Karnataka news paper

ಅದೃಷ್ಟದ ಚೊಂಬು ತೋರಿಸಿ ಬೆಂಗಳೂರಿನ ವ್ಯಕ್ತಿಗಳಿಗೆ ಕೋಟಿ ವಂಚನೆ : ಇಬ್ಬರ ಬಂಧನ


ಬೆಂಗಳೂರು : ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ಲಕ್ಷಾಂತರ ರೂ. ವಂಚಿಸಿದ ಇಬ್ಬರು ಆರೋಪಿಗಳು ಪಶ್ಚಿಮ ವಿಭಾಗದ ಬ್ಯಾಟರಾಯನಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ ನಾಗರಾಜ್‌(45) ಮತ್ತು ಮಂಡ್ಯ ಮೂಲದ ವಿಘ್ನೇಶ್‌(37) ಬಂಧಿತರು. ಆರೋಪಿಗಳಿಂದ 15 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸಂತೋಷ್‌ ಎಂಬಾತನಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.

ಆರೋಪಿಗಳ ಪೈಕಿ ವಿಘ್ನೇಶ್‌ ನಾಗರಬಾವಿಯಲ್ಲಿ ವಾಸವಾಗಿದ್ದು, ಜೀವನ ನಿರ್ವಹಣೆಗಾಗಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ. ನಾಗರಾಜ್‌ ಕೂಡ ನಗರದಲ್ಲಿ ಕೆಲಸ ಮಾಡಿಕೊಂಡಿದ್ದ. ವಿಘ್ನೇಶ್‌ಗೆ ಸಂತೋಷ್‌ ಪರಿಚಯವಾಗಿ ರೈಸ್‌ ಪುಲ್ಲಿಂಗ್‌ ಬಗ್ಗೆ ಹೇಳಿದ್ದಾನೆ.

ಇದನ್ನು ನಂಬಿದ್ದ ಆರೋಪಿಗಳಿಬ್ಬರು ಜ.3ರಂದು ನಗರದ ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣದಲ್ಲಿ ದೂರುದಾರರಾದ ನಿತಿನ್‌ ರಾಜ್‌ ಮತ್ತು ಸ್ನೇಹಿತ ಗೋಪಿ ಕಾರ್ತಿಕ್‌ ಎಂಬುವರನ್ನು ಪರಿಚಯ ಮಾಡಿಕೊಂಡಿದ್ದಾರೆ. ಅಲ್ಲದೇ, ರೈಸ್‌ಪುಲ್ಲಿಂಗ್‌ ಬಗ್ಗೆ ವಿವರಿಸಿದ್ದರು. ಸಿಡಿಲು ಬಡಿದ ಒಂದು ಚೆಂಬು ತೋರಿಸಿ, ಅದರಲ್ಲಿ ಐಸೋಟೋಪ್‌ ರೇಡಿಯೇಷನ್‌ ಇದ್ದು, ಅದನ್ನು ಅಮೆರಿಕಾದ ನಾಸಾ, ಜಪಾನಿನ ಜಾಕ್ಸ್‌ ಕಂಪನಿಗೆ ಮಾರಾಟ ಮಾಡುತ್ತಿದ್ದೇವೆ. ದಂಧೆಯಲ್ಲಿ ಕೈಜೋಡಿಸಿ ಒಂದು ಕೋಟಿ ರೂ. ಹೂಡಿಕೆ ಮಾಡಿದರೆ ಐದು ಕೋಟಿ ರೂ. ಲಾಭ ದೊರೆಯುವುದಾಗಿ ನಂಬಿಸಿದ್ದರು.

‘ರೈಸ್ ಪುಲ್ಲಿಂಗ್ ಯಂತ್ರ’ದ ಹೆಸರಲ್ಲಿ ಕೋಟ್ಯಂತರ ರೂ ಸುಲಿಗೆ..! ‘ವಿಜ್ಞಾನಿ’ ವೇಷದ ವಂಚಕಿ ಅಂದರ್

ಇದನ್ನು ನಂಬಿದ್ದ ನಿತಿನ್‌ ರಾಜ್‌ ಮತ್ತು ಸ್ನೇಹಿತ ಗೋಪಿ ಕಾರ್ತಿಕ್‌ ಹಂತ-ಹಂತವಾಗಿ 48 ಲಕ್ಷ ರೂ. ಕೊಟ್ಟಿದ್ದಾರೆ. ನಂತರ ಆರೋಪಿಗಳು ಯಾವುದೇ ಲಾಭಂಶದ ಹಣವನ್ನು ನೀಡದೇ, ಇತ್ತ ಚೆಂಬು ಕೊಡದೆ ವಂಚಿಸಿದ್ದಾರೆ. ಈ ಸಂಬಂಧ ನಿತಿನ್‌ ರಾಜ್‌, ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ವಿಶೇಷ ತಂಡ ರಚಿಸಿಕೊಂಡು, ಆರೋಪಿಗಳನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಐಷಾರಾಮಿ ಜೀವನಕ್ಕಾಗಿ ಈ ರೀತಿಯ ದಂಧೆಯಲ್ಲಿ ತೊಡಗಿದ್ದರು ಎಂಬುದು ಗೊತ್ತಾಗಿದೆ. 48 ಲಕ್ಷ ರೂ. ಪೈಕಿ 33 ಲಕ್ಷ ರೂ. ಅನ್ನು ಬೇರೆ ಬೇರೆ ರಾಜ್ಯಗಳಿಗೆ ಪ್ರವಾಸಕ್ಕೆ ತೆರಳಿ ಮೋಜು-ಮಸ್ತಿ ಮಾಡಿ ಖರ್ಚು ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.



Read more

[wpas_products keywords=”deal of the day sale today offer all”]