Karnataka news paper

ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ 4 ಕಲಾಕ್ಷೇತ್ರಗಳ ನಿರ್ಮಾಣಕ್ಕೆ ಚಿಂತನೆ; ಸುನೀಲ್‌ ಕುಮಾರ್


ಬೆಂಗಳೂರು: ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ನಗರದ ಹೊರವಲಯದಲ್ಲಿ ನಾಲ್ಕು ಕಲಾಕ್ಷೇತ್ರಗಳನ್ನು ನಿರ್ಮಿಸಲು ಸರಕಾರ ಚಿಂತನೆ ನಡೆಸಿದ್ದು, ಈಗಾಗಲೇ ಜಾಗ ಹುಡುಕುವ ಕೆಲಸ ನಡೆಯುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್‌ ತಿಳಿಸಿದರು.

ಕಲಾಗ್ರಾಮದಲ್ಲಿ ಬುಧವಾರ ಸುವರ್ಣ ಸಮುಚ್ಚಯದ ನವೀಕೃತಗೊಂಡ ಸಭಾಂಗಣ ಹಾಗೂ ಬೆಂಗಳೂರು ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ 2006ರಲ್ಲಿ ಸಭಾಂಗಣವನ್ನು ಉದ್ಘಾಟಿಸಲಾಗಿತ್ತು. ಈ ಸಭಾಂಗಣವು ಕಳೆದ ಮೂರು ವರ್ಷಗಳ ಹಿಂದೆ ಬೆಂಕಿ ಬಿದ್ದು ಹಾಳಾಗಿತ್ತು. ಕಲೆಗೆ ಒತ್ತು ನೀಡುವ ದೃಷ್ಟಿಯಿಂದ ನವೀಕರಣ ಮಾಡಲಾಗಿದೆ. ರವೀಂದ್ರ ಕಲಾಕ್ಷೇತ್ರ, ಕಲಾಗ್ರಾಮ ಮತ್ತು ಜಿಲ್ಲಾ ರಂಗಮಂದಿರಗಳ ನಿರ್ವಹಣೆ ಕುರಿತು ಸರಕಾರ ಮತ್ತು ಇಲಾಖೆಗೆ ಹಲವು ಸಲಹೆಗಳು ಬಂದಿವೆ. ಈ ಎಲ್ಲಾ ಸಲಹೆಗಳ ಬಗ್ಗೆ ಪರಿಶೀಲಿಸಿ ಯಾವ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ’ ಎಂದು ತಿಳಿಸಿದರು.
ರಸಹೀನ ಕಾರ್ಯಕ್ರಮ ಪ್ರಸಾರ ಮಾಡಿ FM Rainbow ಮುಚ್ಚುವ ಹುನ್ನಾರ: ಸುರೇಶ್‌ಕುಮಾರ್‌ ಆಕ್ಷೇಪ
ಭಾಷೆ ಮತ್ತು ಸಂಸ್ಕೃತಿ ಮುಖ್ಯ:
‘ದೇಶದ ಸಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಇಲಾಖೆ ಕೂಡ ‘ಅಮೃತ ಭಾರತಿಗೆ ಕನ್ನಡದ ಆರತಿ’ ಎಂಬ ಶೀರ್ಷಿಕೆಯಡಿ ವರ್ಷಪೂರ್ತಿ ಕಾರ್ಯಕ್ರಮ ನಡೆಸಲಿದೆ. ಕೊರೊನಾದಿಂದ ಕಾರ್ಯಕ್ರಮ ಆರಂಭಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಕಾರ್ಯಕ್ರಮವನ್ನು ಆರಂಭಿಸಲಾಗುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ಜಂಟಿ ನಿರ್ದೇಶಕ ಬಲವಂತರಾವ್‌ ಪಾಟೀಲ್‌, ನಿರ್ದೇಶಕ ಟಿ.ಎಸ್‌. ನಾಗಾಭರಣ ಉಪಸ್ಥಿತರಿದ್ದರು.
ಮುಂದಿನ 25 ವರ್ಷಗಳ ಅಭಿವೃದ್ಧಿಯ ಗಮನದಲ್ಲಿಟ್ಟು ಬಜೆಟ್ ತಯಾರಿಸಲಾಗಿದೆ; ಸುನೀಲ್‌ ಕುಮಾರ್ ಮೆಚ್ಚುಗೆ
ಕಲಾಕ್ಷೇತ್ರದ ಬಾಡಿಗೆ ಹೆಚ್ಚಳ ಮಾಡದಂತೆ ಒತ್ತಾಯ
ರವೀಂದ್ರ ಕಲಾಕ್ಷೇತ್ರಕ್ಕೆ 5ರಿಂದ 10 ಸಾವಿರ ರೂ. ಬಾಡಿಗೆ ಹೆಚ್ಚಳ ಮಾಡಲಾಗುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಕಲಾವಿದರ ದೃಷ್ಟಿಯಿಂದ ಬಾಡಿಗೆ ಹೆಚ್ಚಳ ಮಾಡದಂತೆ ಕಲಾವಿದರು ಸಚಿವ ಸುನಿಲ್‌ ಕುಮಾರ್‌ ಅವರಿಗೆ ಮನವಿ ಮಾಡಿದರು.

ಪ್ರಸ್ತುತ 3 ಸಾವಿರ ರೂ.ಗಳಿಗೆ ಕಲಾಕ್ಷೇತ್ರವನ್ನು ಕಲಾ ಚಟುವಟಿಕೆಗಳಿಗೆ ನೀಡಲಾಗುತ್ತಿದೆ. ಬಾಡಿಗೆ ಹೆಚ್ಚಳ ಮಾಡಿದರೆ, ಕಲಾವಿದರಿಗೆ ಅನ್ಯಾಯವಾಗಲಿದೆ. ರವೀಂದ್ರ ಕಲಾಕ್ಷೇತ್ರ ಕೇವಲ ಸರಕಾರದಿಂದ ಮಾತ್ರ ನಿರ್ವಹಣೆಯಾಗುತ್ತಿಲ್ಲ. ಶಿವಾಜಿ ಗಣೇಶನ್‌ನಿಂದ ಹಿಡಿದು ಮಹಾನ್‌ ಕಲಾವಿದರ ಕೊಡುಗೆ ಕೂಡ ಸಾಕಷ್ಟಿದೆ ಎಂದು ಹಿರಿಯ ಕಲಾವಿದ ನಾಗರಾಜಮೂರ್ತಿ ಮನವಿ ಮಾಡಿದರು.



Read more

[wpas_products keywords=”deal of the day sale today offer all”]