Karnataka news paper

ಸಮಯ ಪ್ರಜ್ಞೆ ಮೆರೆದು ರೋಗಿಯ ಜೀವ ಉಳಿಸಿದ ಟ್ರಾಫಿಕ್ ಪೊಲೀಸ್ ಕಾಶಪ್ಪ


ಬೆಂಗಳೂರು: ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಕಾಶಪ್ಪ ಕಲ್ಲೂರು ಅವರು ಸಮಯ ಪ್ರಜ್ಞೆ ಮೆರೆದು ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಅವರ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ವ್ಯಕ್ತಿಯೊಬ್ಬರನ್ನು ಆಂಬುಲೆನ್ಸ್ ಮೂಲಕ ಗ್ಲೋಬಲ್ ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು.  ವಿಧಾನಸೌಧದ ಸಿಐಡಿ ಕಚೇರಿ ಬಳಿ ರೋಗಿಯಿದ್ದ ಆಂಬುಲೆನ್ಸ್‌ನ ಟಯರ್ ಪಂಕ್ಚರ್ ಆಗಿತ್ತು. ರೋಗಿಯ ಪತ್ನಿ ಹಾಗೂ ಮಗಳು ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ನೆರವಿಗೆ ಧಾವಿಸಿರಲಿಲ್ಲ. ಸುಮಾರು 10 ಕ್ಕೂ ಹೆಚ್ಚು ಆಂಬುಲೆನ್ಸ್‌ಗಳಿಗೆ ಕರೆಮಾಡಿದರೂ ಪ್ರಯೋಜನವಾಗಿರಲಿಲ್ಲ.

ರಸ್ತೆ ಬದಿಯಲ್ಲಿ ನಿಂತ ತಾಯಿ ಹಾಗೂ ಮಗಳು ಪರದಾಡುತ್ತಿರುವುದನ್ನು ಕಂಡ ಕಾಸಪ್ಪ ಕೂಡ ಆಂಬುಲೆನ್ಸ್‌ಗೆ ಕರೆಮಾಡಿದ್ದಾರೆ. ಸುಮಾರು ಹೊತ್ತು ಕಾದರೂ ಆಂಬುಲೆನ್ಸ್ ಬಂದಿಲ್ಲ.  ಹೀಗಾಗಿ ಪಂಕ್ಚರ್ ಆಗಿದ್ದ ಚಕ್ರವನ್ನು ಅವರೇ ಬದಲಿಸಿ ಆಂಬುಲೆನ್ಸ್ ಹೊರಡಲು ನೆರವಾಗಿದ್ದಾರೆ. 

ಕಾಸಪ್ಪ ಅವರ ಕಾರ್ಯದಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯ ಜೀವ ಉಳಿದಿದೆ.



Read more from source

[wpas_products keywords=”deal of the day sale today kitchen”]