Karnataka news paper

ಮೂರನೇ ಅಲೆ ಆರ್ಭಟಕ್ಕೆ ಅಂಕುಶ: ಕರ್ನಾಟಕದಲ್ಲಿ ಕೋವಿಡ್ ಪ್ರಕರಣದಲ್ಲಿ ಗಣನೀಯ ಕುಸಿತ


ಬೆಂಗಳೂರು: ಕರ್ನಾಟಕದಲ್ಲಿ ವಾರಾಂತ್ಯದ ಕರ್ಫ್ಯೂ, ನೈಟ್ ಕರ್ಫ್ಯೂ ಸೇರಿದಂತೆ ವಿವಿಧ ಕೋವಿಡ್ ನಿಯಂತ್ರಣ ಕ್ರಮಗಳನ್ನು ಸಡಿಲಗೊಳಿಸಿದ ಬೆನ್ನಲ್ಲೇ ಹೊಸ ಕೊರೊನಾ ವೈರಸ್ ಪ್ರಕರಣಗಳಲ್ಲಿನ ಇಳಿಕೆಯ ಖುಷಿ ಸಿಕ್ಕಿದೆ.

ರಾಜ್ಯದಲ್ಲಿ ಶನಿವಾರಕ್ಕೆ ಹೋಲಿಸಿದರೆ ಭಾನುವಾರ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಸಾಕಷ್ಟು ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 28,264 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಶನಿವಾರ 33,337 ಮಂದಿ ಸೋಂಕಿತರು ಪತ್ತೆಯಾಗಿದ್ದರು. ಕೋವಿಡ್ ಸೋಂಕಿನ ಪಾಸಿಟಿವಿಟಿ ದರ ಶೇ 16.38ಕ್ಕೆ ಇಳಿಕೆಯಾಗಿದೆ.
ಬಾರು, ಪಬ್ಬು, ಕ್ಲಬ್ಬುಗಳಿಗೆ ಮಬ್ಬು : ಕೋವಿಡ್‌ನಿಂದಾಗಿ ಗ್ರಾಹಕರ ಕೊರತೆ, ಭಾರೀ ನಷ್ಟ!
ರಾಜ್ಯದಲ್ಲಿ ದಾಖಲಾದ ಹೊಸ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ ಕೊಂಚ ಅಧಿಕವಿದೆ. ಇದರಿಂದ ಒಟ್ಟಾರೆ ಸಕ್ರಿಯ ಪ್ರಕರಣಗಳಲ್ಲಿ ಇನ್ನಷ್ಟು ಕುಸಿತ ಉಂಟಾಗಿದೆ. ಕಳೆದ 24 ಗಂಟೆಯಲ್ಲಿ 29,244 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,52,084ಕ್ಕೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 1.32 ಲಕ್ಷ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.

ಭಾನುವಾರ 68 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ ಬೆಂಗಳೂರಿನಲ್ಲಿ 11,938 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 1,72,483 ಮಂದಿಯನ್ನು ಭಾನುವಾರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಇದುವರೆಗೂ 3785295 ಮಂದಿಗೆ ಸೋಂಕು ದೃಢಪಟ್ಟಿದೆ. 3495239 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಹಾಗೆಯೇ ಒಟ್ಟು 38942 ಸಾವುಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ರಾಜ್ಯದಲ್ಲಿ ಹೊಸ ಕೇಸ್‌ಗಳಿಗಿಂತ ದುಪ್ಪಟ್ಟು ಮಂದಿ ಗುಣಮುಖ: ಸಕ್ರಿಯ ಪ್ರಕರಣಗಳಲ್ಲಿ ಮತ್ತಷ್ಟು ಇಳಿಕೆ
ಇತರೆ ಜಿಲ್ಲೆಗಳಲ್ಲಿ ಕೋವಿಡ್ ಸೋಂಕು
ಮೈಸೂರು 2322, ಧಾರವಾಡ 1356, ತುಮಕೂರು 1165,ಪ್ರಕರಣಗಳೊಂದಿಗೆ ಸಾವಿರಕ್ಕೂ ಅಧಿಕ ಕೇಸ್‌ಗಳನ್ನು ಕಂಡ ಜಿಲ್ಲೆಗಳಾಗಿವೆ. ಹಾಸನ 859, ಮಂಡ್ಯ953, ಬೆಳಗಾವಿ 619, ಬಾಗಲಕೋಟೆ 338, ಬೆಂಗಳೂರು ಗ್ರಾಮಾಂತರ 453, ಬೀದರ್ 111, ಚಾಮರಾಜ ನಗರ 554, ಚಿಕ್ಕಬಳ್ಳಾಪುರ 334, ಚಿಕ್ಕಮಗಳೂರು 201, ಚಿತ್ರದುರ್ಗ 360, ದಕ್ಷಿಣ ಕನ್ನಡ 419, ದಾವಣಗೆರೆ 239, ಗದಗ 146, ಹಾವೇರಿ 409, ಕಲಬುರಗಿ 564, ಕೊಡಗು 633, ಕೋಲಾರ 422, ಕೊಪ್ಪಳ 321, ರಾಯಚೂರು 306, ರಾಮನಗರ 246, ಶಿವಮೊಗ್ಗ 530, ಉಡುಪಿ 441, ಉತ್ತರ ಕನ್ನಡ 780, ವಿಜಯಪುರ 159 ಹಾಗೂ ಯಾದಗಿರಿಯಲ್ಲಿ 122 ಪ್ರಕರಣಗಳು ಭಾನುವಾರ ದೃಢಪಟ್ಟಿವೆ.

ಕೆಲವು ದಿನಗಳ ಹಿಂದಷ್ಟೇ 50 ಸಾವಿರದ ಗಡಿ ಮುಟ್ಟಿದ್ದ ರಾಜ್ಯದ ಕೋವಿಡ್ 19 ಪ್ರಕರಣಗಳಲ್ಲಿ, ಇಳಿಮುಖವಾಗುತ್ತಿರುವುದು ನೆಮ್ಮದಿಯ ಸಂಗತಿಯಾಗಿದೆ. ಆದರೆ ದೇಶದ ಕೆಲವು ನಗರಗಳಲ್ಲಿ ಓಮಿಕ್ರಾನ್ ಸೋಂಕಿನ ಪ್ರಕರಣಗಳಲ್ಲಿ ಕಡಿಮೆಯಾಗುತ್ತಿದ್ದರೂ, ಅಪಾಯದಿಂದ ದೇಶ ಮುಕ್ತವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಮತ್ತು ಓಮಿಕ್ರಾನ್ ಅಧಿಕ ಪ್ರಸರಣ ಸಾಮರ್ಥ್ಯ ಹೊಂದಿರುವುದರಿಂದ ಅಪಾಯದ ಸ್ಥಿತಿ ಮರುಕಳಿಸಬಹುದು ಎಂದು ಅವರು ಹೇಳಿದ್ದಾರೆ.



Read more

[wpas_products keywords=”deal of the day sale today offer all”]