Karnataka news paper

ಎಸಿಪಿ ಕಿಶೋರ್‌ ಭರಣಿ ಕ್ಷಮೆಯಾಚನೆಗೆ ಆಗ್ರಹ: ಬೆಂಗಳೂರಿನ ಬೆಳ್ಳಂದೂರು ಪೊಲೀಸ್‌ ಠಾಣೆ ಎದುರು ಎಎಪಿ ಪ್ರತಿಭಟನೆ


ಬೆಂಗಳೂರು: ಆಮ್‌ ಆದ್ಮಿ ಪಾರ್ಟಿಯ ಕಾರ್ಯಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಸಿಪಿ ಕಿಶೋರ್‌ ಭರಣಿ ಕ್ಷಮೆ ಯಾಚನೆ ಮಾಡಬೇಕು ಎಂದು ಆಗ್ರಹಿಸಿ ಎಎಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೆಂಗಳೂರಿನ ಬೆಳ್ಳಂದೂರು ಪೊಲೀಸ್‌ ಸ್ಟೇಷನ್‌ ಎದುರು ಪ್ರತಿಭಟನೆ ನಡೆಸಿದರು.

aap

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ, ‘ರಸ್ತೆ ಗುಂಡಿಗೆ ಬಲಿಯಾದ ಶಿಕ್ಷಕಿ ಶರ್ಮಿಳಾ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೊಂಬತ್ತಿ ಹಿಡಿದು ಮೆರವಣಿಗೆ ಸಾಗುತ್ತಿದ್ದ ಎಎಪಿ ಕಾರ್ಯಕರ್ತರನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದರು. ಈ ವೇಳೆ ಎಸಿಪಿ ಕಿಶೋರ್‌ ಭರಣಿಯವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿದ್ದಾರೆ. ಇದನ್ನು ಖಂಡಿಸಿ ನಾವು ಗುರುವಾರ ಬೆಳಗ್ಗೆಯಿಂದ ಧರಣಿ ನಡೆಸುತ್ತಿದ್ದರೂ ಸ್ಥಳಕ್ಕೆ ಆಗಮಿಸದೇ ತಲೆಮರೆಸಿಕೊಂಡಿದ್ದಾರೆ. ಅವರು ಕ್ಷಮೆ ಕೇಳುವ ತನಕ ಅಹೋರಾತ್ರಿ ಧರಣಿ ಮಾಡಲೂ ನಾವು ಸಿದ್ಧವಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.

ರಸ್ತೆ ಗುಂಡಿಗೆ ಶಿಕ್ಷಕಿ ಬಲಿ : ಬ್ಯಾಡರಹಳ್ಳಿಯಲ್ಲಿ ಎಎಪಿಯಿಂದ ಪ್ರತಿಭಟನೆ, ಮುಖಂಡರ ಬಂಧನ
ಎಎಪಿಯ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಎಚ್‌. ಡಿ. ಬಸವರಾಜು ಮಾತನಾಡಿ, ‘ಆಮ್‌ ಆದ್ಮಿ ಪಾರ್ಟಿಯ ಮುಖಂಡರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸುವ ಪೊಲೀಸರು, ಇನ್ನು ಜನ ಸಾಮಾನ್ಯರ ಜೊತೆಗೆ ಹೇಗೆ ವರ್ತಿಸಬಹುದು ಎಂದು ಯೋಚಿಸಿದರೆ ಆತಂಕವಾಗುತ್ತದೆ. ಕಿಶೋರ್‌ ಭರಣಿಯವರಂತಹ ಕೆಲವು ಪೊಲೀಸರಿಂದ ಇಡೀ ಪೊಲೀಸ್‌ ಇಲಾಖೆಗೆ ಕಳಂಕ ಬರುತ್ತಿದೆ. ಮೊಂಬತ್ತಿ ಹಿಡಿದು ಆತ್ಮಕ್ಕೆ ಶಾಂತಿ ಕೋರಿದ ಎಎಪಿ ಕಾರ್ಯಕರ್ತರನ್ನು ನಿಂದಿಸುವ ಬದಲು ಶರ್ಮಿಳಾ ಸಾವಿಗೆ ಕಾರಣರಾದವರನ್ನು ಬಂಧಿಸಿ ಇದೇ ರೀತಿ ನಿಂದಿಸಲಿ. ರಸ್ತೆ ಕಾಮಗಾರಿಯ ಕೋಟಿಗಟ್ಟಲೆ ಹಣವನ್ನು ಜೇಬಿಗೆ ಇಳಿಸಿಕೊಂಡು ಗುಂಡಿ ಸೃಷ್ಟಿಯಾಗಲು ಕಾರಣರಾದವರ ವಿರುದ್ಧ ದರ್ಪ ತೋರಿಸಲಿ’ ಎಂದು ಸವಾಲು ಹಾಕಿದರು.

ಬೆಂಗಳೂರಿನ ರಸ್ತೆ ಗುಂಡಿಗಳ ವಿರುದ್ಧ ಬೃಹತ್ ಅಭಿಯಾನ: ಎಎಪಿಯಿಂದ ಸಹಿ ಸಂಗ್ರಹ
ಆಮ್‌ ಆದ್ಮಿ ಪಾರ್ಟಿಯ ಮುಖಂಡರಾದ ನಂಜಪ್ಪ ಕಾಳೇಗೌಡ, ಮೋಹನ್‌ ದಾಸರಿ, ಮಂಜುನಾಥ್‌ ಸ್ವಾಮಿ, ಕುಶಲ ಸ್ವಾಮಿ, ಸತೀಶ್ ಗೌಡ, ರಾಜಶೇಖರ್ ದೊಡ್ಡಣ್ಣ, ಚೆನ್ನಪ್ಪ ಗೌಡ. ಜಗದೀಶ್‌ ಸದಂ, ಅಶೋಕ್‌ ಮೃತ್ಯುಂಜಯ, ಸೀತಾರಾಮ್‌ ಗುಂಡಪ್ಪ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಬೆಂಗಳೂರಿನ ಭುವನೇಶ್ವರಿ ನಗರ ಕೊಳಗೇರಿ ನಿವಾಸಿಗಳ ರಕ್ಷಣೆಗೆ ಬದ್ಧ: ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ



Read more

[wpas_products keywords=”deal of the day sale today offer all”]