ಭಾಷೆ ಮತ್ತು ಸಂಸ್ಕೃತಿ ಮುಖ್ಯ:
‘ದೇಶದ ಸಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಇಲಾಖೆ ಕೂಡ ‘ಅಮೃತ ಭಾರತಿಗೆ ಕನ್ನಡದ ಆರತಿ’ ಎಂಬ ಶೀರ್ಷಿಕೆಯಡಿ ವರ್ಷಪೂರ್ತಿ ಕಾರ್ಯಕ್ರಮ ನಡೆಸಲಿದೆ. ಕೊರೊನಾದಿಂದ ಕಾರ್ಯಕ್ರಮ ಆರಂಭಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಕಾರ್ಯಕ್ರಮವನ್ನು ಆರಂಭಿಸಲಾಗುತ್ತದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ನಿರ್ದೇಶಕ ಟಿ.ಎಸ್. ನಾಗಾಭರಣ ಉಪಸ್ಥಿತರಿದ್ದರು.
ಕಲಾಕ್ಷೇತ್ರದ ಬಾಡಿಗೆ ಹೆಚ್ಚಳ ಮಾಡದಂತೆ ಒತ್ತಾಯ
ರವೀಂದ್ರ ಕಲಾಕ್ಷೇತ್ರಕ್ಕೆ 5ರಿಂದ 10 ಸಾವಿರ ರೂ. ಬಾಡಿಗೆ ಹೆಚ್ಚಳ ಮಾಡಲಾಗುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಕಲಾವಿದರ ದೃಷ್ಟಿಯಿಂದ ಬಾಡಿಗೆ ಹೆಚ್ಚಳ ಮಾಡದಂತೆ ಕಲಾವಿದರು ಸಚಿವ ಸುನಿಲ್ ಕುಮಾರ್ ಅವರಿಗೆ ಮನವಿ ಮಾಡಿದರು.
ಪ್ರಸ್ತುತ 3 ಸಾವಿರ ರೂ.ಗಳಿಗೆ ಕಲಾಕ್ಷೇತ್ರವನ್ನು ಕಲಾ ಚಟುವಟಿಕೆಗಳಿಗೆ ನೀಡಲಾಗುತ್ತಿದೆ. ಬಾಡಿಗೆ ಹೆಚ್ಚಳ ಮಾಡಿದರೆ, ಕಲಾವಿದರಿಗೆ ಅನ್ಯಾಯವಾಗಲಿದೆ. ರವೀಂದ್ರ ಕಲಾಕ್ಷೇತ್ರ ಕೇವಲ ಸರಕಾರದಿಂದ ಮಾತ್ರ ನಿರ್ವಹಣೆಯಾಗುತ್ತಿಲ್ಲ. ಶಿವಾಜಿ ಗಣೇಶನ್ನಿಂದ ಹಿಡಿದು ಮಹಾನ್ ಕಲಾವಿದರ ಕೊಡುಗೆ ಕೂಡ ಸಾಕಷ್ಟಿದೆ ಎಂದು ಹಿರಿಯ ಕಲಾವಿದ ನಾಗರಾಜಮೂರ್ತಿ ಮನವಿ ಮಾಡಿದರು.
Read more
[wpas_products keywords=”deal of the day sale today offer all”]