ಇದನ್ನು ಕಾಲೇಜು ಆಡಳಿತ ಮಂಡಳಿ, ಪೋಷಕರು, ಸ್ಥಳೀಯ ನಾಯಕರು ತಳಮಟ್ಟದಿಂದಲೇ ಬಗೆಹರಿಸಬೇಕು. ಸದ್ಯದ ಮಾತುಕತೆಗಳು ಫಲಪ್ರದವಾದಂತೆ ಕಾಣುತ್ತಿಲ್ಲ. ವಿದ್ಯಾರ್ಥಿಗಳು ಸಾಂವಿಧಾನಿಕ ಹಕ್ಕಿನ ಪಟ್ಟು ಹಿಡಿದರೆ, ಕಾಲೇಜು ತನ್ನ ನಿಯಮ ಹೇಳುತ್ತಿದೆ. ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯ ಹಾಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು. ಇದೇ ವೇಳೆ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಮಾಝ್ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದ ಖಾದರ್, ಕಾನೂನು ಕೈಗೆತ್ತಿಕೊಂಡ ದುಷ್ಕರ್ಮಿಗಳ ವಿರುದ್ಧ ಸರಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಪ್ರಾರ್ಥನೆ ನಡೆಸಿದ ಬಗ್ಗೆ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಎಸ್ಡಿಪಿಐ ಕಾರ್ಯಕರ್ತರು ಹಲ್ಲೆ ನಡೆಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಮೊಬೈಲ್ ಮೆಸೇಜ್ ವಿಷಯದಲ್ಲೂ ಹಲ್ಲೆಯಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ತಾಳ್ಮೆಯನ್ನು ದೌರ್ಬಲ್ಯ ಎಂದು ಭಾವಿಸಬಾರದು. ನಮ್ಮವರು ಹಲ್ಲೆ ಮಾಡಿದರೆ ನಮಗೂ ಅವರಿಗೂ ವ್ಯತ್ಯಾಸ ಇರುವುದಿಲ್ಲ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಕ್ರಮ ಕೈಗೊಳ್ಳಲು ಇಲಾಖೆ ಇದೆ. ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದರು.
ಮುಖಂಡರಾದ ಮಮತಾ ಡಿ.ಎಸ್. ಗಟ್ಟಿ, ಮುಹಮ್ಮದ್ ಮೋನು, ಸಂತೋಷ್ ಕುಮಾರ್ ಶೆಟ್ಟಿ, ಪದ್ಮನಾಭ ನರಿಂಗಾನ, ಅಹ್ಮದ್ ಬಾವ, ಸುರೇಶ್ ಭಟ್ನಗರ, ಟಿ.ಕೆ. ಸುಧೀರ್, ಹಬೀಬುಲ್ಲಾ, ರೋಹಿತ್ ಉಳ್ಳಾಲ್ ಉಪಸ್ಥಿತರಿದ್ದರು.
ಮಗಳೂ ಹಿಜಾಬ್ ಹಾಕುತ್ತಾಳೆ
ನನ್ನ ಮಗಳು ಹಗಲು ಮಾತ್ರವಲ್ಲ, ರಾತ್ರಿ ಮಲಗುವಾಗಲೂ ಹಿಜಾಬ್ ಹಾಕುತ್ತಾಳೆ. ಅದು ಆಕೆಯ ಅಭ್ಯಾಸ. ನನ್ನ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಕರೆದಾಗಲೂ ಹಿಜಾಬ್ ಇಲ್ಲದೆ ಬರುವುದೇ ಇಲ್ಲ ಎಂದಿದ್ದಳು. ಆಕೆಯನ್ನು ಹಿಜಾಬ್ ಧರಿಸಲು ಅವಕಾಶವಿರುವ ಶಾಲೆಗೆ ಸೇರಿಸಿದ್ದೇನೆ. ಬೇರೆ ಶಾಲೆಗೆ ಸೇರಿಸಿ ಫೈಟಿಂಗ್ ಮಾಡಲು ಹೋಗಿಲ್ಲ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
Read more
[wpas_products keywords=”deal of the day sale today offer all”]