‘ಸತನ್ ಲಾಲ್ ಅವರ ಜಮೀನಿನಲ್ಲಿ ಹತ್ತಿ ಕಾರ್ಖಾನೆ ಮತ್ತು ಹಿಟ್ಟಿನ ಗಿರಣಿಯ ಉದ್ಘಾಟನೆ ಸಮಾರಂಭವಿತ್ತು. ಅಲ್ಲಿಗೆ ಬಂದ ಕೆಲವು ದುಷ್ಕರ್ಮಿಗಳು ಗುಂಡು ಹಾರಿಸಿ ಅವರನ್ನು ಕೊಂದಿದ್ದಾರೆ’ ಎಂದು ಲಾಲ್ ಅವರ ಸ್ನೇಹಿತ ಮುಖಿ ಅನಿಲ್ ಕುಮಾರ್ ತಿಳಿಸಿದ್ದಾರೆ.
ಸಮುದಾಯದ ಆಧ್ಯಾತ್ಮಿಕ ನಾಯಕ ಸಾಯಿನ್ ಸದ್ರಾಮ್ ಸಾಹೇಬ್ ಅವರನ್ನು ಸ್ವಾಗತಿಸಲು ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ ಎಂದೇ ಆರಂಭದಲ್ಲಿ ಭಾವಿಸಿದ್ದೆವು ಎಂದು ಅವರು ಹೇಳಿದ್ದಾರೆ.
‘ಅವರು ನನ್ನನ್ನು ಕೊಲ್ಲುವುದಾಗಿ, ನನ್ನ ಕಣ್ಣುಗಳನ್ನು ಕೀಳುವುದಾಗಿ ಮತ್ತು ಕೈಗಳು ಹಾಗೂ ಕಾಲುಗಳನ್ನು ಕತ್ತರಿಸುವುದಾಗಿ ಬೆದರಿಸುತ್ತಿದ್ದಾರೆ. ನನ್ನನ್ನು ಪಾಕಿಸ್ತಾನ ತೊರೆಯುವಂತೆ ಸೂಚಿಸುತ್ತಿದ್ದಾರೆ. ನಾನು ಈ ದೇಶಕ್ಕೆ ಸೇರಿದವನು. ನಾನು ಇಲ್ಲಿಯೇ ಸಾಯುತ್ತೇನೆಯೇ ಹೊರತು ಶರಣಾಗುವುದಿಲ್ಲ’ ಎಂದು ಕೆಲವು ತಿಂಗಳ ಹಿಂದೆ ಸತನ್ ಲಾಲ್ ಅವರು ಹೇಳುವ ವಿಡಿಯೋ ವೈರಲ್ ಆಗಿತ್ತು.
‘ರಸ್ತೆ ಬದಿಯ ಜಮೀನು ನನಗೆ ಸೇರಿದೆ. ನಾನೇಕೆ ಅದನ್ನು ಬಿಟ್ಟುಕೊಡಬೇಕು?’ ಎಂದು ಪ್ರಶ್ನಿಸಿದ್ದ ಅವರು, ತಮಗೆ ಕೊಲೆ ಬೆದರಿಕೆ ಹಾಕಿರುವವರ ಹೆಸರನ್ನು ಉಲ್ಲೇಖಿಸಿ, ತಮಗೆ ನ್ಯಾಯ ಒದಗಿಸಬೇಕು ಎಂದು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಮತ್ತು ಇತರೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಸತನ್ ಲಾಲ್ ಅವರ ಹತ್ಯೆ ಘಟನೆಯಿಂದ ಆಕ್ರೋಶಗೊಂಡ ಭಾರಿ ಸಂಖ್ಯೆಯ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಗೆ ತಡೆಯೊಡ್ಡಿದರು. ಕೊಲೆಗಡುಕರನ್ನು ಬಂಧಿಸುವಂತೆ ಪೊಲೀಸ್ ಠಾಣೆ ಎದುರು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಬಳಿಕ ಪ್ರಮುಖ ಆರೋಪಿ ಬಚಲ್ ದಹಾರ್ ಹಾಗೂ ಆತನ ಸಹಚರರನ್ನು ಪೊಲೀಸರು ಬಂಧಿಸಿದರು.
ಎರಡು ಎಕರೆ ಭೂಮಿ ವಿವಾದ ಸೃಷ್ಟಿಸಿತ್ತು. ಸುಮಾರು ಎಂಟು ವರ್ಷಗಳ ಹಿಂದೆ ಸತನ್ ಲಾಲ್ ಅವರ ಹತ್ಯೆ ಪ್ರಯತ್ನ ನಡೆದಿತ್ತು. ಅವರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದರು. ಕೆಲವು ತಿಂಗಳ ಹಿಂದೆ ಸ್ಥಳೀಯ ಪತ್ರಕರ್ತರು ತಮ್ಮ ಮೇಲೆ ದಾಳಿ ನಡೆಸಿದ್ದಾಗಿ ಅವರು ಆರೋಪಿಸಿದ್ದರು.
ಜನವರಿ ಆರಂಭದಲ್ಲಿ ಸಿಂಧ್ ಪ್ರಾಂತ್ಯದಲ್ಲಿನ ಅನಜ್ ಮಂಡಿಯಲ್ಲಿ ಅಪರಿಚಿತ ದುಷ್ಕರ್ಮಿಗಳು 44 ವರ್ಷದ ಹಿಂದೂ ಉದ್ಯಮಿ ಸುನಿಲ್ ಕುಮಾರ್ ಅವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದರು.
Read more
[wpas_products keywords=”deal of the day sale today offer all”]