Karnataka news paper

ವಿಟ್ಲ ಕೊರಗಜ್ಜ ದೈವದ ಅವಹೇಳನ : ಅಜ್ಜನ ವೇಷ ಧರಿಸಿದ್ದ ಪ್ರಮುಖ ಆರೋಪಿ ಕೇರಳದಲ್ಲಿ ಸೆರೆ


ವಿಟ್ಲ: ಸಾಲೆತ್ತೂರು ಅಗರಿ ಎಂಬಲ್ಲಿನ ಮದುವೆ ಮನೆಯ ಔತಣಕೂಟದಲ್ಲಿ ವರ ಕೊರಗಜ್ಜ ದೈವವನ್ನು ಹೋಲುವ ರೀತಿಯ ವೇಷ ಭೂಷಣದ ಧರಿಸಿ ದೈವ ನಿಂದನೆ,ಜಾತಿ ನಿಂದನೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ.

ಕಾಸರಗೋಡು ಜಿಲ್ಲೆಯ ಉಪ್ಪಳ ಅಗರ್ತಿಮೂಲ ಉಮರುಲ್ ಬಾಷಿತ್ (28) ಬಂಧಿತ. ಈತ ತನ್ನ ಮದುವೆ ದಿನ ವಧುವಿನ ಮನೆಗೆ ಔತಣಕ್ಕೆ ಬಂದ ಸಂದರ್ಭ ಮೋಜಿನ ಭರದಲ್ಲಿ ಕೊರಗಜ್ಜ ದೈವವನ್ನು ಹೋಲುವ ವೇಷ ಧರಿಸಿದ್ದ. ವಿಟ್ಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಪುತ್ತೂರಿನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ಕುಂಬಳೆ ಮಂಗಳಪಾಡಿ ನಿವಾಸಿ ಅಹ್ಮದ್ ಮುಜಿತಾಬು (27), ಗಾಳಿಯಡ್ಕ ಬಾಯಾರುಪದವು ನಿವಾಸಿ ಮೊಯ್ದೀನ್ ಮುನಿಶ್ (19) ಎಂಬವರನ್ಬು ಮೊದಲು ಬಂಧಿಸಲಾಗಿತ್ತು. ಪ್ರಮುಖ ಆರೋಪಿಯ ನಿರಿಕ್ಣಣಾ ಜಾಮೀನು ಅರ್ಜಿಯನ್ನು ಇತ್ತೀಚಿಗೆ ನ್ಯಾಯಾಲಯ ವಜಾಗೊಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕೊರಗಜ್ಜ ದೈವಕ್ಕೆ ಅಪಚಾರ: ಇಬ್ಬರು ಆರೋಪಿಗಳ ಬಂಧನ, ವಿಟ್ಲ ಬಂದ್‌!

ಕೊಳ್ನಾಡು ಗ್ರಾಮದ ಅಬ್ದುಲ್ ಅಝೀಝ್ ಅವರ ಪುತ್ರಿಯ ಮದುವೆ ದಿನ ಮುಸ್ಲಿಂ ಸಂಪ್ರದಾಯದಂತೆ ವರ ಸ್ನೇಹಿತರ ಜತೆಗೆ ವಧುವಿನ ಮನೆಗೆ ಆಗಮಿಸಿದ್ದು,ತಡರಾತ್ರಿ ಆಗಮಿಸಿದ ವರನ ಬಳಗ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದರು. ಈ ಸಂದರ್ಭ ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜ ದೈವವನ್ನು ಹೋಲುವ ವೇಷ ಭೂಷಣ ಧರಿಸಿದ ಮದುಮಗ ತನ್ನ ಗೆಳೆಯರ ಜತೆ ಡ್ಯಾನ್ಸ್ ಮಾಡಿದ್ದ.

ಈ ದೃಶ್ಯವನ್ನು ವರನ ಕಡೆಯವರೇ ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ಕಡಂಬು ನಿವಾಸಿ ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಚೇತನ ಎಂಬವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ ಪ್ರಕಾರ ಪ್ರಕರಣ ದಾಖಲಾಗಿತ್ತು.



Read more

[wpas_products keywords=”deal of the day sale today offer all”]