‘ಹರಿಕಥಾಮೃತಸಾರ’ದಂತಹ ಮೇರುಕೃತಿಯನ್ನು ನೀಡಿದ ದಾಸಶ್ರೇಷ್ಟರಲ್ಲೊಬ್ಬರಾದ ಶ್ರೀ ಜಗನ್ನಾಥದಾಸರ ಕುರಿತಾದ ಸಿನಿಮಾದ ಚಿತ್ರೀಕರಣವನ್ನು ಕಳೆದ ವರ್ಷಾರಂಭದಲ್ಲಿ ಆರಂಭಿಸಿದ್ದು ಮಂತ್ರಾಲಯದಲ್ಲಿ, ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ, ಮಂತ್ರಾಲಯಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರತೀರ್ಥರ ಆಶೀರ್ವಚನ ಮತ್ತು ಕ್ಯಾಮರಾ ಚಾಲನೆಯೊಂದಿಗೆ ನಡೆದಿತ್ತು. ಈ ವರ್ಷದ ಆರಂಭದಲ್ಲಿ ಚಿತ್ರದ ಯಶಸ್ಸಿನ ಸಮಾರಂಭ ಬೆಂಗಳೂರಿನ ಉತ್ತರಾಧಿಮಠದಲ್ಲಿ ಶ್ರೀ ಜಯತೀರ್ಥರ ವೃಂದಾವನವಿರುವ ಸನ್ನಿಧಾನದಲ್ಲಿ ನಡೆದಿದೆ.
ಐವತ್ತು ದಿನ ಪೂರೈಸಿದ ನಂತರವೂ ‘ಶ್ರೀ ಜಗನ್ನಾಥದಾಸರು’ ಸಿನಿಮಾ ಬೆಂಗಳೂರಿನ ಐದು ಮಲ್ಟಿಪ್ಲೆಕ್ಸ್ಗಳಲ್ಲಿ ಮತ್ತು ರಾಜ್ಯದ ಹಲವು ಕಡೆ ಇನ್ನೂ ಪ್ರದರ್ಶನ ಕಾಣುತ್ತಿದೆ. ಇದೇ ರೀತಿ ಚಿತ್ರದ ನೂರನೇ ದಿನದ ಸಮಾರಂಭದಲ್ಲಿ ತಾವೆಲ್ಲಾ ಹೀಗೆ ಪಾಲ್ಗೊಳ್ಳೋಣ ಎಂದು ಬಂದಿದ್ದ ಅತಿಥಿಗಳಾಗಿ ಬಂದಿದ್ದ ವಿದ್ವಾಂಸರಾದ ಶ್ರೀ ಸತ್ಯಧ್ಯಾನಾಚಾರ್ ಕಟ್ಟಿ ಅವರು ಹೇಳಿದರು. ಬಸವನಗುಡಿಯ ಶಾಸಕರಾದ ರವಿಸುಬ್ರಮಣ್ಯ, ಗಂಗಾವತಿ ಶಾಸಕರಾದ ಪರಣ್ಣ ಮುನವಳ್ಳಿ, ಅದಮ್ಯ ಚೇತನದ ತೇಜಸ್ವಿನಿ ಅನಂತಕುಮಾರ್, ಗಂಗಾವತಿ ಪ್ರಾಣೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಶ್ರೀ ಉಮೇಶ್ ಬಣಕಾರ್, ಪ್ರಾಧ್ಯಾಪಕ ಡಾ. ವಾಸುದೇವ ಅಗ್ನಿಹೋತ್ರಿ ಮತ್ತಿತರರು ಆಗಮಿಸಿದ್ದರು.
ಪ್ರೇಕ್ಷಕರ ಮನಮುಟ್ಟುವ ‘ಶ್ರೀ ಜಗನ್ನಾಥ ದಾಸರು’ ಚಿತ್ರ; ‘ಶ್ರೀ ಜಗನ್ನಾಥ ದಾಸರು’ ಸಿನಿಮಾ ವಿಮರ್ಶೆ
‘ನಮ್ಮ ಸಂಸ್ಕೃಂತಿ, ಪರಂಪರೆ, ಮೌಲ್ಯಗಳ ಕುರಿತಂತೆ ಇಂದಿನ ಪೀಳಿಗೆಗೆ ಅರಿವನ್ನುಂಟು ಮಾಡುವಲ್ಲಿ ಶ್ರೀ ಜಗನ್ನಾಥದಾಸರ ಚಿತ್ರ ನಿರ್ಮಾಣವಾದದ್ದು, ಯಶಸ್ವಿಯಾದದ್ದು ಅತ್ಯಂತ ಮಹತ್ವ ಪಡೆದಿದೆ. ಇಂತಹ ಚಿತ್ರಗಳ ಪರಂಪರೆ, ಯಶಸ್ಸು ಮುಂದುವರೆದು, ಈ ನಾಡಿನ ಮಹನೀಯರ ಬಗ್ಗೆ ಎಲ್ಲರೂ ತಿಳಿಯುವಂತಾಗಲಿ’ ಎಂದು ಅತಿಥಿಗಳು ಹೇಳಿದರು.
‘ಶ್ರೀ ಜಗನ್ನಾಥ ದಾಸರು’ ಚಿತ್ರದ ಆಡಿಯೋ ರಿಲೀಸ್ ಮಾಡಿದ ಪೇಜಾವರ ಶ್ರೀಗಳು
ಇನ್ನು ಚಿತ್ರತಂಡದ ಎಲ್ಲರನ್ನೂ ಸನ್ಮಾನಿಸಲಾಯಿತು. ಹಾಗೂ ತಂಡದ ಪರವಾಗಿ ನಿರ್ಮಾಪಕರು ಮತ್ತು ವಿಜಯದಾಸರ ಪಾತ್ರಧಾರಿಯೂ ಆಗಿರುವ ತ್ರಿವಿಕ್ರಮಜೋಷಿ ಮಾತನಾಡಿ, ತಮ್ಮ ಚಿತ್ರಕ್ಕೆ ಸಿಕ್ಕ ಪ್ರೇಕ್ಷಕರ, ಗುರುಗಳ, ವಿದ್ವಾಂಸರ, ಹರಿದಾಸ ಭಜನಾ ಮಂಡಳಿಗಳ ಬೆಂಬಲವನ್ನು ಸ್ಮರಿಸಿದರು. ನಿರ್ದೇಶಕ ಮಧುಸೂದನ ಹವಲ್ದಾರ್ ಎಲ್ಲರಿಗೂ ವಂದನೆ ಅರ್ಪಿಸಿದರು.
Read more
[wpas_products keywords=”deal of the day party wear dress for women stylish indian”]