper

ಕರ್ನಾಟಕದಲ್ಲಿ 8 ಸಾವಿರಕ್ಕಿಳಿದ ದೈನಂದಿನ ಕೊರೊನಾ ಕೇಸ್: ಭಾನುವಾರ 47 ಕೋವಿಡ್ ಸೋಂಕಿತರ ಸಾವು


ಬೆಂಗಳೂರು:ಕರ್ನಾಟಕ ರಾಜ್ಯಾದ್ಯಂತ ಭಾನುವಾರ 8,425 ಕೊರೊನಾ ವೈರಸ್ ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕರ್ನಾಟಕ ರಾಜ್ಯಾದ್ಯಂತ ಈವರೆಗೆ ದೃಢಪಟ್ಟ ಒಟ್ಟು ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 38,96,158 ಕ್ಕೆ ಏರಿಕೆ ಕಂಡಿದೆ.

ಭಾನುವಾರ ಕೂಡಾ ರಾಜ್ಯಾದ್ಯಂತ 19,800 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಒಟ್ಟು ಸಂಖ್ಯೆ 37,58,997ಕ್ಕೆ ಏರಿದೆ.

ಮತ್ತಷ್ಟು ದುರ್ಬಲವಾದ ಓಮಿಕ್ರಾನ್: ಹೊಸ ಪ್ರಕರಣಕ್ಕಿಂತ ಎರಡು ಪಟ್ಟು ಹೆಚ್ಚು ಮಂದಿ ಗುಣಮುಖ
ರಾಜ್ಯದಲ್ಲಿ ಸದ್ಯ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 97,781ಕ್ಕೆ ಇಳಿಕೆ ಕಂಡಿದೆ. ಆದ್ರೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಚಿಕಿತ್ಸೆ ಫಲಿಸದೇ 47 ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 39,347ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿನ ಕೊರೊನಾ ವೈರಸ್ ಸೋಂಕಿನ ಪಾಸಿಟಿವಿಟಿ ದರ ಶೇ. 6.5ಕ್ಕೆ ಇಳಿಕೆ ಕಂಡಿದೆ. ಇನ್ನು ಕಳೆದ 24 ಗಂಟೆಗಳಲ್ಲಿ 1,29,337 ಮಂದಿಯನ್ನು ಕೋವಿಡ್ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಲೆಕ್ಕಾಚಾರ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಒಟ್ಟು 3,822 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 5.9ಕ್ಕೆ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಸದ್ಯ 40 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನಲ್ಲಿ 17 ಸೋಂಕಿತರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಕ್ರಮೇಣ ಇಳಿಕೆ: ಸಚಿವ ಸುಧಾಕರ್
ಜಿಲ್ಲಾವಾರು ಲೆಕ್ಕಾಚಾರ: ಬಾಗಲಕೋಟೆ 81, ಬಳ್ಳಾರಿ 249, ಬೆಳಗಾವಿ 221, ಬೆಂಗಳೂರು ಗ್ರಾಮಾಂತರ 92, ಬೀದರ್ 75, ಚಾಮರಾಜನಗರ 161, ಚಿಕ್ಕಬಳ್ಳಾಪುರ 100, ಚಿಕ್ಕಮಗಳೂರು 87, ಚಿತ್ರದುರ್ಗ 183, ದಕ್ಷಿಣ ಕನ್ನಡ 163, ದಾವಣಗೆರೆ 56, ಧಾರವಾಡ 211, ಗದಗ 50, ಹಾಸನ 276, ಹಾವೇರಿ 88, ಕಲಬುರಗಿ 195, ಕೊಡಗು 219, ಕೋಲಾರ 114, ಕೊಪ್ಪಳ 99, ಮಂಡ್ಯ 241, ಮೈಸೂರು 582, ರಾಯಚೂರು 34, ರಾಮನಗರ 45, ಶಿವಮೊಗ್ಗ 183, ತುಮಕೂರು 318, ಉಡುಪಿ 175, ಉತ್ತರ ಕನ್ನಡ 141, ವಿಜಯಪುರ 135 ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಭಾನುವಾರ ಒಟ್ಟು 29 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿವೆ.
ಮೂರನೇ ಅಲೆ ಆರ್ಭಟಕ್ಕೆ ಅಂಕುಶ: ಕರ್ನಾಟಕದಲ್ಲಿ ಕೋವಿಡ್ ಪ್ರಕರಣದಲ್ಲಿ ಗಣನೀಯ ಕುಸಿತ



Read more

[wpas_products keywords=”deal of the day sale today offer all”]