Karnataka news paper

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯ ಮತ ಎಣಿಕೆ ಮುಕ್ತಾಯ; ದ.ಕ. ಕ್ಷೇತ್ರದಿಂದ ಡಾ.ರೇಣುಕಾ ಪ್ರಸಾದ್ ಗೆಲುವು!


ಸುಳ್ಯ: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘಕ್ಕೆ ಡಿ.12 ರಂದು ನಡೆದ ಚುನಾವಣೆಯಲ್ಲಿ ದ.ಕ.ಮತ ಕ್ಷೇತ್ರದ ಚುನಾವಣೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್ ಗೆಲುವು ಸಾಧಿಸಿದ್ದಾರೆ.

ಮಂಗಳೂರಿನ ಹಂಪನಕಟ್ಟೆಯ ಎಂಸಿಸಿ ಬ್ಯಾಂಕ್ ನಲ್ಲಿ ನಡೆದ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು ಡಾ.ಕೆ.ವಿ.ರೇಣುಕಾ ಪ್ರಸಾದ್ 1554 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ರಂಗೇರಿದ ಒಕ್ಕಲಿಗರ ಸಂಘದ ಚುನಾವಣೆ; ಬಾಡೂಟ, ಹಣ, ಗಿಫ್ಟ್‌ ಹಂಚಿಕೆಗೆ ಪೈಪೋಟಿ!
ಡಾ.ರೇಣುಕಾ ಪ್ರಸಾದ್ ಅವರಿಗೆ 3295 ಮತ, ಡಾ.ಕೆ.ವಿ.ಚಿದಾನಂದ ಅವರಿಗೆ 1741 ಮತ ಹಾಗೂ ಹೇಮಾನಂದ ಹಲ್ದಡ್ಕ 346 ಮತ ಪಡೆದಿದ್ದಾರೆ. 30 ಮತಗಳು ಅಸಿಂಧುವಾಗಿದೆ.

ಡಾ.ರೇಣುಕಾ ಪ್ರಸಾದ್ ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದು ಭರ್ಜರಿ ಗೆಲುವಿನೊಂದಿಗೆ ಒಕ್ಕಲಿಗರ ಸಂಘದ ನಿರ್ದೇಶಕನಾಗಿ ಆಯ್ಕೆಯಾಗಿದ್ದಾರೆ.



Read more