Karnataka news paper

ಮತ್ತಷ್ಟು ದುರ್ಬಲವಾದ ಓಮಿಕ್ರಾನ್: ಹೊಸ ಪ್ರಕರಣಕ್ಕಿಂತ ಎರಡು ಪಟ್ಟು ಹೆಚ್ಚು ಮಂದಿ ಗುಣಮುಖ


ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಶುಕ್ರವಾರಕ್ಕಿಂತಲೂ ಕಡಿಮೆ ಕೋವಿಡ್ 19 ಪ್ರಕರಣಗಳು ಶನಿವಾರ ದಾಖಲಾಗಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 12009 ಹೊಸ ಕೋವಿಡ್ ಪ್ರಕರಗಳು ದಾಖಲಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 3887733ಕ್ಕೆ ತಲುಪಿದೆ. 25854 ಮಂದಿ ಕೋವಿಡ್ ಸೋಂಕಿತರು ಶನಿವಾರ ಗುಣಮುಖರಾಗಿದ್ದಾರೆ. ಈವರೆಗೂ 3739197 ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ ಮುಂದಾಲೋಚನೆ: ಹಾವೇರಿ ಜಿಲ್ಲೆಯಲ್ಲಿ ಮಕ್ಕಳಿಗಿಲ್ಲ ಕೋವಿಡ್‌ ಭಯ

ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,09,203ಕ್ಕೆ ಇಳಿಕೆಯಾಗಿರುವುದು ನೆಮ್ಮದಿಯ ಸಂಗತಿ. 1,32,796 ಮಂದಿಯಲ್ಲಿ ಶನಿವಾರ ಪರೀಕ್ಷೆಗೆ ಒಳಪಡಿಸಲಾಗಿದೆ. ದೈನಂದಿನ ಪಾಸಿಟಿವಿಟಿ ದರ ಶೇ 9.04ಕ್ಕೆ ಇಳಿಕೆಯಾಗಿದೆ. ಹಾಗೆಯೇ 50 ಮಂದಿ ಸೋಂಕಿತರು ಶನಿವಾರ ಮೃತಪಟ್ಟಿದ್ದಾರೆ. ಒಟ್ಟು ಮರಣ ಸಂಖ್ಯೆ 39300ಕ್ಕೆ ಏರಿಕೆಯಾಗಿದೆ. ಮರಣದ ಶೇಕಡಾವಾರು ಪ್ರಮಾಣ ಶೇ 0.41ರಷ್ಟಿದೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.

ಬೆಂಗಳೂರು ವರದಿ
ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇನ್ನಷ್ಟು ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 4,532 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನು 15 ಮಂದಿ ಸೋಂಕಿತರು ಮೃತಪಟ್ಟಿದ್ದು, 10,420 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ 45,742 ಸಕ್ರಿಯ ಪ್ರಕರಣಗಳಿವೆ. ಶುಕ್ರವಾರ 6,039 ಪ್ರಕರಣಗಳು ದಾಖಲಾಗಿದ್ದವು.
ಸ್ಯಾಂಡಲ್‌ವುಡ್‌ಗೆ ಶುಭ ಶುಕ್ರವಾರ: ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನಕ್ಕೆ ಒಪ್ಪಿಗೆ ಕೊಟ್ಟ ಸರ್ಕಾರ

ಜಿಲ್ಲಾವಾರು ಪ್ರಕರಣಗಳು
ಬೆಂಗಳೂರು ಹೊರತುಪಡಿಸಿದರೆ ಸತತ ಎರಡನೇ ದಿನ ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದು ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ. ಕುಂದಾನಗರಿಯಲ್ಲಿ 1028 ಮಂದಿಗೆ ಸೋಂಕು ತಗುಲಿದೆ. ಬಾಗಲಕೋಟೆ 122, ಬಳ್ಳಾರಿ 481, ಬೆಂಗಳೂರು ಗ್ರಾಮಾಂತರ 129, ಬೀದರ್ 93, ಚಾಮರಾಜನಗರ 186, ಚಿಕ್ಕಬಳ್ಳಾಪುರ 99, ಚಿಕ್ಕಮಗಳೂರು 66, ಚಿತ್ರದುರ್ಗ 436, ದಕ್ಷಿಣ ಕನ್ನಡ 252, ದಾವಣಗೆರೆ 82, ಧಾರವಾಡ 303, ಗದಗ 61, ಹಾಸನ 413, ಹಾವೇರಿ 171, ಕಲಬುರಗಿ 297, ಕೊಡಗು 373, ಕೋಲಾರ 132, ಕೊಪ್ಪಳ 129, ಮಂಡ್ಯ 275, ಮೈಸೂರು 763, ರಾಯಚೂರು 150, ರಾಮನಗರ 98, ಶಿವಮೊಗ್ಗ 419, ತುಮಕೂರು 342, ಉಡುಪಿ 202, ಉತ್ತರ ಕನ್ನಡ 217, ವಿಜಯಪುರ 126 ಹಾಗೂ ಯಾದಗಿರಿಯಲ್ಲಿ 32 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.



Read more

[wpas_products keywords=”deal of the day sale today offer all”]