Karnataka news paper

ಹೈಟೆಕ್‌ ಅಡಕೆ ತೋಟ ಸೃಷ್ಟಿಸಿದ ಕಡಬದ ಎಂಜಿನಿಯರ್‌ : ಬೆಟ್ಟದ ಮೇಲೆ ಟ್ಯಾಂಕ್‌, ಹನಿ ನೀರಾವರಿ ಪದ್ದತಿ


ಕೆ.ಎಸ್‌.ಬಾಲಕೃಷ್ಣ ಕೊೖಲ, ಕಡಬ

ಕೃಷಿ ಮತ್ತು ತೋಟಗಾರಿಕೆಯಲ್ಲಿಉನ್ನತ ತಂತ್ರಜ್ಞಾನ ಬಳಕೆಯಾಗುತ್ತಿವುದನ್ನು ಗಮನಿಸಿದ್ದೇವೆ. ಆದರೆ, ಇಲ್ಲೊಬ್ಬ ಯುವಕ ತಂತ್ರಜ್ಞಾನದೊಂದಿಗೆ ತಂತ್ರಗಳನ್ನು ಬಳಸಿ ಹೈಟೆಕ್‌ ಅಡಕೆ ತೋಟಕ್ಕೆ ಅಡಿಪಾಯ ಹಾಕಿದ್ದಾರೆ. ಪುತ್ತೂರು ತಾಲೂಕು ರಾಮಕುಂಜದ ಹಳೆನೇರೆಂಕಿ ಗ್ರಾಮದ ಇಜ್ಜಾವು ಶಿವಪ್ರಸಾದ್‌ ಆಚಾರ್ಯರು ಮೂಲತಃ ಮೆಕ್ಯಾನಿಕಲ್‌ ಎಂಜಿನಿಯರ್‌. ಅವರೀಗ ಕೃಷಿಯತ್ತ ಆಸಕ್ತರಾಗಿದ್ದು ವಿನೂತನ ರೀತಿಯಲ್ಲಿ ಅಡಕೆ ತೋಟವನ್ನು ರೂಪಿಸಲು ಮುಂದಾಗಿದ್ದಾರೆ.

ನಿವೃತ್ತ ಉಪನ್ಯಾಸಕ, ಜೋತಿಷಿ ಮಾಧವ ಆಚಾರ್ಯರ ಪುತ್ರರಾಗಿರುವ ಶಿವಪ್ರಸಾದ್‌ ಅವರು ಹಿರಿಯರಿಂದ ಬಂದ ಭೂಮಿಯಲ್ಲಿ ಕೃಷಿ ಮಾಡುವ ಜತೆಗೆ ಗುಡ್ಡ, ಇಳಿಜಾರಿನಲ್ಲಿರುವ ಸುಮಾರು 13 ಎಕರೆ ಭೂಮಿಯನ್ನೂ ಅಡಕೆ ತೋಟಕ್ಕೆ ಬಳಸಿಕೊಂಡಿದ್ದಾರೆ. ಗುಡ್ಡ ಭಾಗವನ್ನು ಸ್ವಲ್ಪ ಸಮತಟ್ಟು ಮಾಡಿ ಇಳಿಜಾರನ್ನೂ ಉಳಿಸಿಕೊಂಡಿರುವ ಅವರು ಅಲ್ಲಿಅತ್ಯಂತ ವೈಜ್ಞಾನಿಕವಾಗಿ ಗುಂಡಿಗಳನ್ನು ತೋಡಿ ಅಡಕೆ ಸಸಿ ನೆಟ್ಟಿದ್ದಾರೆ.

ಏನೇನು ಮಾಡಿದ್ದಾರೆ?

– ಕಟ್ಟಡ ನಿರ್ಮಾಣ ಕಾರ್ಯದಲ್ಲೂ ತೊಡಗಿರುವ ಶಿವ ಪ್ರಸಾದ್‌ ಅವರಲ್ಲಿ ಸ್ವಂತ ಹಿಟಾಚಿ, ಜೆಸಿಬಿ ಇದೆ. ಕೊರೊನಾ ಸಂದರ್ಭ ಇವುಗಳಿಗೆ ಬೇಡಿಕೆ ಇರಲಿಲ್ಲ. ಆಗ ಗುಡ್ಡದಲ್ಲೂ ಕೃಷಿ ಮಾಡಲು ನಿರ್ಧರಿಸಿ ಅಗೆಯುವ ಕೆಲಸ ಶುರು ಮಾಡಿದರು. ಸುಮಾರು ಆರು ತಿಂಗಳು ಗುಡ್ಡ ಅಗೆದು, ಸುಂದರ ತೋಟಕ್ಕೆ ಅಣಿ ಮಾಡಲಾಯಿತು.

ಅಡಕೆ ತೋಟದಲ್ಲಿ ಈಗ ಡ್ರೋಣ್ ಹಾರಾಟ; ಬೆಳೆ ಸಂರಕ್ಷಣೆಗೆ ಮಾಡಿದ ಹೊಸ ಪ್ರಯೋಗ ಯಶಸ್ವಿ!

– ಸುಮಾರು 2.5 ಅಡಿ ಅಗಲ, ಎರಡು ಅಡಿ ಆಳದ ಗುಂಡಿಗಳನ್ನು ಅತ್ಯಂತ ವ್ಯವಸ್ಥಿತ ಮತ್ತು ಲೆಕ್ಕಾಚಾರದಲ್ಲಿ ಮಾಡಿದ್ದಾರೆ.

– ಆರು ಗಿಡಗಳ ಮಧ್ಯೆ ಒಂದು ರಸ್ತೆ ನಿರ್ಮಿಸಲಾಗಿದೆ. ಭವಿಷ್ಯದಲ್ಲಿ ಮದ್ದು ಸಿಂಪಡಣೆ, ಫಸಲು ಸಾಗಾಟಕ್ಕೆ ಉಪಯುಕ್ತ.

– ಮಂಗಳ ಹಾಗೂ ರತ್ನಗಿರಿ ತಳಿಯ ಸುಮಾರು ನಾಲ್ಕು ಸಾವಿರ ಅಡಕೆ ಸಸಿಗಳನ್ನು ನೆಡಲಾಗಿದೆ.

– ಗುಡ್ಡದ ತುದಿಯಲ್ಲಿ 30 ಫೀಟ್‌ ಸುತ್ತಳತೆ ಹಾಗೂ 25 ಫೀಟ್‌ ಆಳದ ಟ್ಯಾಂಕ್‌ ನಿರ್ಮಿಸಿ, ಎರಡು ಕೊಳವೆ ಬಾವಿಯಿಂದ ನೀರು ಪೂರೈಕೆ.

– ಮೇಲಿನ ಟ್ಯಾಂಕ್‌ನಿಂದ ಎಲ್ಲ ಗಿಡಗಳಿಗೆ ಹನಿ ನೀರಾವರಿ ಮೂಲಕ ನೀರು. ಟ್ಯಾಂಕ್‌ 20 ಸಾವಿರ ಗಿಡಗಳಿಗೆ ನೀರು ಕೊಡುವ ಸಾಮರ್ಥ್ಯ ಹೊಂದಿದೆ.

– ಹನಿ ನೀರಾವರಿ ಯೋಜನೆಯಲ್ಲಿ ವೆಂಚರ್‌ ಅಳವಡಿಸಲಾಗಿದ್ದು, ಅದರಲ್ಲಿ ರಸಗೊಬ್ಬರವನ್ನು ದ್ರವ ರೂಪದಲ್ಲಿ ಪೂರೈಸಲು ವ್ಯವಸ್ಥೆ ಕಲ್ಪಿಸಲಾಗಿದೆ.

– ತೋಟದ ನಿರ್ಮಾಣಕ್ಕೆ ಸುಮಾರು 20 ಲಕ್ಷ ರೂ. ಖರ್ಚು ಮಾಡಲಾಗಿದೆ.



Read more

[wpas_products keywords=”deal of the day sale today offer all”]