Karnataka news paper

ಕುಂದಾಪುರ: ಹಿಂದೂ ಸಂಘಟನೆ ಪ್ರತಿಭಟನೆ ನಂತರ ಹಿಜಾಬ್ ಧರಿಸಿ ಬಂದವರಿಗೆ ಪ್ರವೇಶ ನಿರಾಕರಿಸಿದ ಕಾಲೇಜ್ ಪ್ರಿನ್ಸಿಪಾಲ್!


The New Indian Express

ಉಡುಪಿ: ತರಗತಿಯೊಳಗೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದರ  ವಿರುದ್ಧ ಹಿಂದೂ ಸಂಘಟನೆಯೊಂದಕ್ಕೆ ಸೇರಿದ್ದ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ನಂತರ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ, ಬುರ್ಕಾ ಮತ್ತು ಹಿಜಾಬ್ ಧರಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರಿಗೆ  ಪ್ರವೇಶವನ್ನು ನಿರಾಕರಿಸಿದೆ.

ಕಾಲೇಜ್ ಪ್ರಿನ್ಸಿಪಾಲ್ ರಾಮಕೃಷ್ಣ ಸ್ವತ: ಕಾಲೇಜಿನ ಗೇಟಿನ ಮುಂದೆ ನಿಂತು, ವಿದ್ಯಾರ್ಥಿನಿಯರನ್ನು ತಡೆದರು ಮತ್ತು ತರಗತಿಯೊಳಗೆ ಹಿಜಾಬ್ ಧರಿಸುವ ಉದ್ದೇಶ ಹೊಂದಿದ್ದರೆ ತರಗತಿಗೆ ಹಾಜರಾಗದಂತೆ ಅವರಿಗೆ ತಿಳಿಸಿದರು. ಆದಾಗ್ಯೂ, ಪ್ರಾಂಶುಪಾಲರ ವಿರುದ್ಧವೇ ತಿರುಗಿಬಿದ್ದ ವಿದ್ಯಾರ್ಥಿನಿಯರು, ಪರೀಕ್ಷೆಗೆ ಕೇವಲ ಎರಡು ತಿಂಗಳು ಉಳಿದಿರುವಾಗ ತರಗತಿಗೆ ಹಾಜರಾಗಲು ನಿರಾಕರಿಸುವ ಮೂಲಕ ತಮ್ಮ ಭವಿಷ್ಯವನ್ನು ಪರೀಕ್ಷೆಗೆ ವೊಡ್ಡಲಾಗಿದೆ, ಪ್ರಾಂಶುಪಾಲರು ತಮ್ಮ ಶಿಕ್ಷಣ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಉಡುಪಿಯಲ್ಲಿ ಹಿಜಾಬ್ ವಿವಾದ: ಕೇಸರಿ ಶಾಲು ಧರಿಸಿ ಕಾಲೇಜ್ ಗೆ ಬಂದ ಹಿಂದೂ ವಿದ್ಯಾರ್ಥಿಗಳು

ಶಿಕ್ಷಣ ಹಕ್ಕನ್ನು ನಿರಾಕರಿಸುತ್ತಿಲ್ಲ, ಆದರೆ, ಕಾಲೇಜ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಕುಂದಾಪುರ ಶಾಸಕ ಹಾಲಡಿ ಶ್ರೀನಿವಾಸ ಶೆಟ್ಟಿ ಅವರ ನಿರ್ದೇಶನದಂತೆ ತಾವು ಕ್ರಮ ಕೈಗೊಂಡಿರುವುದಾಗಿ ಪ್ರಿನ್ಸಿಪಾಲರಾದ ರಾಮಕೃಷ್ಣ ವಿದ್ಯಾರ್ಥಿನಿಯರಿಗೆ ಹೇಳಿದರು. ಸೂಕ್ತ ಸಮವಸ್ತ್ರ ಹೊರತುಪಡಿಸಿ, ಬೇರೆ ಇನ್ನಿತರ ಯಾವುದೇ ಸಾರ್ಟ್ ಧರಿಸುವುದಕ್ಕೆ ಅವಕಾಶ ನೀಡದಂತೆ ಶೆಟ್ಟಿ ನಿರ್ದೇಶಿಸಿರುವುದಾಗಿ ಪ್ರಿನ್ಸಿಪಾಲರು ಹೇಳಿದರು. 

ಈ ಮಧ್ಯೆ ಗುರುವಾರದಿಂದ ತರಗತಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸದಂತೆ ಶಾಸಕರು ಹೇಳಿದ ನಂತರ, ಬುಧವಾರ ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಇಂದು ಕೇಸರಿ ಶಾಲು ಧರಿಸಿರಲಿಲ್ಲ.



Read more

[wpas_products keywords=”deal of the day”]